ತಿಪಟೂರು: ಅಯ್ಯ! ನಾವೇನು ತಪ್ಪು ಮಾಡಿದ್ದೇವೆ ಅಂಥಾ ನಮಗೆ ಈ ಶಿಕ್ಷೆ.. ನಿತ್ಯಾ ನಡೆಯುವ ಈ ಹಿಂಸೆ, ದೌರ್ಜನ್ಯ, ಕೊಲೆಯಿಂದ ನಮ್ಮ ವಂಶ ನಿರ್ವಂಶವಾಗುತ್ತಿದೆ.. ಸಾಕು ನಿಲ್ಲಿಸಿ..
ಅಯ್ಯೋ, ಮನುಷ್ಯರೇ! ನಿಮ್ಮ ಕೈ ಮುಗಿದು ಕೇಳಿ ಕೊಳ್ಳುತ್ತೇವೆ. ನಮ್ಮ ಕೈ, ಕಾಲು, ಶಿರ, ಹೊಟ್ಟೆಯನ್ನು ಕತ್ತರಿಸಬೇಡಿ.. ನಿಮ್ಮ ಪ್ರತಿಯೊಂದು ಏಟು ನಮ್ಮ ಜೀವ ತೆಗೆಯುವಷ್ಟು ನೋಯುತ್ತದೆ.. ನಮ್ಮ ನೋವು ಕೇಳಿಸಿದರೂ ಕೇಳದಂತೆ ಇರುವ ನೀವೇಷ್ಟು ನಿಷ್ಕರಣಿಗಳು..
ಅಣ್ಣಂದಿರಾ! ನಮಗೂ ನಿಮ್ಮಂಥೆ ಜೀವವಿದೆ, ನಾವೂ ಉಸಿರಾಡುತ್ತೇವೆ. ಈ ಲೋಕದ ಒಳ್ಳೆಯದು, ಕೆಟ್ಟದ್ದು ತಿಳಿಯುತ್ತದೆ. ಹತ್ತಾರು ನೂರಾರು ವರ್ಷದಿಂದ ನಾವು ನಿಮಗೆ ಹಗಲಿರುಳೆನ್ನದೇ, ಮಳೆ, ಬಿಸಿಲು, ಚಳಿ ಎನ್ನದೇ ನಿರಂತರ ಸೇವೆ ಮಾಡಿದ್ದೇವೆ, ಮಾಡುತ್ತಿದ್ದೇವೆ. ಆ ಕೃತಜ್ಞತೆ ಮರೆತು ನೀವು ನಮ್ಮನ್ನು ನಮ್ಮ ವಂಶವನ್ನು ನಿರ್ಧಾಕ್ಷಿಣ್ಯವಾಗಿ ಕತ್ತರಿಸಿ, ಕತ್ತರಿಸಿ ಹಾಕುತ್ತಿದ್ದೀರಿ, ನಿಮಗೆ ಕರುಣೆ ಇಲ್ಲವೇ. ನಮ್ಮ ನೋವು ಆಕ್ರಂದನ ನಿಮಗೆ ಕೇಳುವುದಿಲ್ಲವೇ. ನಿಮಗೆ ಹೃದಯವಿಲ್ಲವೇ..
ನೀವು ನಿತ್ಯಾ ನಮ್ಮ ನೂರಾರು ಸಾವಿರಾರು ಸಹೋದರ ಸಹೋದರಿಯರನ್ನ ಕೊಲೆ ಮಾಡುತ್ತಿದ್ದೀರಿ. ನಿಮಗೆ ನಮ್ಮನ್ನು ನಾಶ ಮಾಡಲು ಅಧಿಕಾರ ಕೊಟ್ಟವರು ಯಾರು?. ನಿತ್ಯಾ ನಡೆಯುವ ಕಗ್ಗೊಲೆ ನಿಲ್ಲವುದು ಯಾವಾಗ. ನಮ್ಮ ಅಂತ್ಯ ಬಯಸಿದ ನಿಮ್ಮ ಅಂತ್ಯವಾಗುವುದಿಲ್ಲವೇ?.
ನಾವು ಇಲ್ಲದಿದ್ದರೆ, ನೀವೂ ಒಂದು ಅರೇ ಕ್ಷಣ ಈ ಭೂಮಿ ಮೇಲೆ ಬದುಕಿ ಉಳಿಯಲಾರಿರಿ. ನಾವಿಲ್ಲದಿದ್ದರೆ ಯಾವ ಜೀವ ರಾಶಿಯೂ ಬದುಕಿ ಉಳಿಯಲು ಸಾಧ್ಯವೇ ಇಲ್ಲ. ಎಲ್ಲವೂ ಬಟಬಯಲಾಗಿ ಮರಳು ಭೂಮಿಯಾಗುತ್ತದೆ. ಮರುಭೂಮಿಯಲ್ಲಿ ಯಾವ ಪ್ರಾಣಿ ತಾನೇ ಬದುಕಿ ಉಳಿಯಲು ಸಾಧ್ಯ?
ಬನ್ನೀ, ನಿಮ್ಮಂಥೆ ನಮ್ಮನ್ನು ಪ್ರೀತಿಸಿ. ನಮ್ಮೊಂದಿಗೆ ಮಾತನಾಡಿ, ನಮ್ಮ ಆಸೆ, ಬಯಕೆ, ಕನಸುಗಳನ್ನು ಕೇಳಿ. ಕೇವಲ ಒಂದು ಮೌನ ಪ್ರೀತಿ ತೋರಿಸಿರಿ ಸಾಕು ನಾವು ಮನದಲ್ಲೇ ಪುಳಕಗೊಳ್ಳುತ್ತೇವೆ. ಈ ಭೂಮಿಗೆ ನಿಮಗಿಂಥ ಮೊದಲು ಬಂದವರು ನಾವು. ನಿಮ್ಮ ಜೀವವಿರುವುದು ನಮ್ಮ ಕೈಯಲ್ಲಿ. ನಿಮ್ಮಂಥೆ ನಾವು ಉಸಿರಾಡುತ್ತೇವೆ, ನಮ್ಮಲ್ಲೂ ರಕ್ತದ ಮಾದರಿ ಜೀವ ರಸ ಹರಿಯುತ್ತದೆ. ನಾವು ನಿಮ್ಮಂಥೆ ಆಹಾರ ಸೇವಿಸುತ್ತೇವೆ. ಕಷ್ಟ ಬಂದಾಗ ದುಃಖಿಸುತ್ತೇವೆ. ಸಂತೋಷವಾದಾಗ ನಗುತ್ತೇವೆ. ಆದರೆ ಎಂದಿಗೂ ನಮ್ಮಿಂದ ಬೇರೆಯವರಿಗೆ ತೊಂದರೆ ಕೊಟ್ಟಿಲ್ಲ. ನೀವೇಕೆ ವಿನಾ ಕಾರಣ ನಮಗೆ ತೊಂದರೆ ಕೊಡುತ್ತೀರಿ? ನಮ್ಮ ರಕ್ಷಣೆಗಾಗಿ ಯಾರನ್ನು ಮೊರೆಯಿಡಬೇಕು.
ನಿಮಗಾದರೆ, ನೀವೇ ನಿಮ್ಮ ಸ್ವಾರ್ಥಕ್ಕಾಗಿ ಮಾಡಿಕೊಂಡ ಸಂವಿಧಾನ ಬದ್ಧ ಹಕ್ಕುಗಳಿವೆ. ಮಾನವ ಹಕ್ಕು ಎಂದು ನೀವು ಸಣ್ಣ ಪುಟ್ಟ ವಿಚಾರಕ್ಕೆಲ್ಲಾ ರಂಪ ಮಾಡುತ್ತೀರಿ. ಮೂಕ ಜೀವಿಗಳಿಗಾಗಿ ಪ್ರಾಣಿ ದಯೆ ಸಂಘಗಳಿವೆ. ಜಗತ್ತಿನ ಪ್ರತಿಯೊಂದು ವಿಚಾರಕ್ಕೂ ಹೋರಾಟಗಳು ನಡೆಯುತ್ತೀವೆ. ನೂರಾರು ವರ್ಷಗಳ ಹಿಂದೆ ಕಟ್ಟಿ ಹಾಳಾದ ಕಟ್ಟಡಗಳು, ಸ್ಮಾರಕಗಳ ರಕ್ಷಣೆಗಾಗಿ ನೀವೇ ನಾನಾ ಇಲಾಖೆಗಳನ್ನು ಮಾಡಿಕೊಂಡು ದುರ್ವರ್ತನೆ ಮಾಡುವವರ ವಿರುದ್ಧ ದಾವೆ ಹೂಡಿ ಶಿಕ್ಷಿಸುತ್ತಿದ್ದೀರಿ. ನಿರ್ಜಿವವಾದ ಕಲ್ಲು ಬಂಡೆಗಳನ್ನು ರಕ್ಷಿಸುತ್ತೀರಿ. ನಮ್ಮ ಮೇಲೆ ನಿಮಗೇಕೆ ವೈರತ್ವ. ನೀವೇಕೆ ನಮ್ಮ ಬಗ್ಗೆ ಚಿಂತಿಸುತ್ತಿಲ್ಲ.
ನಾವಿಲ್ಲದೇ ಇದ್ದರೆ ಒಂದು ಹನಿ ನೀರೂ ಈ ಭೂಮಿ ಮೇಲೆ ಬೀಳಲು ಸಾಧ್ಯವಿಲ್ಲ. ನಾವಿಲ್ಲದಿದ್ದರೆ ಒಂದು ಯಾವ ಜೀವಿಯೂ ಉಸಿರಾಡಲು ಸಾಧ್ಯವೂ ಇಲ್ಲ. ನಾವಿಲ್ಲದಿದ್ದರೆ ಈ ಭೂಮಿಯ ಮೇಲೆ ಯಾವ ಸೌಂದರ್ಯವೂ ಉಳಿಯುವುದಿಲ್ಲ. ಇಡೀ ಸಕಲ ಜೀವ ರಾಶಿಗಳಿಗೆ ಅತ್ಯಾಮೂಲ್ಯವಾದ ನಮ್ಮ ಬದುಕಿಗೇ ಕೊಡಲಿ ಹಾಕುತ್ತೀರಿ ಏಕೆ? ನಿತ್ಯಾ ನಮ್ಮ ಜನರನ್ನು ಕೊಲೆ ಮಾಡಿ ಜೀವಂತ ಸಾಯಿಸುತ್ತೀರಿ?..
ಎಲೇ, ಮಾನವರೇ! ನಾವು ಯಾರೆಂದು ನಿಮಗೆ ತಿಳಿಯಲಿಲ್ಲವೇ. ಹೇಗೆ ತಾನೇ ತಿಳಿದೀತು. ಮಾಡಿದ ಉಪಕಾರವನ್ನು ಸ್ಮರಿಸದೇ ಅಪಕಾರ ಮಾಡುವ ಪ್ರವೃತ್ತಿಯವರಾದ ನಿಮಗೆ ನಮ್ಮ ನೆನಪಾದರೂ ಹೇಗಾದೀತು? ನಿಮ್ಮ ದೇಹದ ಜೀವ ಚೈತನ್ಯಕ್ಕೆ ಕಾರಣರಾದ ನಾವೇ ನಿರ್ಭಾಗ್ಯ ಮರಗಳು. ದೌರ್ಭಾಗ್ಯ ನೊಂದ ಗಿಡಗಳು.
ಬದುಕು ಎಂಥಾ ನಾಟಕ ನೋಡಿ! ಈ ಜಗತ್ತು ಎಷ್ಟು ಸ್ವಾರ್ಥ, ಅವಕಾಶವಾದಿತನದಿಂದ ತುಂಬಿದೆ. ತಮ್ಮ ಪಾಪದ ಕೊಡವನ್ನು ಭರ್ತಿ ಮಾಡಿಕೊಂಡ ಎಷ್ಟೋ ಮಂದಿ ತಾವು ಈ ಭೂಮಿ ಮೇಲೆ ಶಾಶ್ವತ ಎಂಬಂತೆ ದರ್ಪ ತೋರಿದ ಅರೆಗಳಿಗೆಯಲ್ಲಿ ತಮ್ಮ ತೊಗಲನ್ನು ಕಳಚಿದ್ದಾರೆ. ಈ ಸತ್ಯ ನೋಡಿಯೂ ಬುದ್ಧಿ ಕಲಿಯದ ಮತ್ತಷ್ಟು ಅವರ ಉತ್ತರಾಧಿಕಾರಿಗಳು ಅವರ ದಾರಿಯನ್ನೇ ಹಿಡಿದಿದ್ದಾರೆ. ಇದೆಂಥಾ ಮಾಯೆ?
ಈ ಸ್ವಾರ್ಥ ಜನರು ನಮ್ಮ ಸಂರಕ್ಷಣೆಗಾಗಿ ಪ್ರತಿವರ್ಷ ವಿಶ್ವಪರಿಸರ ಸಂರಕ್ಷಣೆ ದಿನ ಎಂದು ಆಚರಿಸುತ್ತಾರೆ. ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ, ತಮ್ಮ ಮನೆ ಮಠ ಗಟ್ಟಿ ಮಾಡಿಕೊಳ್ಳುತ್ತಾರೆ. ಅಂದೇ ನಮ್ಮ ಸಾವಿರಾರು ಕುಟುಂಬಗಳ ಮಾರಣ ಹೋಮವಾದರೂ ಅತ್ತ ತಿರುಗಿಯೂ ನೋಡಲ್ಲ. ಅಯ್ಯಾ! ನಮ್ಮ ಉಳಿಸಿ, ಕಾಪಾಡಿ ಎಂಬ ನೋವಿನ ಆಕ್ರಂದನ ಸಹ ಅವರಿಗೆ ಕೇಳುವುದಿಲ್ಲ. ಇದೆಂಥಾ ವಿಚಿತ್ರ.
ಅದ್ಯಾವ ಪರಿಸರ ಇಲಾಖೆ, ಅದ್ಯಾವ ಅರಣ್ಯ ಇಲಾಖೆ, ಅದ್ಯಾವ ಮಾಲಿನ್ಯ ನಿಯಂತ್ರಣ ಮಂಡಳಿ..ಅದೆಲ್ಲಿಯ ಪರಿಸರ ವಾದಿಗಳು. ಇವರಿಗ್ಯಾರಿಗೂ ನಮ್ಮ ಚೀರಾಟ, ಗೋಳಾಟ, ನರಳಾಟ ಕೇಳಿಲ್ಲವೇ? ಇವರ ಕಿವಿಗಳಿಗೆ ಕಾದ ಕಂಚನ್ನು ಬಿಡಲಾಗಿದೆಯೇ. ಕಣ್ಣುಗಳಿಗೆ ಕಾರದ ಪುಡಿ ಹಾಕಿದ್ದಾರೆಯೇ. ಮನಸ್ಸು ಕಲ್ಲಾಗಿದೆಯೇ..
ಮಳೆಗಾಲದಲ್ಲಿ ಅದ್ಯಾರೋ ಆಗಾಗ ಅಲ್ಲಲ್ಲಿ ಸಾವಿರ ಎರಡು ಸಾವಿರ ಗಿಡಗಳನ್ನು ನೆಡುತ್ತಾರೆ. ಮತ್ತೇಲ್ಲೋ ಲಕ್ಷಾಂತರ ಮರಗಳನ್ನು ಕಡಿಯುತ್ತಾರೆ. ಬರ ಬರುತ್ತಾ ನಮ್ಮ ವಂಶ ಬರಿದಾಗುತ್ತಿದೆ. ನೂರಾರು ವರ್ಷಗಳ ನಮ್ಮ ಬದುಕು ಗಳಿಗೆಯಲ್ಲಿ ಬೂದಿಯಾಗುತ್ತದೆ. ಈಗ ನೆಟ್ಟ ಕೆಲವೇ ಗಿಡಗಳು ಬೆಳೆಯಲು ಇನ್ನೂ ಹತ್ತಾರು ವರ್ಷಗಳು ಬೇಕು. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎನ್ನುವ ಗಾದೆಯಂತಾಗಿದೆ ನಮ್ಮ ಬದುಕು.
ಉದಾಹರಣೆಗೆ ಬನ್ನಿ ತಿಪಟೂರಿಗೆ. ಈ ತಾಲೂಕಿನಲ್ಲಿ ಸುಮಾರು ೬೫ಕ್ಕೂ ಹೆಚ್ಚು ತೆಂಗಿನ ಒಣ ಪುಡಿ ತಯಾರಿಕ(ಚಿತೆಗಳಿವೆ) ಘಟಕಗಳಿವೆ. ೫೦ಕ್ಕೂ ಹೆಚ್ಚು (ಕಸಾಯಿಖಾನೆಗಳಿವೆ) ಸಾಮಿಲ್ಗಳಿವೆ. ನಮ್ಮ ಸಹೋದರ ಸಹೋದರಯರನ್ನ ಕತ್ತರಿಸಿ ಕೊಲ್ಲುವ ನೂರಾರು (ಮರ ಕೊಯ್ಯುವವರು) ಕೊಲೆಗಡುಕರಿದ್ದಾರೆ. ನಿತ್ಯಾ ಸುಮಾರು ೨೦೦ ಹೆಚ್ಚು ಮರಗಳನ್ನು ಕತ್ತರಿಸುತ್ತಾರೆ.
ಇಲ್ಲಿಯೂ ಅರಣ್ಯ ಇಲಾಖೆಯಿದೆ. ಪರಿಸರ ವಾದಿಗಳಿದ್ದಾರೆ. ಹೃದಯವಂತರಿದ್ದಾರೆ. ಧರ್ಮ ರಕ್ಷಣೆಯ ಸ್ವಾಮಿಜಿಗಳಿದ್ದಾರೆ. ಗುರು ಹಿರಿಯರಿದ್ದಾರೆ. ಆದರೂ ನಿತ್ಯಾ ನಮ್ಮ ಮಾರಣ ಹೋಮ ನಿರ್ವಿಘ್ನವಾಗಿ ನಡೆಯುತ್ತಲೇ ಇರುತ್ತದೆ. ಆದರೆ ಯಾರೂ ನಮ್ಮನ್ನು ರಕ್ಷಿಸುವುದಿಲ್ಲ. ಅರಣ್ಯ ಇಲಾಖೆಯ ಕಾನೂನಿನಂತೆ ಒಂದು ಮರ ಕತ್ತರಿಸಬೇಕಾದರೂ ಅನುಮತಿ ಪಡೆಯಬೇಕು. ಆದರೆ ಹಾಡು ಹಗಲೇ ರಾಜಾರೋಷವಾಗಿ ನೂರಾರು ಮರಗಳನ್ನು ಕಡಿದು ಕಾರ್ಖಾನೆಗಳಿಗೆ ಸಾಗಿಸಿದರೂ ಕೇಳುವ ಧಾತರಿಲ್ಲ.
ಒಂದು ಅಂದಾಜಿನಂತೆ ದಿನಕ್ಕೆ ೬೦-೭೦ ಕೈಗಾರಿಕಾ ಘಟಕಗಳಿಗೆ ಸುಮಾರು ೨೦೦ ಮರಗಳ ಕಟಾವು ನಡೆಯುತ್ತದೆ. ದಿನಕ್ಕೆ ೨೦೦ ಮರಗಳಾದರೆ, ಆದರೆ ವರ್ಷದ ೩೦೦ ದಿನಕ್ಕೆ ಸುಮಾರು ೬೦ ಸಾವಿರ ಮರಗಳು ಕತ್ತರಿಸಲ್ಪಟ್ಟಿವೆ. ೨೦ ವರ್ಷಕ್ಕೆ ಸುಮಾರು ೧೨ ಲಕ್ಷ ಮರಗಳು ಕತ್ತರಿಸಲ್ಪಟ್ಟಿವೆ. ನಿವೇ ಲೆಕ್ಕ ಹಾಕಿರಿ, ಇಷ್ಟು ಮರಗಳನ್ನು ಪುನಃ ನೆಟ್ಟು ಬೆಳೆಸಲು ಸಾದ್ಯವೇ? ಇದು ಒಂದು ತಾಲೂಕಿನ ಕಥೆಯಾದರೆ ದೇಶದ ಕಥೆ ಕಲ್ಪನೆ ಮಾಡಿಕೊಳ್ಳಲು ಸಾಧ್ಯವಿಲ್ಲ.
ಇಷ್ಟು ಮರಗಳ ನಾಶದಿಂದ ವಾತಾವರಣದಲ್ಲಿ ಎಷ್ಟು ಪ್ರಮಾಣದ ಆಮ್ಲಜನಕ ಕಡಿಮೆಯಾಗಿದೆ. ಇಂಗಾಲದ ಡೈ ಆಕ್ಸೈಡ್ ಎಷ್ಟು ಉತ್ಪತ್ತಿಯಾಗಿದೆ. ಇತರೆ ಆಮ್ಲಯುಕ್ತ ವಸ್ತುಗಳು ಹೆಚ್ಚಾಗಿವೆ. ಭೂಮಿಯ ಸಾರ ಎಷ್ಟು ಕಡಿಮೆಯಾಗಿದೆ. ಮಳೆಯ ಪ್ರಮಾಣ ಏರು ಪೇರಾಗಿದೆ. ಎಷ್ಟು ಪ್ರಮಾಣದಲ್ಲಿ ಪ್ರಾಣಿ, ಪಕ್ಷಿಗಳು ಆಶ್ರಯ ತಪ್ಪಿ ನಾಶಗೊಂಡಿವೆ. ಇದನ್ನು ಯಾರಾದರೂ ಅಂದಾಜು ಮಾಡಿದ್ದಾರೆಯೇ?
ಬೇಕಿಲ್ಲ. ಅದರಿಂದ ಅವರಿಗೇನು ಲಾಭ. ಅವರಿಗೆ ಬೇಕಿರುವುದು ಪಾಪದ ಹಣ. ಅಕ್ರಮವಾಗಲಿ, ಅನ್ಯಾಯವಾಗಲಿ, ಕೊಲೆಯಾಗಲಿ, ತಮ್ಮ ಸ್ವಾರ್ಥದ ಜೇಬು ತುಂಬಿದರೆ ಸಾಕು. ಇದು ಎಲ್ಲಿಯವರೆಗೆ, ಮಾನವನ ಅಂತ್ಯದವರೆಗೆ.
ಸಾಕು ಮಾಡಿ. ಎಲ್ಲದಕ್ಕೂ ಮಿತಿಯಿರುತ್ತದೆ. ನಮ್ಮ ಮೌನ ಆಕ್ರಂದನ ನಿಮ್ಮನ್ನು ಸುಟ್ಟು ಹಾಕೀತು. ಇಡೀ ಮಾನವ ಕುಲಾ ನಾಶ ವಾಗುವ ಮುನ್ನ ಎಚ್ಚೆತ್ತುಕೊಳ್ಳಿ. ನಿಮ್ಮ ಜೀವ ಚೈತನ್ಯವಾಗಿರುವ ನಮ್ಮನ್ನು ಉಳಿಸಿ, ನಾವು ನಿಮ್ಮನ್ನು ಉಳಿಸುತ್ತೇವೆ. ಇನ್ನಾದರೂ ನಮ್ಮ ಜೀವಕ್ಕೆ ಕೊಡಲಿ ಹಾಕ ಬೇಡಿ. ಪರಿ ಪರಿಯಾಗಿ ಕೇಳಿ ಕೊಳ್ಳುತ್ತೇವೆ. ನಮಗೂ ನಿಮ್ಮಂಥೆಯೇ ಜೀವವಿದೆ.
ಅಯ್ಯೋ, ಮನುಷ್ಯರೇ! ನಿಮ್ಮ ಕೈ ಮುಗಿದು ಕೇಳಿ ಕೊಳ್ಳುತ್ತೇವೆ. ನಮ್ಮ ಕೈ, ಕಾಲು, ಶಿರ, ಹೊಟ್ಟೆಯನ್ನು ಕತ್ತರಿಸಬೇಡಿ.. ನಿಮ್ಮ ಪ್ರತಿಯೊಂದು ಏಟು ನಮ್ಮ ಜೀವ ತೆಗೆಯುವಷ್ಟು ನೋಯುತ್ತದೆ.. ನಮ್ಮ ನೋವು ಕೇಳಿಸಿದರೂ ಕೇಳದಂತೆ ಇರುವ ನೀವೇಷ್ಟು ನಿಷ್ಕರಣಿಗಳು..
ಅಣ್ಣಂದಿರಾ! ನಮಗೂ ನಿಮ್ಮಂಥೆ ಜೀವವಿದೆ, ನಾವೂ ಉಸಿರಾಡುತ್ತೇವೆ. ಈ ಲೋಕದ ಒಳ್ಳೆಯದು, ಕೆಟ್ಟದ್ದು ತಿಳಿಯುತ್ತದೆ. ಹತ್ತಾರು ನೂರಾರು ವರ್ಷದಿಂದ ನಾವು ನಿಮಗೆ ಹಗಲಿರುಳೆನ್ನದೇ, ಮಳೆ, ಬಿಸಿಲು, ಚಳಿ ಎನ್ನದೇ ನಿರಂತರ ಸೇವೆ ಮಾಡಿದ್ದೇವೆ, ಮಾಡುತ್ತಿದ್ದೇವೆ. ಆ ಕೃತಜ್ಞತೆ ಮರೆತು ನೀವು ನಮ್ಮನ್ನು ನಮ್ಮ ವಂಶವನ್ನು ನಿರ್ಧಾಕ್ಷಿಣ್ಯವಾಗಿ ಕತ್ತರಿಸಿ, ಕತ್ತರಿಸಿ ಹಾಕುತ್ತಿದ್ದೀರಿ, ನಿಮಗೆ ಕರುಣೆ ಇಲ್ಲವೇ. ನಮ್ಮ ನೋವು ಆಕ್ರಂದನ ನಿಮಗೆ ಕೇಳುವುದಿಲ್ಲವೇ. ನಿಮಗೆ ಹೃದಯವಿಲ್ಲವೇ..
ನೀವು ನಿತ್ಯಾ ನಮ್ಮ ನೂರಾರು ಸಾವಿರಾರು ಸಹೋದರ ಸಹೋದರಿಯರನ್ನ ಕೊಲೆ ಮಾಡುತ್ತಿದ್ದೀರಿ. ನಿಮಗೆ ನಮ್ಮನ್ನು ನಾಶ ಮಾಡಲು ಅಧಿಕಾರ ಕೊಟ್ಟವರು ಯಾರು?. ನಿತ್ಯಾ ನಡೆಯುವ ಕಗ್ಗೊಲೆ ನಿಲ್ಲವುದು ಯಾವಾಗ. ನಮ್ಮ ಅಂತ್ಯ ಬಯಸಿದ ನಿಮ್ಮ ಅಂತ್ಯವಾಗುವುದಿಲ್ಲವೇ?.
ನಾವು ಇಲ್ಲದಿದ್ದರೆ, ನೀವೂ ಒಂದು ಅರೇ ಕ್ಷಣ ಈ ಭೂಮಿ ಮೇಲೆ ಬದುಕಿ ಉಳಿಯಲಾರಿರಿ. ನಾವಿಲ್ಲದಿದ್ದರೆ ಯಾವ ಜೀವ ರಾಶಿಯೂ ಬದುಕಿ ಉಳಿಯಲು ಸಾಧ್ಯವೇ ಇಲ್ಲ. ಎಲ್ಲವೂ ಬಟಬಯಲಾಗಿ ಮರಳು ಭೂಮಿಯಾಗುತ್ತದೆ. ಮರುಭೂಮಿಯಲ್ಲಿ ಯಾವ ಪ್ರಾಣಿ ತಾನೇ ಬದುಕಿ ಉಳಿಯಲು ಸಾಧ್ಯ?
ಬನ್ನೀ, ನಿಮ್ಮಂಥೆ ನಮ್ಮನ್ನು ಪ್ರೀತಿಸಿ. ನಮ್ಮೊಂದಿಗೆ ಮಾತನಾಡಿ, ನಮ್ಮ ಆಸೆ, ಬಯಕೆ, ಕನಸುಗಳನ್ನು ಕೇಳಿ. ಕೇವಲ ಒಂದು ಮೌನ ಪ್ರೀತಿ ತೋರಿಸಿರಿ ಸಾಕು ನಾವು ಮನದಲ್ಲೇ ಪುಳಕಗೊಳ್ಳುತ್ತೇವೆ. ಈ ಭೂಮಿಗೆ ನಿಮಗಿಂಥ ಮೊದಲು ಬಂದವರು ನಾವು. ನಿಮ್ಮ ಜೀವವಿರುವುದು ನಮ್ಮ ಕೈಯಲ್ಲಿ. ನಿಮ್ಮಂಥೆ ನಾವು ಉಸಿರಾಡುತ್ತೇವೆ, ನಮ್ಮಲ್ಲೂ ರಕ್ತದ ಮಾದರಿ ಜೀವ ರಸ ಹರಿಯುತ್ತದೆ. ನಾವು ನಿಮ್ಮಂಥೆ ಆಹಾರ ಸೇವಿಸುತ್ತೇವೆ. ಕಷ್ಟ ಬಂದಾಗ ದುಃಖಿಸುತ್ತೇವೆ. ಸಂತೋಷವಾದಾಗ ನಗುತ್ತೇವೆ. ಆದರೆ ಎಂದಿಗೂ ನಮ್ಮಿಂದ ಬೇರೆಯವರಿಗೆ ತೊಂದರೆ ಕೊಟ್ಟಿಲ್ಲ. ನೀವೇಕೆ ವಿನಾ ಕಾರಣ ನಮಗೆ ತೊಂದರೆ ಕೊಡುತ್ತೀರಿ? ನಮ್ಮ ರಕ್ಷಣೆಗಾಗಿ ಯಾರನ್ನು ಮೊರೆಯಿಡಬೇಕು.
ನಿಮಗಾದರೆ, ನೀವೇ ನಿಮ್ಮ ಸ್ವಾರ್ಥಕ್ಕಾಗಿ ಮಾಡಿಕೊಂಡ ಸಂವಿಧಾನ ಬದ್ಧ ಹಕ್ಕುಗಳಿವೆ. ಮಾನವ ಹಕ್ಕು ಎಂದು ನೀವು ಸಣ್ಣ ಪುಟ್ಟ ವಿಚಾರಕ್ಕೆಲ್ಲಾ ರಂಪ ಮಾಡುತ್ತೀರಿ. ಮೂಕ ಜೀವಿಗಳಿಗಾಗಿ ಪ್ರಾಣಿ ದಯೆ ಸಂಘಗಳಿವೆ. ಜಗತ್ತಿನ ಪ್ರತಿಯೊಂದು ವಿಚಾರಕ್ಕೂ ಹೋರಾಟಗಳು ನಡೆಯುತ್ತೀವೆ. ನೂರಾರು ವರ್ಷಗಳ ಹಿಂದೆ ಕಟ್ಟಿ ಹಾಳಾದ ಕಟ್ಟಡಗಳು, ಸ್ಮಾರಕಗಳ ರಕ್ಷಣೆಗಾಗಿ ನೀವೇ ನಾನಾ ಇಲಾಖೆಗಳನ್ನು ಮಾಡಿಕೊಂಡು ದುರ್ವರ್ತನೆ ಮಾಡುವವರ ವಿರುದ್ಧ ದಾವೆ ಹೂಡಿ ಶಿಕ್ಷಿಸುತ್ತಿದ್ದೀರಿ. ನಿರ್ಜಿವವಾದ ಕಲ್ಲು ಬಂಡೆಗಳನ್ನು ರಕ್ಷಿಸುತ್ತೀರಿ. ನಮ್ಮ ಮೇಲೆ ನಿಮಗೇಕೆ ವೈರತ್ವ. ನೀವೇಕೆ ನಮ್ಮ ಬಗ್ಗೆ ಚಿಂತಿಸುತ್ತಿಲ್ಲ.
ನಾವಿಲ್ಲದೇ ಇದ್ದರೆ ಒಂದು ಹನಿ ನೀರೂ ಈ ಭೂಮಿ ಮೇಲೆ ಬೀಳಲು ಸಾಧ್ಯವಿಲ್ಲ. ನಾವಿಲ್ಲದಿದ್ದರೆ ಒಂದು ಯಾವ ಜೀವಿಯೂ ಉಸಿರಾಡಲು ಸಾಧ್ಯವೂ ಇಲ್ಲ. ನಾವಿಲ್ಲದಿದ್ದರೆ ಈ ಭೂಮಿಯ ಮೇಲೆ ಯಾವ ಸೌಂದರ್ಯವೂ ಉಳಿಯುವುದಿಲ್ಲ. ಇಡೀ ಸಕಲ ಜೀವ ರಾಶಿಗಳಿಗೆ ಅತ್ಯಾಮೂಲ್ಯವಾದ ನಮ್ಮ ಬದುಕಿಗೇ ಕೊಡಲಿ ಹಾಕುತ್ತೀರಿ ಏಕೆ? ನಿತ್ಯಾ ನಮ್ಮ ಜನರನ್ನು ಕೊಲೆ ಮಾಡಿ ಜೀವಂತ ಸಾಯಿಸುತ್ತೀರಿ?..
ಎಲೇ, ಮಾನವರೇ! ನಾವು ಯಾರೆಂದು ನಿಮಗೆ ತಿಳಿಯಲಿಲ್ಲವೇ. ಹೇಗೆ ತಾನೇ ತಿಳಿದೀತು. ಮಾಡಿದ ಉಪಕಾರವನ್ನು ಸ್ಮರಿಸದೇ ಅಪಕಾರ ಮಾಡುವ ಪ್ರವೃತ್ತಿಯವರಾದ ನಿಮಗೆ ನಮ್ಮ ನೆನಪಾದರೂ ಹೇಗಾದೀತು? ನಿಮ್ಮ ದೇಹದ ಜೀವ ಚೈತನ್ಯಕ್ಕೆ ಕಾರಣರಾದ ನಾವೇ ನಿರ್ಭಾಗ್ಯ ಮರಗಳು. ದೌರ್ಭಾಗ್ಯ ನೊಂದ ಗಿಡಗಳು.
ಬದುಕು ಎಂಥಾ ನಾಟಕ ನೋಡಿ! ಈ ಜಗತ್ತು ಎಷ್ಟು ಸ್ವಾರ್ಥ, ಅವಕಾಶವಾದಿತನದಿಂದ ತುಂಬಿದೆ. ತಮ್ಮ ಪಾಪದ ಕೊಡವನ್ನು ಭರ್ತಿ ಮಾಡಿಕೊಂಡ ಎಷ್ಟೋ ಮಂದಿ ತಾವು ಈ ಭೂಮಿ ಮೇಲೆ ಶಾಶ್ವತ ಎಂಬಂತೆ ದರ್ಪ ತೋರಿದ ಅರೆಗಳಿಗೆಯಲ್ಲಿ ತಮ್ಮ ತೊಗಲನ್ನು ಕಳಚಿದ್ದಾರೆ. ಈ ಸತ್ಯ ನೋಡಿಯೂ ಬುದ್ಧಿ ಕಲಿಯದ ಮತ್ತಷ್ಟು ಅವರ ಉತ್ತರಾಧಿಕಾರಿಗಳು ಅವರ ದಾರಿಯನ್ನೇ ಹಿಡಿದಿದ್ದಾರೆ. ಇದೆಂಥಾ ಮಾಯೆ?
ಈ ಸ್ವಾರ್ಥ ಜನರು ನಮ್ಮ ಸಂರಕ್ಷಣೆಗಾಗಿ ಪ್ರತಿವರ್ಷ ವಿಶ್ವಪರಿಸರ ಸಂರಕ್ಷಣೆ ದಿನ ಎಂದು ಆಚರಿಸುತ್ತಾರೆ. ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ, ತಮ್ಮ ಮನೆ ಮಠ ಗಟ್ಟಿ ಮಾಡಿಕೊಳ್ಳುತ್ತಾರೆ. ಅಂದೇ ನಮ್ಮ ಸಾವಿರಾರು ಕುಟುಂಬಗಳ ಮಾರಣ ಹೋಮವಾದರೂ ಅತ್ತ ತಿರುಗಿಯೂ ನೋಡಲ್ಲ. ಅಯ್ಯಾ! ನಮ್ಮ ಉಳಿಸಿ, ಕಾಪಾಡಿ ಎಂಬ ನೋವಿನ ಆಕ್ರಂದನ ಸಹ ಅವರಿಗೆ ಕೇಳುವುದಿಲ್ಲ. ಇದೆಂಥಾ ವಿಚಿತ್ರ.
ಅದ್ಯಾವ ಪರಿಸರ ಇಲಾಖೆ, ಅದ್ಯಾವ ಅರಣ್ಯ ಇಲಾಖೆ, ಅದ್ಯಾವ ಮಾಲಿನ್ಯ ನಿಯಂತ್ರಣ ಮಂಡಳಿ..ಅದೆಲ್ಲಿಯ ಪರಿಸರ ವಾದಿಗಳು. ಇವರಿಗ್ಯಾರಿಗೂ ನಮ್ಮ ಚೀರಾಟ, ಗೋಳಾಟ, ನರಳಾಟ ಕೇಳಿಲ್ಲವೇ? ಇವರ ಕಿವಿಗಳಿಗೆ ಕಾದ ಕಂಚನ್ನು ಬಿಡಲಾಗಿದೆಯೇ. ಕಣ್ಣುಗಳಿಗೆ ಕಾರದ ಪುಡಿ ಹಾಕಿದ್ದಾರೆಯೇ. ಮನಸ್ಸು ಕಲ್ಲಾಗಿದೆಯೇ..
ಮಳೆಗಾಲದಲ್ಲಿ ಅದ್ಯಾರೋ ಆಗಾಗ ಅಲ್ಲಲ್ಲಿ ಸಾವಿರ ಎರಡು ಸಾವಿರ ಗಿಡಗಳನ್ನು ನೆಡುತ್ತಾರೆ. ಮತ್ತೇಲ್ಲೋ ಲಕ್ಷಾಂತರ ಮರಗಳನ್ನು ಕಡಿಯುತ್ತಾರೆ. ಬರ ಬರುತ್ತಾ ನಮ್ಮ ವಂಶ ಬರಿದಾಗುತ್ತಿದೆ. ನೂರಾರು ವರ್ಷಗಳ ನಮ್ಮ ಬದುಕು ಗಳಿಗೆಯಲ್ಲಿ ಬೂದಿಯಾಗುತ್ತದೆ. ಈಗ ನೆಟ್ಟ ಕೆಲವೇ ಗಿಡಗಳು ಬೆಳೆಯಲು ಇನ್ನೂ ಹತ್ತಾರು ವರ್ಷಗಳು ಬೇಕು. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎನ್ನುವ ಗಾದೆಯಂತಾಗಿದೆ ನಮ್ಮ ಬದುಕು.
ಉದಾಹರಣೆಗೆ ಬನ್ನಿ ತಿಪಟೂರಿಗೆ. ಈ ತಾಲೂಕಿನಲ್ಲಿ ಸುಮಾರು ೬೫ಕ್ಕೂ ಹೆಚ್ಚು ತೆಂಗಿನ ಒಣ ಪುಡಿ ತಯಾರಿಕ(ಚಿತೆಗಳಿವೆ) ಘಟಕಗಳಿವೆ. ೫೦ಕ್ಕೂ ಹೆಚ್ಚು (ಕಸಾಯಿಖಾನೆಗಳಿವೆ) ಸಾಮಿಲ್ಗಳಿವೆ. ನಮ್ಮ ಸಹೋದರ ಸಹೋದರಯರನ್ನ ಕತ್ತರಿಸಿ ಕೊಲ್ಲುವ ನೂರಾರು (ಮರ ಕೊಯ್ಯುವವರು) ಕೊಲೆಗಡುಕರಿದ್ದಾರೆ. ನಿತ್ಯಾ ಸುಮಾರು ೨೦೦ ಹೆಚ್ಚು ಮರಗಳನ್ನು ಕತ್ತರಿಸುತ್ತಾರೆ.
ಇಲ್ಲಿಯೂ ಅರಣ್ಯ ಇಲಾಖೆಯಿದೆ. ಪರಿಸರ ವಾದಿಗಳಿದ್ದಾರೆ. ಹೃದಯವಂತರಿದ್ದಾರೆ. ಧರ್ಮ ರಕ್ಷಣೆಯ ಸ್ವಾಮಿಜಿಗಳಿದ್ದಾರೆ. ಗುರು ಹಿರಿಯರಿದ್ದಾರೆ. ಆದರೂ ನಿತ್ಯಾ ನಮ್ಮ ಮಾರಣ ಹೋಮ ನಿರ್ವಿಘ್ನವಾಗಿ ನಡೆಯುತ್ತಲೇ ಇರುತ್ತದೆ. ಆದರೆ ಯಾರೂ ನಮ್ಮನ್ನು ರಕ್ಷಿಸುವುದಿಲ್ಲ. ಅರಣ್ಯ ಇಲಾಖೆಯ ಕಾನೂನಿನಂತೆ ಒಂದು ಮರ ಕತ್ತರಿಸಬೇಕಾದರೂ ಅನುಮತಿ ಪಡೆಯಬೇಕು. ಆದರೆ ಹಾಡು ಹಗಲೇ ರಾಜಾರೋಷವಾಗಿ ನೂರಾರು ಮರಗಳನ್ನು ಕಡಿದು ಕಾರ್ಖಾನೆಗಳಿಗೆ ಸಾಗಿಸಿದರೂ ಕೇಳುವ ಧಾತರಿಲ್ಲ.
ಒಂದು ಅಂದಾಜಿನಂತೆ ದಿನಕ್ಕೆ ೬೦-೭೦ ಕೈಗಾರಿಕಾ ಘಟಕಗಳಿಗೆ ಸುಮಾರು ೨೦೦ ಮರಗಳ ಕಟಾವು ನಡೆಯುತ್ತದೆ. ದಿನಕ್ಕೆ ೨೦೦ ಮರಗಳಾದರೆ, ಆದರೆ ವರ್ಷದ ೩೦೦ ದಿನಕ್ಕೆ ಸುಮಾರು ೬೦ ಸಾವಿರ ಮರಗಳು ಕತ್ತರಿಸಲ್ಪಟ್ಟಿವೆ. ೨೦ ವರ್ಷಕ್ಕೆ ಸುಮಾರು ೧೨ ಲಕ್ಷ ಮರಗಳು ಕತ್ತರಿಸಲ್ಪಟ್ಟಿವೆ. ನಿವೇ ಲೆಕ್ಕ ಹಾಕಿರಿ, ಇಷ್ಟು ಮರಗಳನ್ನು ಪುನಃ ನೆಟ್ಟು ಬೆಳೆಸಲು ಸಾದ್ಯವೇ? ಇದು ಒಂದು ತಾಲೂಕಿನ ಕಥೆಯಾದರೆ ದೇಶದ ಕಥೆ ಕಲ್ಪನೆ ಮಾಡಿಕೊಳ್ಳಲು ಸಾಧ್ಯವಿಲ್ಲ.
ಇಷ್ಟು ಮರಗಳ ನಾಶದಿಂದ ವಾತಾವರಣದಲ್ಲಿ ಎಷ್ಟು ಪ್ರಮಾಣದ ಆಮ್ಲಜನಕ ಕಡಿಮೆಯಾಗಿದೆ. ಇಂಗಾಲದ ಡೈ ಆಕ್ಸೈಡ್ ಎಷ್ಟು ಉತ್ಪತ್ತಿಯಾಗಿದೆ. ಇತರೆ ಆಮ್ಲಯುಕ್ತ ವಸ್ತುಗಳು ಹೆಚ್ಚಾಗಿವೆ. ಭೂಮಿಯ ಸಾರ ಎಷ್ಟು ಕಡಿಮೆಯಾಗಿದೆ. ಮಳೆಯ ಪ್ರಮಾಣ ಏರು ಪೇರಾಗಿದೆ. ಎಷ್ಟು ಪ್ರಮಾಣದಲ್ಲಿ ಪ್ರಾಣಿ, ಪಕ್ಷಿಗಳು ಆಶ್ರಯ ತಪ್ಪಿ ನಾಶಗೊಂಡಿವೆ. ಇದನ್ನು ಯಾರಾದರೂ ಅಂದಾಜು ಮಾಡಿದ್ದಾರೆಯೇ?
ಬೇಕಿಲ್ಲ. ಅದರಿಂದ ಅವರಿಗೇನು ಲಾಭ. ಅವರಿಗೆ ಬೇಕಿರುವುದು ಪಾಪದ ಹಣ. ಅಕ್ರಮವಾಗಲಿ, ಅನ್ಯಾಯವಾಗಲಿ, ಕೊಲೆಯಾಗಲಿ, ತಮ್ಮ ಸ್ವಾರ್ಥದ ಜೇಬು ತುಂಬಿದರೆ ಸಾಕು. ಇದು ಎಲ್ಲಿಯವರೆಗೆ, ಮಾನವನ ಅಂತ್ಯದವರೆಗೆ.
ಸಾಕು ಮಾಡಿ. ಎಲ್ಲದಕ್ಕೂ ಮಿತಿಯಿರುತ್ತದೆ. ನಮ್ಮ ಮೌನ ಆಕ್ರಂದನ ನಿಮ್ಮನ್ನು ಸುಟ್ಟು ಹಾಕೀತು. ಇಡೀ ಮಾನವ ಕುಲಾ ನಾಶ ವಾಗುವ ಮುನ್ನ ಎಚ್ಚೆತ್ತುಕೊಳ್ಳಿ. ನಿಮ್ಮ ಜೀವ ಚೈತನ್ಯವಾಗಿರುವ ನಮ್ಮನ್ನು ಉಳಿಸಿ, ನಾವು ನಿಮ್ಮನ್ನು ಉಳಿಸುತ್ತೇವೆ. ಇನ್ನಾದರೂ ನಮ್ಮ ಜೀವಕ್ಕೆ ಕೊಡಲಿ ಹಾಕ ಬೇಡಿ. ಪರಿ ಪರಿಯಾಗಿ ಕೇಳಿ ಕೊಳ್ಳುತ್ತೇವೆ. ನಮಗೂ ನಿಮ್ಮಂಥೆಯೇ ಜೀವವಿದೆ.
No comments:
Post a Comment