ತಿಪಟೂರು: ತಾಲೂಕಿನ ತೆಂಗಿನಕಾಯಿ ಒಣ ಪುಡಿ ಕೈಗಾರಿಕಾ ಘಟಕಗಳಿಂದ ಹೊರಚೆಲ್ಲುತ್ತಿರುವ ತಾಜ್ಯಗಳು ಜೀವಿಗಳ ಆರೋಗ್ಯಕ್ಕೆ ಹಾನಿಕಾರಕವಾಗಿದ್ದು ಪರಿಸರಕ್ಕೆ ತೀವ್ರತರವಾದ ದಕ್ಕೆ ಉಂಟಾಗುತ್ತಿದೆ ಅಲ್ಲದೇ ನಾನಾ ಸಮಸ್ಯೆಗಳಿಗೆ ಎಡೆಮಾಡಿದೆ.
ತಿಪಟೂರು ನಗರ ಮತ್ತು ತಾಲೂಕಿನಲ್ಲಿ ಸುಮಾರು ೬೦ಕ್ಕೂ ಹೆಚ್ಚು ತೆಂಗಿನಕಾಯಿ ಒಣತುರಿ ತಯಾರಿಕಾ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಒಂದೊಂದು ಕೈಗಾರಿಕಾ ಘಟಕದಲ್ಲೂ ಪ್ರತಿನಿತ್ಯ ಕನಿಷ್ಟ ೧೦ ಸಾವಿರದಿಂದ ಒಂದು ಲಕ್ಷದವರೆಗೆ ತೆಂಗಿನಕಾಯಿಗಳನ್ನು ಒಡೆದು ಅದರಿಂದ ಒಣಪುಡಿ ತಯಾರಿಸಿ ಮಾರಾಟ ಮಾಡಲಾಗುತ್ತದೆ. ಕಾಯಿಗಳನ್ನು ಹೊಡೆದಾಗ ಒಳಗಿನ ಕಾಯಿನೀರು ಹೊರಬರುತ್ತದೆ. ಇದನ್ನು ಸ್ವಚ್ಚಗೊಳಿಸುವ ಪ್ರಕ್ರಿಯೆಗೆ ನೀರನ್ನು ಬಳಸಲಾಗುತ್ತದೆ. ಕಾಯಿಯಿಂದ ಹೊರಬಂದ ನೀರು ಕೊಳೆತು, ಹುಳಿಯಾಗಿ ದುರ್ವಾಸನೆ ಬೀರಲು ಆರಂಭಿಸುತ್ತದೆ. ಈ ರೀತಿಯಿಂದ ಒಂದೊಂದು ಕೈಗಾರಿಕಾ ಘಟಕದಿಂದ ನಿತ್ಯಾ ಸುಮಾರು ೧೦ಸಾವಿರ ಲೀಟರ್ನಿಂದ ೧ಲಕ್ಷ ಲೀಟರ್ನಷ್ಟು ಕೊಳೆತ, ದುರ್ವಾಸನೆಯುಕ್ತ ಪರಸರಕ್ಕೆ ಹಾನಿಕಾರಕವಾದ ಮಲೀನ ನೀರು ಹೊರ ಹರಿಯುತ್ತದೆ.
ನಗರದ ಮಧ್ಯೆಯಿರುವ ಕೈಗಾರಿಕಾ ಘಟಕಗಳು ಚರಂಡಿ ಮೂಲಕ ಹೊರಗೆ ಹರಿಯ ಬಿಡುತ್ತಿದ್ದಾರೆ. ನಗರ ಪ್ರದೇಶದಿಂದ ದೂರವಿರುವ ಹಾಗೂ ಗ್ರಾಮೀಣ ಪ್ರದೇಶದಲ್ಲಿರುವ ಕೆಲವು ಘಟಕಗಳು ಹತ್ತಿರವೇ ಗುಂಡಿ ನಿರ್ಮಿಸಿ ಸಂಗ್ರಹಿಸುತ್ತಿದ್ದರೆ ಕೆಲವರು ಬೇರೆಯವರ ತೋಟ, ಹೊಲಗಳಿಗೆ ಅಥವಾ ಸರಕಾರಿ ಪ್ರದೇಶಗಳಿಗೆ ಹರಿಯ ಬಿಡುತ್ತಿದ್ದಾರೆ. ನಗರದಲ್ಲಿ ಚರಂಡಿಗಳ ಮೂಲಕ ಹರಿಯುವ ಕೊಳೆತ ಕಾಯಿನೀರಿನ ಕೆಟ್ಟ ವಾಸನೆಯಿಂದ ಸಾರ್ವಜನಕರಿಗೆ ನಾನಾ ರೀತಿಯ ತೊಂದರೆ ಜೊತೆಗೆ ಆರೋಗ್ಯದ ಮೇಲೆ ದುಷ್ಟರಿಣಾಮ ಉಂಟಾಗುತ್ತಿದೆ. ನಗರದ ಹೊರ ವಲಯ ಮತ್ತು ಗ್ರಾಮೀಣ ಪ್ರದೇಶಲ್ಲಿರುವ ಕೈಗಾರಿಕಾ ಘಟಕಗಳಿಂದ ವಾಯು ಮಾಲಿನ್ಯ ಮತ್ತು ಜಲ ಮಾಲಿನ್ಯ ಉಂಟಾಗುತ್ತಿದೆ. ಇದರಿಂದ ರೈತರ ತೆಂಗು, ರಾಗಿ ಇತರೆ ಬೆಳೆಗಳು ಹಾಳಾಗುತ್ತಿವೆ. ಮಳೆ ಬಂದಾಗ ಈ ಮಲೀನ ನೀರು ಹರಿದು ಕೆರೆ ಕಟ್ಟೆ ಹಾಗೂ ತಗ್ಗು ಪ್ರದೇಶ ಸೇರುವುದರಿಂದ ಅಲ್ಲಿನ ನೀರು ಮಲೀನಗೊಂಡು ಪ್ರಾಣಿ, ಪಕ್ಷಿಗಳು ಕುಡಿಯಲು ಯೋಗ್ಯವಾಗುವುದಿಲ್ಲ.
ಪ್ರತಿಯೊಂದು ಕೈಗಾರಿಕಾ ಘಟಕದ ಬಳಿಯೂ ಈ ರೀತಿ ನೀರು ನಿಂತು ಪರಿಸರಕ್ಕೆ ನಾನಾ ರೀತಿಯಲ್ಲಿ ದಕ್ಕೆ ಆಗುತ್ತಿದೆ. ನಿಂತ ನೀರಿನಲ್ಲಿ ಸೊಳ್ಳೆ, ನೊಣಗಳ ಹಾವಳಿ ತೀವ್ರಗೊಂಡು ಚಿಕನ್ ಗುನ್ಯಾ, ಡೆಂಗ್ಯೂ, ಮಲೇರಿಯಾ ಸೇರಿದಂತೆ ನಾನಾ ರೋಗಗಳು ಉಂಟಾಗಲು ಕಾರಣವಾಗಿದೆ. ಘಟಕಗಳಲ್ಲಿ ಸ್ವಚ್ಚತೆ ಕಾಪಾಡುವಲ್ಲಿ ಮಾಲೀಕರು ವಿಫಲವಾಗಿದ್ದು ನಾನಾ ರೋಗಗಳ ಆವಾಸ ಸ್ಥಾನವಾಗಿದೆ. ಕಾಯಿ ನೀರಿನಲ್ಲಿ ಎಣ್ಣೆ ಮತ್ತು ಆಸಿಡ್ನಂತಹ ಅಂಶವಿರುವುದರಿಂದ ಈ ನೀರು ಹರಿದ ಪ್ರದೇಶವೆಲ್ಲಾ ಕಪ್ಪುಬಣ್ಣಕ್ಕೆ ತಿರುಗಿ ಸುಟ್ಟಂತಾಗುತ್ತದೆ. ಕೆಟ್ಟ ನೀರಿನ ದುರ್ವಾಸನೆ ಸುಮಾರು ಒಂದು ಕಿ.ಮಿ.ವರೆಗೂ ಹರಡುವುದರಿಂದ ಸ್ವಾಸ್ಥ ಪರಿಸರದ ಮೇಲೆ ದುಷ್ಪರಿಣಾಮವಾಗಿದೆ. ಆದರೆ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮದಂತೆ ಇಂತಹ ಅಪಾಯಕಾರಿ ನೀರನ್ನು ಶುದ್ಧಿಕರಿಸಿ, ಸಂಸ್ಕರಿಸಿ ಹೊರ ಬಿಡಬೇಕಾಗಿದೆ. ಆದರೆ ಕೈಗಾರಿಕಾ ಘಟಕದ ಮಾಲೀಕರು ಇಂತಹ ಯಾವ ಪ್ರಯತ್ನವನ್ನು ಮಾಡದೇ ಮಂಡಳಿಯ ನಿಯಮ ಹಾಗೂ ಸ್ಥಳೀಯ ಸಂಸ್ಥೆಗಳ ನಿಬಂಧನೆಗಳನ್ನು ನಿರ್ಲಕ್ಷಿಸಿದ್ದಾರೆ.
ನಗರದ ರಂಗಾಪುರರಸ್ತೆ, ಕೆರಗೋಡಿರಸ್ತೆ, ಯಡಿಯೂರುರಸ್ತೆ, ಹಾಲ್ಕುರಿಕೆ ರಸ್ತೆ ಹಾಗೂ ಹಳೇಪಾಳ್ಯಗಳಲ್ಲಿ ಇಂತಹ ಮಾಲಿನ್ಯಯುಕ್ತ ಕೈಗಾರಿಕಾ ಘಟಕಗಳು ಹೆಚ್ಚುತ್ತಿವೆ. ಹಾಲ್ಕುರಿಕೆ ರಸ್ತೆಯಲ್ಲಿ ಒಂದೇ ಪ್ರದೇಶದಲ್ಲಿ ಸುಮಾರು ೧೨ಕ್ಕೂ ಹೆಚ್ಚು ಕೈಗಾರಿಕಾ ಘಟಕಗಳು ಸ್ಪರ್ಧೆಯ ರೀತಿಯಲ್ಲಿ ಆರಂಭಗೊಳ್ಳುತ್ತಿವೆ. ಈ ಘಟಕಗಳು ಹೊರ ಚೆಲ್ಲುವ ತಾಜ್ಯ ನೀರಿನಿಂದ ಸುತ್ತಾಮುತ್ತಲ ಪರಿಸರ ಹಾಳಾಗುತ್ತಿದೆ. ಕೆಲವರು ಸರಕಾರದ ಸಹಾಯಧನ ವಂಚಿಸಲು ಎರಡು ಮೂರು ಘಟಕಗಳನ್ನು ತೆರೆಯುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ಪರಿಸರ ಮಾಲಿನ್ಯ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಸ್ಥಳೀಯ ಸಂಸ್ಥೆ ನಗರಸಭೆಯೂ ಘಟಕಗಳ ವಿರುದ್ಧ ಕ್ರಮವಹಿಸಬೇಕಿದೆ.
ಮರಗಳ ನಾಶದಿಂದ ಬರಡು ಭೂಮಿಗೆ ಆಹ್ವಾನ: ಪ್ರತಿ ಕೈಗಾರಿಕಾ ಘಟಕದಲ್ಲೂ ಕಾಯಿತುರಿಯನ್ನು ಒಣಗಿಸಲು ಶಾಖೋತ್ಪತ್ತಿಗಾಗಿ ನಿತ್ಯಾ ಸುಮಾರು ಎರಡು ಮೂರು ಮರಗಳನ್ನು ಕಡಿದು ತಂದು ಉರುವಲು ಆಗಿ ಬಳಸಲಾಗುತ್ತಿದೆ.
ತಾಲೂಕಿನಲ್ಲಿರುವ ಸುಮಾರು ೬೦ಕ್ಕೂ ಹೆಚ್ಚು ತೆಂಗಿನಕಾಯಿ ಒಣಪುಡಿ ತಯಾರಿಕಾ ಕೈಗಾರಿಕಾ ಘಟಕಗಳಿಗಾಗಿ ನಿತ್ಯಾ ೧೫೦ಕ್ಕೂ ಹೆಚ್ಚು ಮರಗಳು ಅನುಮತಿಯಿಲ್ಲದೇ ಅಕ್ರಮವಾಗಿ ಕಟಾವು ಆಗುತ್ತಿದೆ. ಪ್ರತಿ ಎಕರೆಯಲ್ಲಿ ೪೦ಮರಗಳು ಕಟಾವು ಆಗುತ್ತವೆ ಎಂದರೆ ಈ ಘಟಕಗಳಿಗಾಗಿ ನಿತ್ಯಾ ಸುಮಾರು ೪ಎಕರೆಯಷ್ಟು ಮರಗಳು ಕಟಾವು ಆಗುತ್ತವೆ.
ಒಂದು ದಿನಕ್ಕೆ ೪ಎಕರೆ ಅರಣ್ಯ ಅಥವಾ ಮರಗಳಿರುವ ಹಸಿರು ಭೂಮಿ ನಾಶವಾಗುತ್ತಿದೆ. ವರ್ಷಕ್ಕೆ ೧೫೦೦ ಎಕರೆ ಪ್ರದೇಶ ಬರಡಾಗುತ್ತಿದೆ. ಸುಮಾರು ೨೦ ವರ್ಷದಿಂದ ೩೦ಸಾವಿರ ಎಕರೆಯಷ್ಟು ಮರಗಳು ನಾಶವಾಗಿದೆ ಎಂದರೆ ಈ ಭೂ ಪ್ರದೇಶವನ್ನು, ವನರಾಶಿಯನ್ನು ಸಂರಕ್ಷಿಸಿ ಉಳಿಸಲಾಗುತ್ತದೆಯೇ? ಈ ಎಲ್ಲಾ ಸತ್ಯ ಸಂಗತಿಗಳು ಅರಣ್ಯ ಇಲಾಖೆ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಗೊತ್ತಿದ್ದರೂ ಘಟಕಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಮೌನವಹಿಸಿವೆ.
ಕಾರ್ಮಿಕರಿಗೆ ರಕ್ಷಣೆ ಮತ್ತು ಆರೋಗ್ಯದ ಕಡೆ ಗಮನವಿಲ್ಲ:
ತಾಲೂಕಿನಲ್ಲಿರುವ ಸುಮಾರು ೬೦ಕ್ಕೂ ಹೆಚ್ಚು ಘಟಕಗಳಲ್ಲಿ ೧೦ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕೆಲಸಮಾಡುತ್ತಿದ್ದಾರೆ. ಘಟಕಗಳಲ್ಲಿ ಯಾವುದೇ ಸ್ವಚ್ಚತೆ ಕಾಪಾಡುತ್ತಿಲ್ಲ. ದುರ್ವಾಸನೆ ಬೀರುವ ಅಶುದ್ಧವಾದ, ಕೊಳಚೆ ವಾತಾವರಣದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಾರೆ.
ಕಾರ್ಮಿಕರು ಕೆಲಸ ಮಾಡುವ ಜಾಗದಲ್ಲಿ ಅನೇಕ ಕ್ರಿಮಿಕೀಟಗಳು, ಸೂಕ್ಷ್ಮ ಹಾನಿಕಾರಕ ಜೀವಾಣುಗಳು ಉತ್ಪತ್ತಿಯಾಗುತ್ತಿರುತ್ತವೆ. ಇದರಿಂದ ಆಗಾಗ ಕಾರ್ಮಿಕರು ಆನಾರೋಗ್ಯಕ್ಕೆ ತುತ್ತಾಗುತ್ತಿರುತ್ತಾರೆ. ಇವರ ಆರೋಗ್ಯದ ರಕ್ಷಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಕಾರ್ಮಿಕ ಇಲಾಖೆ ಕ್ರಮ ಕೈಗೊಳ್ಳಬೇಕಿದೆ.
ಘಟಕಗಳಿಂದ ಸ್ಥಳೀಯವಾಗಿ ಯಾವುದೇ ಲಾಭವಿಲ್ಲ: ತೆಂಗಿನ ಕಾಯಿ ತುರಿ ತಯಾರಿಸುವ ಈ ಘಟಕಗಳು ಮುಖ್ಯವಾಗಿ ಸ್ಥಳೀಯ ತೆಂಗಿನಕಾಯಿಯನ್ನು ಬಳಸಬೇಕು. ಆದರೆ ಕೈಗಾರಿಕಾ ಘಟಕಗಳು ಸಾಮಾಜಿಕ ಪ್ರಜ್ಞೆಗಿಂತ ಲಾಭದ ಉದ್ದೇಶವಿಟ್ಟುಕೊಂಡು ಕೇರಳದಿಂದ ಕಾಯಿಗಳನ್ನು ತರಿಸಿಕೊಂಡು ಪುಡಿ ತಯಾರಿಸುತ್ತವೆ. ಹಾಗಾಗಿ ಸ್ಥಳೀಯ ತೆಂಗು ಬೇಡಿಕೆ ಮತ್ತು ಬೆಲೆ ಕಳೆದುಕೊಂಡು ನಿರ್ಲಕ್ಷಕ್ಕೊಳಗಾಗಿದೆ. ಇದರಿಂದ ತೆಂಗು ಬೆಳೆಗಾರ ಅತಂತ್ರ ಸ್ಥಿತಿಗೆ ತಲುಪಿ ನಾಶವಾಗುತ್ತಿದ್ದಾನೆ.
ತಾಲೂಕಿನ ಎಲ್ಲಾ ಕೈಗಾರಿಕಾ ಘಟಕಗಳಿಂದ ಪ್ರತಿನಿತ್ಯಾ ಸುಮಾರು ೧೦ಲಕ್ಷಕ್ಕೂ ಹೆಚ್ಚು ತೆಂಗಿನಕಾಯಿಗಳನ್ನು ಬಳಸಿಕೊಂಡು ಒಣಪುಡಿ ತಯಾರಿಸುತ್ತವೆ. ವರ್ಷಕ್ಕೆ ಸಮಾರು ೨೫ಕೋಟಿ ತೆಂಗಿನಕಾಯಿ ಬಳಕೆಯಾಗುತ್ತದೆ. ಇಷ್ಟು ಪ್ರಮಾಣದಲ್ಲಿ ಸ್ಥಳೀಯ ತೆಂಗು ಬಳಕೆಯಾದರೆ ಕೊಬ್ಬರಿ ಮಾರುಕಟ್ಟೆಯಲ್ಲಿ ಕೊಬ್ಬರಿಗೆ ಬೇಡಿಕೆ ಹೆಚ್ಚಿ ಧಾರಣೆ ಏರುತ್ತದೆ. ಆಗ ತೆಂಗುಬೆಳೆಗಾರ ಆರ್ಥಿಕ ಸಂಕಟದಿಂದ ಹೊರ ಬರುತ್ತಾನೆ. ಸರಕಾರ ಬೆಂಬಲ ಬೆಲೆ ನಿಡುವ ಅಥವಾ ಕೊಬ್ಬರಿ ಖರೀದಿಸುವ ಸಮಸ್ಯೆ ಬರುವುದಿಲ್ಲ. ಆದ್ದರಿಂದ ಸರಕಾರ ಒಂದು ನಿಯಮ ರೂಪಿಸಿ ಘಟಕಗಳು ಹೊರ ರಾಜ್ಯದಿಂದ ತೆಂಗನ್ನು ಖರೀದಿಸುವುದಕ್ಕಿಂತ ಸ್ಥಳೀಯ ತೆಂಗನ್ನು ಬಳಸುವಂತೆ ಹಾಗೂ ಅವುಗಳಿಗೆ ಮಾರುಕಟ್ಟೆ ನಿರ್ಮಿಸಿಕೊಡುವಂತೆ ತಾಕೀತು ಮಾಡಬಹುದು. ಇದರಿಂದ ತೆಂಗು ಬೆಳೆಗಾರನ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಈ ಬಗ್ಗೆ ರೈತ ಸಂಘಟನೆಗಳು ಹೋರಾಟದ ಮೂಲಕ ನ್ಯಾಯ ಪಡೆಯಬಹುದಾಗಿದೆ. ಎಪಿಎಂಸಿಯೂ ಹೊರ ರಾಜ್ಯದಿಂದ ಬರುವ ತೆಂಗಿನಕಾಯಿಗಳಿಗೆ ಹೆಚ್ಚು ಹೆಚು ತೆರಿಗೆ ವಿಧಿಸುವ ಮೂಲಕ ನಿಯಂತ್ರಣ ಮಾಡಬಹುದು.
ಉರುವಲುಗಾಗಿ ತೆಂಗಿನಎಡಮಟ್ಟೆ ಬಳಕೆ ಸೂಕ್ತ:
ಘಟಕಗಳು ತಮ್ಮ ಶಾಖೋತ್ಪನ್ನ ಯಂತ್ರಗಳ ಬಳಕೆಗಾಗಿ ನಿತ್ಯಾ ನೂರಾರು ಮರಗಳನ್ನು ಕಡಿದು ಪರಿಸರ ಹಾಳು ಮಾಡುವುದಕ್ಕಿಂತ ತೆಂಗಿನ ಮರದ ಎಡಮಟ್ಟೆಯನ್ನು ಉಪಯೋಗಿಸಿದರೆ ಲಾಭದ ಜೊತೆಗೆ ನಮ್ಮ ಅಮೂಲ್ಯ ನೈಸರ್ಗಿಕ ಸಂಪತ್ತು ಹಾಗೂ ಜೀವಧಾನ ನೀಡುವ ಮರಗಳನ್ನು ರಕ್ಷಿಸಬಹುದು.
ಮಾರಾಟ ತೆರಿಗೆ ಇಲಾಖೆ, ಆದಾಯ ತೆರಿಗೆ ಇಲಾಖೆ, ಆಹಾರ ಮತ್ತು ನಾಗರೀಕ ಸರಭರಾಜು ಇಲಾಖೆಗಳು ಘಟಕಗಳ ಮೇಲೆ ಹದ್ದಿನ ಕಣ್ಣು ಇಟ್ಟರೆ ವಾಮಮಾರ್ಗದ ಮಾರಾಟ, ಕಲಬೆರಕೆ, ತೆರಿಗೆ ವಂಚನೆ ತಪ್ಪಿಸಬಹುದು.
ತಿಪಟೂರು ನಗರ ಮತ್ತು ತಾಲೂಕಿನಲ್ಲಿ ಸುಮಾರು ೬೦ಕ್ಕೂ ಹೆಚ್ಚು ತೆಂಗಿನಕಾಯಿ ಒಣತುರಿ ತಯಾರಿಕಾ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಒಂದೊಂದು ಕೈಗಾರಿಕಾ ಘಟಕದಲ್ಲೂ ಪ್ರತಿನಿತ್ಯ ಕನಿಷ್ಟ ೧೦ ಸಾವಿರದಿಂದ ಒಂದು ಲಕ್ಷದವರೆಗೆ ತೆಂಗಿನಕಾಯಿಗಳನ್ನು ಒಡೆದು ಅದರಿಂದ ಒಣಪುಡಿ ತಯಾರಿಸಿ ಮಾರಾಟ ಮಾಡಲಾಗುತ್ತದೆ. ಕಾಯಿಗಳನ್ನು ಹೊಡೆದಾಗ ಒಳಗಿನ ಕಾಯಿನೀರು ಹೊರಬರುತ್ತದೆ. ಇದನ್ನು ಸ್ವಚ್ಚಗೊಳಿಸುವ ಪ್ರಕ್ರಿಯೆಗೆ ನೀರನ್ನು ಬಳಸಲಾಗುತ್ತದೆ. ಕಾಯಿಯಿಂದ ಹೊರಬಂದ ನೀರು ಕೊಳೆತು, ಹುಳಿಯಾಗಿ ದುರ್ವಾಸನೆ ಬೀರಲು ಆರಂಭಿಸುತ್ತದೆ. ಈ ರೀತಿಯಿಂದ ಒಂದೊಂದು ಕೈಗಾರಿಕಾ ಘಟಕದಿಂದ ನಿತ್ಯಾ ಸುಮಾರು ೧೦ಸಾವಿರ ಲೀಟರ್ನಿಂದ ೧ಲಕ್ಷ ಲೀಟರ್ನಷ್ಟು ಕೊಳೆತ, ದುರ್ವಾಸನೆಯುಕ್ತ ಪರಸರಕ್ಕೆ ಹಾನಿಕಾರಕವಾದ ಮಲೀನ ನೀರು ಹೊರ ಹರಿಯುತ್ತದೆ.
ನಗರದ ಮಧ್ಯೆಯಿರುವ ಕೈಗಾರಿಕಾ ಘಟಕಗಳು ಚರಂಡಿ ಮೂಲಕ ಹೊರಗೆ ಹರಿಯ ಬಿಡುತ್ತಿದ್ದಾರೆ. ನಗರ ಪ್ರದೇಶದಿಂದ ದೂರವಿರುವ ಹಾಗೂ ಗ್ರಾಮೀಣ ಪ್ರದೇಶದಲ್ಲಿರುವ ಕೆಲವು ಘಟಕಗಳು ಹತ್ತಿರವೇ ಗುಂಡಿ ನಿರ್ಮಿಸಿ ಸಂಗ್ರಹಿಸುತ್ತಿದ್ದರೆ ಕೆಲವರು ಬೇರೆಯವರ ತೋಟ, ಹೊಲಗಳಿಗೆ ಅಥವಾ ಸರಕಾರಿ ಪ್ರದೇಶಗಳಿಗೆ ಹರಿಯ ಬಿಡುತ್ತಿದ್ದಾರೆ. ನಗರದಲ್ಲಿ ಚರಂಡಿಗಳ ಮೂಲಕ ಹರಿಯುವ ಕೊಳೆತ ಕಾಯಿನೀರಿನ ಕೆಟ್ಟ ವಾಸನೆಯಿಂದ ಸಾರ್ವಜನಕರಿಗೆ ನಾನಾ ರೀತಿಯ ತೊಂದರೆ ಜೊತೆಗೆ ಆರೋಗ್ಯದ ಮೇಲೆ ದುಷ್ಟರಿಣಾಮ ಉಂಟಾಗುತ್ತಿದೆ. ನಗರದ ಹೊರ ವಲಯ ಮತ್ತು ಗ್ರಾಮೀಣ ಪ್ರದೇಶಲ್ಲಿರುವ ಕೈಗಾರಿಕಾ ಘಟಕಗಳಿಂದ ವಾಯು ಮಾಲಿನ್ಯ ಮತ್ತು ಜಲ ಮಾಲಿನ್ಯ ಉಂಟಾಗುತ್ತಿದೆ. ಇದರಿಂದ ರೈತರ ತೆಂಗು, ರಾಗಿ ಇತರೆ ಬೆಳೆಗಳು ಹಾಳಾಗುತ್ತಿವೆ. ಮಳೆ ಬಂದಾಗ ಈ ಮಲೀನ ನೀರು ಹರಿದು ಕೆರೆ ಕಟ್ಟೆ ಹಾಗೂ ತಗ್ಗು ಪ್ರದೇಶ ಸೇರುವುದರಿಂದ ಅಲ್ಲಿನ ನೀರು ಮಲೀನಗೊಂಡು ಪ್ರಾಣಿ, ಪಕ್ಷಿಗಳು ಕುಡಿಯಲು ಯೋಗ್ಯವಾಗುವುದಿಲ್ಲ.
ಪ್ರತಿಯೊಂದು ಕೈಗಾರಿಕಾ ಘಟಕದ ಬಳಿಯೂ ಈ ರೀತಿ ನೀರು ನಿಂತು ಪರಿಸರಕ್ಕೆ ನಾನಾ ರೀತಿಯಲ್ಲಿ ದಕ್ಕೆ ಆಗುತ್ತಿದೆ. ನಿಂತ ನೀರಿನಲ್ಲಿ ಸೊಳ್ಳೆ, ನೊಣಗಳ ಹಾವಳಿ ತೀವ್ರಗೊಂಡು ಚಿಕನ್ ಗುನ್ಯಾ, ಡೆಂಗ್ಯೂ, ಮಲೇರಿಯಾ ಸೇರಿದಂತೆ ನಾನಾ ರೋಗಗಳು ಉಂಟಾಗಲು ಕಾರಣವಾಗಿದೆ. ಘಟಕಗಳಲ್ಲಿ ಸ್ವಚ್ಚತೆ ಕಾಪಾಡುವಲ್ಲಿ ಮಾಲೀಕರು ವಿಫಲವಾಗಿದ್ದು ನಾನಾ ರೋಗಗಳ ಆವಾಸ ಸ್ಥಾನವಾಗಿದೆ. ಕಾಯಿ ನೀರಿನಲ್ಲಿ ಎಣ್ಣೆ ಮತ್ತು ಆಸಿಡ್ನಂತಹ ಅಂಶವಿರುವುದರಿಂದ ಈ ನೀರು ಹರಿದ ಪ್ರದೇಶವೆಲ್ಲಾ ಕಪ್ಪುಬಣ್ಣಕ್ಕೆ ತಿರುಗಿ ಸುಟ್ಟಂತಾಗುತ್ತದೆ. ಕೆಟ್ಟ ನೀರಿನ ದುರ್ವಾಸನೆ ಸುಮಾರು ಒಂದು ಕಿ.ಮಿ.ವರೆಗೂ ಹರಡುವುದರಿಂದ ಸ್ವಾಸ್ಥ ಪರಿಸರದ ಮೇಲೆ ದುಷ್ಪರಿಣಾಮವಾಗಿದೆ. ಆದರೆ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮದಂತೆ ಇಂತಹ ಅಪಾಯಕಾರಿ ನೀರನ್ನು ಶುದ್ಧಿಕರಿಸಿ, ಸಂಸ್ಕರಿಸಿ ಹೊರ ಬಿಡಬೇಕಾಗಿದೆ. ಆದರೆ ಕೈಗಾರಿಕಾ ಘಟಕದ ಮಾಲೀಕರು ಇಂತಹ ಯಾವ ಪ್ರಯತ್ನವನ್ನು ಮಾಡದೇ ಮಂಡಳಿಯ ನಿಯಮ ಹಾಗೂ ಸ್ಥಳೀಯ ಸಂಸ್ಥೆಗಳ ನಿಬಂಧನೆಗಳನ್ನು ನಿರ್ಲಕ್ಷಿಸಿದ್ದಾರೆ.
ನಗರದ ರಂಗಾಪುರರಸ್ತೆ, ಕೆರಗೋಡಿರಸ್ತೆ, ಯಡಿಯೂರುರಸ್ತೆ, ಹಾಲ್ಕುರಿಕೆ ರಸ್ತೆ ಹಾಗೂ ಹಳೇಪಾಳ್ಯಗಳಲ್ಲಿ ಇಂತಹ ಮಾಲಿನ್ಯಯುಕ್ತ ಕೈಗಾರಿಕಾ ಘಟಕಗಳು ಹೆಚ್ಚುತ್ತಿವೆ. ಹಾಲ್ಕುರಿಕೆ ರಸ್ತೆಯಲ್ಲಿ ಒಂದೇ ಪ್ರದೇಶದಲ್ಲಿ ಸುಮಾರು ೧೨ಕ್ಕೂ ಹೆಚ್ಚು ಕೈಗಾರಿಕಾ ಘಟಕಗಳು ಸ್ಪರ್ಧೆಯ ರೀತಿಯಲ್ಲಿ ಆರಂಭಗೊಳ್ಳುತ್ತಿವೆ. ಈ ಘಟಕಗಳು ಹೊರ ಚೆಲ್ಲುವ ತಾಜ್ಯ ನೀರಿನಿಂದ ಸುತ್ತಾಮುತ್ತಲ ಪರಿಸರ ಹಾಳಾಗುತ್ತಿದೆ. ಕೆಲವರು ಸರಕಾರದ ಸಹಾಯಧನ ವಂಚಿಸಲು ಎರಡು ಮೂರು ಘಟಕಗಳನ್ನು ತೆರೆಯುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ಪರಿಸರ ಮಾಲಿನ್ಯ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಸ್ಥಳೀಯ ಸಂಸ್ಥೆ ನಗರಸಭೆಯೂ ಘಟಕಗಳ ವಿರುದ್ಧ ಕ್ರಮವಹಿಸಬೇಕಿದೆ.
ಮರಗಳ ನಾಶದಿಂದ ಬರಡು ಭೂಮಿಗೆ ಆಹ್ವಾನ: ಪ್ರತಿ ಕೈಗಾರಿಕಾ ಘಟಕದಲ್ಲೂ ಕಾಯಿತುರಿಯನ್ನು ಒಣಗಿಸಲು ಶಾಖೋತ್ಪತ್ತಿಗಾಗಿ ನಿತ್ಯಾ ಸುಮಾರು ಎರಡು ಮೂರು ಮರಗಳನ್ನು ಕಡಿದು ತಂದು ಉರುವಲು ಆಗಿ ಬಳಸಲಾಗುತ್ತಿದೆ.
ತಾಲೂಕಿನಲ್ಲಿರುವ ಸುಮಾರು ೬೦ಕ್ಕೂ ಹೆಚ್ಚು ತೆಂಗಿನಕಾಯಿ ಒಣಪುಡಿ ತಯಾರಿಕಾ ಕೈಗಾರಿಕಾ ಘಟಕಗಳಿಗಾಗಿ ನಿತ್ಯಾ ೧೫೦ಕ್ಕೂ ಹೆಚ್ಚು ಮರಗಳು ಅನುಮತಿಯಿಲ್ಲದೇ ಅಕ್ರಮವಾಗಿ ಕಟಾವು ಆಗುತ್ತಿದೆ. ಪ್ರತಿ ಎಕರೆಯಲ್ಲಿ ೪೦ಮರಗಳು ಕಟಾವು ಆಗುತ್ತವೆ ಎಂದರೆ ಈ ಘಟಕಗಳಿಗಾಗಿ ನಿತ್ಯಾ ಸುಮಾರು ೪ಎಕರೆಯಷ್ಟು ಮರಗಳು ಕಟಾವು ಆಗುತ್ತವೆ.
ಒಂದು ದಿನಕ್ಕೆ ೪ಎಕರೆ ಅರಣ್ಯ ಅಥವಾ ಮರಗಳಿರುವ ಹಸಿರು ಭೂಮಿ ನಾಶವಾಗುತ್ತಿದೆ. ವರ್ಷಕ್ಕೆ ೧೫೦೦ ಎಕರೆ ಪ್ರದೇಶ ಬರಡಾಗುತ್ತಿದೆ. ಸುಮಾರು ೨೦ ವರ್ಷದಿಂದ ೩೦ಸಾವಿರ ಎಕರೆಯಷ್ಟು ಮರಗಳು ನಾಶವಾಗಿದೆ ಎಂದರೆ ಈ ಭೂ ಪ್ರದೇಶವನ್ನು, ವನರಾಶಿಯನ್ನು ಸಂರಕ್ಷಿಸಿ ಉಳಿಸಲಾಗುತ್ತದೆಯೇ? ಈ ಎಲ್ಲಾ ಸತ್ಯ ಸಂಗತಿಗಳು ಅರಣ್ಯ ಇಲಾಖೆ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಗೊತ್ತಿದ್ದರೂ ಘಟಕಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಮೌನವಹಿಸಿವೆ.
ಕಾರ್ಮಿಕರಿಗೆ ರಕ್ಷಣೆ ಮತ್ತು ಆರೋಗ್ಯದ ಕಡೆ ಗಮನವಿಲ್ಲ:
ತಾಲೂಕಿನಲ್ಲಿರುವ ಸುಮಾರು ೬೦ಕ್ಕೂ ಹೆಚ್ಚು ಘಟಕಗಳಲ್ಲಿ ೧೦ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕೆಲಸಮಾಡುತ್ತಿದ್ದಾರೆ. ಘಟಕಗಳಲ್ಲಿ ಯಾವುದೇ ಸ್ವಚ್ಚತೆ ಕಾಪಾಡುತ್ತಿಲ್ಲ. ದುರ್ವಾಸನೆ ಬೀರುವ ಅಶುದ್ಧವಾದ, ಕೊಳಚೆ ವಾತಾವರಣದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಾರೆ.
ಕಾರ್ಮಿಕರು ಕೆಲಸ ಮಾಡುವ ಜಾಗದಲ್ಲಿ ಅನೇಕ ಕ್ರಿಮಿಕೀಟಗಳು, ಸೂಕ್ಷ್ಮ ಹಾನಿಕಾರಕ ಜೀವಾಣುಗಳು ಉತ್ಪತ್ತಿಯಾಗುತ್ತಿರುತ್ತವೆ. ಇದರಿಂದ ಆಗಾಗ ಕಾರ್ಮಿಕರು ಆನಾರೋಗ್ಯಕ್ಕೆ ತುತ್ತಾಗುತ್ತಿರುತ್ತಾರೆ. ಇವರ ಆರೋಗ್ಯದ ರಕ್ಷಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಕಾರ್ಮಿಕ ಇಲಾಖೆ ಕ್ರಮ ಕೈಗೊಳ್ಳಬೇಕಿದೆ.
ಘಟಕಗಳಿಂದ ಸ್ಥಳೀಯವಾಗಿ ಯಾವುದೇ ಲಾಭವಿಲ್ಲ: ತೆಂಗಿನ ಕಾಯಿ ತುರಿ ತಯಾರಿಸುವ ಈ ಘಟಕಗಳು ಮುಖ್ಯವಾಗಿ ಸ್ಥಳೀಯ ತೆಂಗಿನಕಾಯಿಯನ್ನು ಬಳಸಬೇಕು. ಆದರೆ ಕೈಗಾರಿಕಾ ಘಟಕಗಳು ಸಾಮಾಜಿಕ ಪ್ರಜ್ಞೆಗಿಂತ ಲಾಭದ ಉದ್ದೇಶವಿಟ್ಟುಕೊಂಡು ಕೇರಳದಿಂದ ಕಾಯಿಗಳನ್ನು ತರಿಸಿಕೊಂಡು ಪುಡಿ ತಯಾರಿಸುತ್ತವೆ. ಹಾಗಾಗಿ ಸ್ಥಳೀಯ ತೆಂಗು ಬೇಡಿಕೆ ಮತ್ತು ಬೆಲೆ ಕಳೆದುಕೊಂಡು ನಿರ್ಲಕ್ಷಕ್ಕೊಳಗಾಗಿದೆ. ಇದರಿಂದ ತೆಂಗು ಬೆಳೆಗಾರ ಅತಂತ್ರ ಸ್ಥಿತಿಗೆ ತಲುಪಿ ನಾಶವಾಗುತ್ತಿದ್ದಾನೆ.
ತಾಲೂಕಿನ ಎಲ್ಲಾ ಕೈಗಾರಿಕಾ ಘಟಕಗಳಿಂದ ಪ್ರತಿನಿತ್ಯಾ ಸುಮಾರು ೧೦ಲಕ್ಷಕ್ಕೂ ಹೆಚ್ಚು ತೆಂಗಿನಕಾಯಿಗಳನ್ನು ಬಳಸಿಕೊಂಡು ಒಣಪುಡಿ ತಯಾರಿಸುತ್ತವೆ. ವರ್ಷಕ್ಕೆ ಸಮಾರು ೨೫ಕೋಟಿ ತೆಂಗಿನಕಾಯಿ ಬಳಕೆಯಾಗುತ್ತದೆ. ಇಷ್ಟು ಪ್ರಮಾಣದಲ್ಲಿ ಸ್ಥಳೀಯ ತೆಂಗು ಬಳಕೆಯಾದರೆ ಕೊಬ್ಬರಿ ಮಾರುಕಟ್ಟೆಯಲ್ಲಿ ಕೊಬ್ಬರಿಗೆ ಬೇಡಿಕೆ ಹೆಚ್ಚಿ ಧಾರಣೆ ಏರುತ್ತದೆ. ಆಗ ತೆಂಗುಬೆಳೆಗಾರ ಆರ್ಥಿಕ ಸಂಕಟದಿಂದ ಹೊರ ಬರುತ್ತಾನೆ. ಸರಕಾರ ಬೆಂಬಲ ಬೆಲೆ ನಿಡುವ ಅಥವಾ ಕೊಬ್ಬರಿ ಖರೀದಿಸುವ ಸಮಸ್ಯೆ ಬರುವುದಿಲ್ಲ. ಆದ್ದರಿಂದ ಸರಕಾರ ಒಂದು ನಿಯಮ ರೂಪಿಸಿ ಘಟಕಗಳು ಹೊರ ರಾಜ್ಯದಿಂದ ತೆಂಗನ್ನು ಖರೀದಿಸುವುದಕ್ಕಿಂತ ಸ್ಥಳೀಯ ತೆಂಗನ್ನು ಬಳಸುವಂತೆ ಹಾಗೂ ಅವುಗಳಿಗೆ ಮಾರುಕಟ್ಟೆ ನಿರ್ಮಿಸಿಕೊಡುವಂತೆ ತಾಕೀತು ಮಾಡಬಹುದು. ಇದರಿಂದ ತೆಂಗು ಬೆಳೆಗಾರನ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಈ ಬಗ್ಗೆ ರೈತ ಸಂಘಟನೆಗಳು ಹೋರಾಟದ ಮೂಲಕ ನ್ಯಾಯ ಪಡೆಯಬಹುದಾಗಿದೆ. ಎಪಿಎಂಸಿಯೂ ಹೊರ ರಾಜ್ಯದಿಂದ ಬರುವ ತೆಂಗಿನಕಾಯಿಗಳಿಗೆ ಹೆಚ್ಚು ಹೆಚು ತೆರಿಗೆ ವಿಧಿಸುವ ಮೂಲಕ ನಿಯಂತ್ರಣ ಮಾಡಬಹುದು.
ಉರುವಲುಗಾಗಿ ತೆಂಗಿನಎಡಮಟ್ಟೆ ಬಳಕೆ ಸೂಕ್ತ:
ಘಟಕಗಳು ತಮ್ಮ ಶಾಖೋತ್ಪನ್ನ ಯಂತ್ರಗಳ ಬಳಕೆಗಾಗಿ ನಿತ್ಯಾ ನೂರಾರು ಮರಗಳನ್ನು ಕಡಿದು ಪರಿಸರ ಹಾಳು ಮಾಡುವುದಕ್ಕಿಂತ ತೆಂಗಿನ ಮರದ ಎಡಮಟ್ಟೆಯನ್ನು ಉಪಯೋಗಿಸಿದರೆ ಲಾಭದ ಜೊತೆಗೆ ನಮ್ಮ ಅಮೂಲ್ಯ ನೈಸರ್ಗಿಕ ಸಂಪತ್ತು ಹಾಗೂ ಜೀವಧಾನ ನೀಡುವ ಮರಗಳನ್ನು ರಕ್ಷಿಸಬಹುದು.
ಮಾರಾಟ ತೆರಿಗೆ ಇಲಾಖೆ, ಆದಾಯ ತೆರಿಗೆ ಇಲಾಖೆ, ಆಹಾರ ಮತ್ತು ನಾಗರೀಕ ಸರಭರಾಜು ಇಲಾಖೆಗಳು ಘಟಕಗಳ ಮೇಲೆ ಹದ್ದಿನ ಕಣ್ಣು ಇಟ್ಟರೆ ವಾಮಮಾರ್ಗದ ಮಾರಾಟ, ಕಲಬೆರಕೆ, ತೆರಿಗೆ ವಂಚನೆ ತಪ್ಪಿಸಬಹುದು.