ಹುಟ್ಟಿದ ಮನೆಗೆ ಪುಣ್ಯ ಕಟ್ಟದ ಪುಣ್ಯಾನಂದ.
ಪ್ರತಿಷ್ಠಿತ ಮಠದ ಮಠಾಧೀಶರಾಗಿದ್ದ ಮಗ ಅಕಾಲಿಕ ಸಾವಿಗೆ ತುತ್ತಾಗಿ ನಾಲ್ಕು ವರ್ಷ ಕಳೆದಿದ್ದು ಅವರಿಗೆ ಜನ್ಮ ನೀಡಿದ್ದ ತಂದೆ ತಾಯಿ ಮಾತ್ರ ಸಮಾಜ ನೀಡಿದ ಭರವಸೆಗಾಗಿ ಕಾಯುತ್ತಾ ಇಂದಿಗೂ ತಮ್ಮ ಶ್ರಮದಾಯಕ ಬದುಕಿಗೆ ಮಂಗಳ ಹಾಡದೇ ನಿತ್ಯಾ ಬೆವರು ನೀರು ಹರಿಸುತ್ತಿರುವುದು ಶೋಚನೀಯ.
ಹೌದು, ಇದು ಸಮಾಜ ಹಾಗೂ ಸಮಾಜದ ಪ್ರತಿಷ್ಠಿತರಿಗಾಗಿ ತಮ್ಮ ಕೈಲಾದಷ್ಟು ಪುಣ್ಯ ಕಟ್ಟಿಟ್ಟು ಹೋದ ಪುಣ್ಯಾನಂದರ ಹೆತ್ತ ಕುಟುಂಬದ ದುರಂತ ಕಥೆ. ಇಂದಿಗೆ ಸುಮಾರು ನಾಲ್ಕು ವರ್ಷಗಳ ಹಿಂದೆ ೨೦೦೭, ಏಪ್ರಿಲ್ ೩ ಮಂಗಳವಾರದ ದುರ್ದಿನದಂದು ಶ್ರೀ ವಾಲ್ಮಕಿ ಮಹಾ ಸಂಸ್ಥಾನ ರಾಜನಹಳ್ಳಿಯ ಮಹರ್ಷಿ ವಾಲ್ಮಿಕಿ ಗುರು ಪೀಠದ ಸ್ವಾಮಿಜಿಯಾಗಿದ್ದ ಪುಣ್ಯಾನಂದಪುರಿ ಸ್ವಾಮಿಜಿ ದಾವಣಗೆರೆ ಹೊರ ವಲಯದಲ್ಲಿ ಹಳಿ ದಾಟುವಾಗ ಅವರ ಕಾರಿಗೆ ರೈಲು ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ದುರ್ಮರಣ ಹೊಂದಿದ್ದರು. ಮಗನ ಸಾವಿನ ಸೂಚನೆ ಅರಿಯದ ಶ್ರೀಗಳ ತಂದೆ ತಾಯಿಗಳು ತಿಪಟೂರಿನಲ್ಲಿ ಅಂದು ಹಸಿವಿಗಾಗಿ ಬೆವರಿಳಿಸಿ ಕೂಲಿ ಮಾಡುತ್ತಿದ್ದರು. ಶ್ರೀಗಳ ಅಕಾಲಿಕ ಸಾವು ಇವರಿಗೆ ಸೂತಕವಾದರೆ ಇಡೀ ವಾಲ್ಮಿಕಿ ಸಮಾಜಕ್ಕೆ ಒಂದು ಕರಾಳ ದಿನವಾಗಿತ್ತು.
ಈ ಆಘಾತದಿಂದ ಶೋಕತಪ್ತರಾಗಿದ್ದ ಜನ ಶ್ರೀಗಳ ಕುಟುಂಬದ ದುಸ್ಥಿತಿ ಕಂಡು ಅನುಕಂಪ ತೋರಿದರು. ಸಮಾಜಕ್ಕಾಗಿ ಮಗನನ್ನು ಕೊಟ್ಟ ಕುಟುಂಬಕ್ಕೆ ಸಹಾಯ ನೀಡಲು ಮುಂದಾಗಿದ್ದರು. ಅಂದು ಸಚಿವರಾಗಿದ್ದ ಸತೀಶ ಜಾರಕಿಹೊಳಿ ಸ್ವತಃ ಶ್ರೀಗಳ ಕುಟುಂಬಕ್ಕೆ ಸಹಾಯ ಮಾಡುವ ಭರವಸೆ ನೀಡಿದ್ದರು. ಶ್ರೀಗಳ ತಂಗಿಯೊಬ್ಬರ ಮದುವೆಗೆ ಕುಟುಂಬ ಮಾಡಿದ ಸಾಲ, ನಿರ್ಮಿಸಿಕೊಂಡ ಮನೆಯ ಸಾಲ ತೀರಿಸಿ ಒಂದಷ್ಟು ಹಣಕಾಸು ಸಹಾಯ ನೀಡುವುದಾಗಿ ಅಂದು ಸಮಾಜದ ಮುಂದೆ ಅವರು ಬಹಿರಂಗವಾಗಿ ಹೇಳಿಕೊಂಡಿದ್ದರು. ಟ್ರಸ್ಟ್ನಲ್ಲಿ ಕುಟುಂಬದ ಸದಸ್ಯರೊಬ್ಬರಿಗೆ ಸದಸ್ಯತ್ವ ನೀಡುವ ಬಗ್ಗೆಯೂ ಸಭೆ ನಿರ್ಣಯಿಸಿತ್ತು. ಆದರೆ ಕಾಲ ಕಳೆದಂತೆ ಅನುಕಂಪದ ದಿನಗಳಲ್ಲಿ ನೀಡಿದ ಆಶ್ವಾಸನೆಗಳೆಲ್ಲಾ ಕೇವಲ ಹುಸಿ ಭರವಸೆಗಳಾಗಿ ಹೋದವು. ಸಹಾಯ ಮಾಡುವುದು ಆಗಿರಲಿ ಇಡೀ ಟ್ರಸ್ಟ್ ಇವತ್ತಿಗೂ ಇತ್ತಾ ತಿರುಗಿಯೂ ನೋಡಲಿಲ್ಲ.
ಚಿತ್ರದುರ್ಗದ ಶ್ರೀ ಶಿವಮೂರ್ತಿ ಮುರುಘರಾಜೇಂದ್ರಸ್ವಾಮಿಜಿ ಸಹ ಇವರ ಕುಟುಂಬದ ದುಸ್ಥಿತಿ ಕಂಡು ಸಹಾಯ ಮಾಡುವಂತೆ ಸತೀಶ್ ಜಾರಕಿಹೊಳಿಯವರಿಗೆ ಪತ್ರ ಬರೆದು ಆಗ್ರಹಿಸಿದ್ದರು. ಅದಕ್ಕೂ ಬೆಲೆ ಸಿಗಲಿಲ್ಲ. ಶ್ರೀಗಳ ಕುಟುಂಬ ಎಂದು ಗೌರವವನ್ನೂ ನೀಡಲಿಲ್ಲ. ಆದರೆ ಹೊಸಪೇಟೆಯ ಶ್ರೀಗಳ ಅಭಿಮಾನಿಗಳು ಒಂದಷ್ಟು ಚಂದಾ ಸಂಗ್ರಹಿಸಿ ಸುಮಾರು ೮೦ ಸಾವಿರ ಕುಟುಂಬಕ್ಕೆ ನೀಡಿರುವುದು ಬಿಟ್ಟರೆ ಮತ್ಯಾವುದೇ ಬಿಡಿಗಾಸು ಸಹಾಯವಾಗಿಲ್ಲ ಎಂದು ಅವರ ಸಹೋದರ ಆಟೋ ಚಾಲಕ ವಿಜಯಕುಮಾರ್ ತಮ್ಮ ನೋವನ್ನು ತೋಡಿಕೊಳ್ಳುತ್ತಾರೆ.
"ನಮ್ಮ ಕೊನೆ ಕಾಲದಲ್ಲಿ ದುಡಿಯುವ ಶಕ್ತಿ ಕಳೆದುಕೊಂಡು ನಿತ್ರಾಣರಾದಾಗ ಮಗ ನೆರವಾಗುತ್ತಾನೆಂದು ಕಷ್ಟ ಪಟ್ಟು ಸಾಕಿ, ಸಲಹಿ, ವ್ಯಾಸಂಗ ಕೊಡಿಸಿ ದೊಡ್ಡವನಾಗಿ ಮಾಡಿದೆವು. ಆದರೆ ಮಗ ನಮ್ಮ ವಿರೋಧದ ನಡುವೆಯೂ ಸನ್ಯಾಸ ಸ್ವೀಕರಿಸಿ, ನಮ್ಮ ಮನಸ್ಸು ನೋಯಿಸಿ, ದಿಕ್ಕು ತಪ್ಪಿಸಿದ್ದಾನೆ" ಎಂದು ಕುಣಿಗಲ್ ತಾಲೂಕಿನ
ಹೊನ್ನೇನಹಳ್ಳಿ ಗ್ರಾಮದ ನಿಂಗಯ್ಯ ಮತ್ತು ಗಂಗಮ್ಮ ದಂಪತಿಗಳು ತಹಸೀಲ್ದಾರರಾಗಿದ್ದ ತಮ್ಮ ಮಗ ಡಾ.ಎಚ್.ಎಲ್.ನಾಗರಾಜ ಆದಿಚುಂಚನಗಿರಿ ಶ್ರೀಗಳ ಸಮ್ಮುಖದಲ್ಲಿ ಸನ್ಯಾಸ ಸ್ವೀಕರಿಸಿದ ಸುದ್ದಿ ಕೇಳಿ ಎದೆ ಬಡಿದುಕೊಂಡು ನೊಂದ ನುಡಿಗಳಿವು. ಇಂತಹುದ್ದೇ ನೊಂದ ಮಾತುಗಳನ್ನು ಪುಣ್ಯಾನಂದಾಪುರಿ ಸ್ವಾಮಿಜಿಗಳ ದೀಕ್ಷೆ ಸಮಯದಲ್ಲಿ ಅವರ ತಂದೆ ತಾಯಿಗಳು ಕಣ್ಣೀರು ಸುರಿಸಿ ಹೇಳಿದ್ದರು. ಆದರೆ ಅವರನ್ನು ನೋಡುವುದಕ್ಕೂ ಈಗ ಸಾಧ್ಯವಾಗಿಲ್ಲದೇ ಹೋಗಿದೆ. ಅವರ ಮನೆಯಲ್ಲಿ ಪುಣ್ಯಾನಂದಾ ಕೇವಲ ಒಂದು ನೆನಪು ಮಾತ್ರ.
ಬದುಕಿಗೆ ಕೂಲಿಯೇ ದಿಕ್ಕು:
ಶ್ರೀಗಳ ತಂದೆ ರಂಗಸ್ವಾಮಿ ತಿಪಟೂರಿನಲ್ಲಿ ಅಂದು ತನ್ನ ಮತ್ತು ತನ್ನ ನಂಬಿಕೊಂಡವರ ಹಸಿವನ್ನು ಹಿಂಗಿಸಲು ನಿತ್ಯಾವೂ ಕೂಲಿ ಮಾಡ ಬೇಕಿತ್ತು. ಬಸಿಲು ಮಳೆ ಎನ್ನದೇ ಮೂಟೆಗಳನ್ನು ತುಂಬಿದ ಗಾಡಿಯನ್ನು ಮೈ ಮೂಳೆ ಮುರಿಯುವಂತೆ ಎಳೆಯ ಬೇಕಿತ್ತು. ಆಗ ಯಾರೂ ರಂಗಸ್ವಾಮಿಯನ್ನು ಅಣಕಿಸುವುದಾಗಲಿ, ಅನುಕಂಪ ತೋರುವುದಾಗಲಿ ಮಾಡುತ್ತಿರಲಿಲ್ಲ. ಶ್ರೀಗಳ ಹೆತ್ತವರು ಇವರೇ ಎಂದು ಯಾರಿಗೂ ಗೊತ್ತಿರಲಿಲ್ಲ. ರಂಗಸ್ವಾಮಿ ಸಹ ತನ್ನ ಮಗ ಮಠಾಧೀಶ ಎಂದು ಯಾರಿಗೂ ಎಲ್ಲಿಯೂ ಹೇಳಿರಲಿಲ್ಲಿ.
ಆದರೆ ಶ್ರೀಗಳು ಅಪಘಾತದಲ್ಲಿ ಮೃತರಾದ ಸುದ್ದಿ ಜೊತೆಯೇ ಇವರ ಸುದ್ದಿ ರಾಜ್ಯದ ಜನತೆಗೆ ತಿಳಿಯುತ್ತಿದ್ದಂತೆ ಸ್ಥಳೀಯ ಜನ ಇವರ ಬಗ್ಗೆ ವಿಶೇಷ ಗೌರವ ನೀಡಲು ಆರಂಭಿಸಿದರು. ಆದರೆ ಅದು ಅವರ ಹಸಿವನ್ನು ಹಿಂಗಿಸುತ್ತಿರಲಿಲ್ಲ. ಆತ್ಮಗೌರವದಿಂದ ಬದುಕುವ ಜನ ಮುಜಗರಕ್ಕೆ ಒಳಗಾದರು. ಸಮಾಜದ ಮುಖಂಡರು, ನಾನಾ ಜನರು ನೀಡಿದ ಭರವಸೆ ಬಗ್ಗೆ ಜನ ಮಾತಾಡಿಕೊಳ್ಳತೊಡಗಿದರು. ಕೂಲಿ ಬೇಡ ಬರುವ ಹಣದಲ್ಲಿ ಬೇರೆ ಏನಾದರೂ ವ್ಯಾಪಾರ ಮಾಡಿಕೋ ಎಂದು ಹೇಳುತ್ತಿದ್ದರು. ಜನ ಗೌರವ ನೀಡುತ್ತಿದ್ದರು ಆದರೆ ಕೂಲಿ ನೀಡುತ್ತಿರಲಿಲ್ಲ ಹಾಗಾಗಿ ಆರಂಭದಲ್ಲಿ ಎಷ್ಟೋ ದಿನ ಈ ಕುಟುಂಬ ಕೂಲಿಯೂ ಮಾಡದೇ ಉಪವಾಸ ಕಳೆದಿದೆಯಂತೆ. ಇಂದಿಗೂ ಅವರ ಸ್ಥಿತಿ ಶೋಚನೀಯವಾಗಿದೆ.
ರಂಗಸ್ವಾಮಿ ಮತ್ತು ಮಹಾದೇವಮ್ಮ ದಂಪತಿಗಳು ಹಿರಿಯ ಮಗಳ ಮದುವೆಗೆ ಮಾಡಿದ ಸಾಲ ಮತ್ತು ಬಡ್ಡಿ ತೀರಿಸದೇ ನಿತ್ಯಾ ಕೂಲಿ ಮಾಡುತ್ತಾರೆ. ಆಶ್ರಯ ಮನೆಗೆ ಮಾಡಿದ ಸಾಲ ತೀರಿಲ್ಲ. ಮತ್ತೊಬ್ಬಳ ಮಗಳ ವ್ಯಾಸಂಗ ಮತ್ತು ಅವಳ ಮದುವೆಗೆ ಹಣ ಹೊಂದಿಸಲು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ತಾಯಿ ತೆಂಗಿನ ಕಡ್ಡಿ ಎರೆದು ಹಾಲು, ತರಕಾರಿ ತಂದರೆ ರಂಗಸ್ವಾಮಿ ನಿತ್ಯಾ ಮೂಟೆ ಹೊತ್ತು, ಗಾಡಿ ಎಳೆದು ಗಂಜಿಗೆ ಹೊಂಚುತ್ತಾರೆ. ದುಬಾರಿ ಪೆಟ್ರೋಲ್ ದರದಲ್ಲಿ ಇಬ್ಬರು ಮಕ್ಕಳು ವಿಜಯಕುಮಾರ್ ಮತ್ತು ಮಂಜುನಾಥ್ ಆಟೋ ಓಡಿಸಿ ಜೀವನ ಸಾಗಿಸುತ್ತಿದ್ದಾರೆ.
ಸಮಾಜದ ಋಣವನ್ನು ಶ್ರೀಗಳು ತೀರಿಸಿ ಹೋಗಿದ್ದಾರೆ. ಇರುವಷ್ಟು ದಿನ ಶ್ರಮ ವಹಿಸಿ ಸಾರ್ಥಕ ಎನಿಸಿಕೊಂಡಿದ್ದಾರೆ. ಆದರೆ ಸಮಾಜ ಅವರನ್ನು ಹೆತ್ತವರ ಋಣ ತೀರಿಸ ಬೇಕಲ್ಲವೇ? ನೀಡಿದ ಭರವಸೆ ಈಡೇರಿಸಬೇಕಲ್ಲವೇ? ಶ್ರೀಗಳು ಇಹಲೋಕ ತ್ಯಜಿಸ ಮಾತ್ರಕ್ಕೆ ಹೆತ್ತವರನ್ನು ಕಡೆಗಣಿಸುವುದು ಯಾವ ನ್ಯಾಯ? ಪ್ರಜ್ಞಾವಂತ ಸಮಾಜ ಇದನ್ನು ಒಪ್ಪುವುದೇ.
ಗಾಡಿ ಎಳೆದು ಜೀವನ : ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ
ರಾಜ್ಯದ ಒಂದು ಪ್ರತಿಷ್ಟಿತ ಮಠದ ಮಠಾಧಿಪತಿಯವರ ತಂದೆ ಎಪ್ಪತ್ತು ವರ್ಷದ ಇಳಿ ವಯಸ್ಸಿನಲ್ಲೂ ಮೂಟೆ ಹೊತ್ತು ಬದುಕು ಸಾಗಿಸುವ ವಿಜಯಕರ್ನಾಟಕದ ಸುದ್ದಿ ನನ್ನ ಮನಸ್ಸಲ್ಲಿ ತೀವ್ರತರವಾದ ನೋವುಂಟಾಗಿ ತಿಪಟೂರಿಗೆ ಬಂದು ಆ ಕುಟುಂಬಕ್ಕೆ ಸಾಂತ್ವನ ನೀಡುವಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
ಮಂಗಳವಾರ ಸಂಜೆ ಇಲ್ಲಿನ ಬಸವೇಶ್ವರನಗರದ ಹೊಸಬಡಾವಣೆಯ ಪುಣ್ಯಾನಂದಪುರಿಸ್ವಾಮಿಜಿಯವರ ತಂದೆ ತಾಯಿ ವಾಸಿಸುವ ಆಶ್ರಯ ಮನೆಗೆ ಬೇಟಿ ನೀಡಿದ ನಂತರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.
ವಾಲ್ಮಿಕಿ ಗುರು ಪೀಠದ ಶ್ರೀಪುಣ್ಯಾನಂದಪುರಿ ಸ್ವಾಮಿಜಿ ೨೦೦೭ರಲ್ಲಿ ರೈಲು ಅಪಘಾತವೊಂದರಲ್ಲಿ ಅಕಾಲಿಕ ಮರಣಕ್ಕೆ ತುತ್ತಾಗಿದ್ದು ನಂತರ ಅವರ ಕುಟುಂಬ ತೀವ್ರ ಸಂಕಟಕ್ಕೀಡಾಗಿದ್ದು ಜೀವನ ನಿರ್ವಹಣೆಗಾಗಿ ಶ್ರೀಗಳ ತಂದೆ ತಿಪಟೂರು ನಗರದಲ್ಲಿ ಮೂಟೆ ಹೊತ್ತು ಗಾಡಿ ಎಳೆದು ಜೀವನ ಸಾಗಿಸುತ್ತಿರುವುದು ಚಿತ್ರ ವಸಹಿತ ಪ್ರಕಟವಾಗಿದ್ದು ನೋಡಿ ತಡೆದು ಕೊಳ್ಳಲಾಗಲಿಲ್ಲ. ತಕ್ಷಣ ಬಂದು ಸೀದಾ ಅವರ ಮನೆಗೆ ಹೋಗಿ ನೋಡಿದೆ ಅವರ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ದುರಸ್ಥಿ ಇಲ್ಲದೇ ಇರುವ ಮನೆ ಸೋರುತ್ತಿದೆ. ಮದುವೆಗೆ ಬಂದ ಮಗಳಿದ್ದಾಳೆ. ಹೆಂಡತಿ, ಮಕ್ಕಳ ನಿರ್ವಹಣೆಗಾಗಿ ೭೦ ವರ್ಷದ ಶ್ರೀಗಳ ವೃದ್ಧ ತಂದೆ ದಿನ ನಿತ್ಯಾ ಮೂಟೆ ಹೊತ್ತು ಕೂಲಿ ಮಾಡಿ ಎಲ್ಲರ ಜೀವನ ನಡೆಸುತ್ತಿದ್ದಾರೆ. ಇದು ತುಂಬಾ ನೋವಿನ ಸಂಗತಿ. ಸಮಾಜದ ಮುಖಂಡರು ಇವರ ಕುಟುಂಬಕ್ಕೆ ಒಂದು ಭರವಸೆ ಕೊಟ್ಟಿದ್ದರು ಅದನ್ನು ಮಾನವಿಯತೆ ದೃಷ್ಟಿಯಿಂದ ಈಡೇರಿಸಬೇಕಿದೆ. ನಾನು ಸಹ ಈ ಸಂದರ್ಭದಲ್ಲಿ ಅವರನ್ನೂ ಈ ಮೂಲಕ ಕೋರಿಕೊಳ್ಳುತ್ತೇನೆ ದಯಮಾಡಿ ಅವರ ಕುಟಂಬಕ್ಕೆ ಅನುಕೂಲ ಮಾಡಿಕೊಡಿ ಎಂದರು.
ಮಂಗಳವಾರ ಸಂಜೆ ಇಲ್ಲಿನ ಬಸವೇಶ್ವರನಗರದ ಹೊಸಬಡಾವಣೆಯ ಪುಣ್ಯಾನಂದಪುರಿಸ್ವಾಮಿಜಿಯವರ ತಂದೆ ತಾಯಿ ವಾಸಿಸುವ ಆಶ್ರಯ ಮನೆಗೆ ಬೇಟಿ ನೀಡಿದ ನಂತರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.
ವಾಲ್ಮಿಕಿ ಗುರು ಪೀಠದ ಶ್ರೀಪುಣ್ಯಾನಂದಪುರಿ ಸ್ವಾಮಿಜಿ ೨೦೦೭ರಲ್ಲಿ ರೈಲು ಅಪಘಾತವೊಂದರಲ್ಲಿ ಅಕಾಲಿಕ ಮರಣಕ್ಕೆ ತುತ್ತಾಗಿದ್ದು ನಂತರ ಅವರ ಕುಟುಂಬ ತೀವ್ರ ಸಂಕಟಕ್ಕೀಡಾಗಿದ್ದು ಜೀವನ ನಿರ್ವಹಣೆಗಾಗಿ ಶ್ರೀಗಳ ತಂದೆ ತಿಪಟೂರು ನಗರದಲ್ಲಿ ಮೂಟೆ ಹೊತ್ತು ಗಾಡಿ ಎಳೆದು ಜೀವನ ಸಾಗಿಸುತ್ತಿರುವುದು ಚಿತ್ರ ವಸಹಿತ ಪ್ರಕಟವಾಗಿದ್ದು ನೋಡಿ ತಡೆದು ಕೊಳ್ಳಲಾಗಲಿಲ್ಲ. ತಕ್ಷಣ ಬಂದು ಸೀದಾ ಅವರ ಮನೆಗೆ ಹೋಗಿ ನೋಡಿದೆ ಅವರ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ದುರಸ್ಥಿ ಇಲ್ಲದೇ ಇರುವ ಮನೆ ಸೋರುತ್ತಿದೆ. ಮದುವೆಗೆ ಬಂದ ಮಗಳಿದ್ದಾಳೆ. ಹೆಂಡತಿ, ಮಕ್ಕಳ ನಿರ್ವಹಣೆಗಾಗಿ ೭೦ ವರ್ಷದ ಶ್ರೀಗಳ ವೃದ್ಧ ತಂದೆ ದಿನ ನಿತ್ಯಾ ಮೂಟೆ ಹೊತ್ತು ಕೂಲಿ ಮಾಡಿ ಎಲ್ಲರ ಜೀವನ ನಡೆಸುತ್ತಿದ್ದಾರೆ. ಇದು ತುಂಬಾ ನೋವಿನ ಸಂಗತಿ. ಸಮಾಜದ ಮುಖಂಡರು ಇವರ ಕುಟುಂಬಕ್ಕೆ ಒಂದು ಭರವಸೆ ಕೊಟ್ಟಿದ್ದರು ಅದನ್ನು ಮಾನವಿಯತೆ ದೃಷ್ಟಿಯಿಂದ ಈಡೇರಿಸಬೇಕಿದೆ. ನಾನು ಸಹ ಈ ಸಂದರ್ಭದಲ್ಲಿ ಅವರನ್ನೂ ಈ ಮೂಲಕ ಕೋರಿಕೊಳ್ಳುತ್ತೇನೆ ದಯಮಾಡಿ ಅವರ ಕುಟಂಬಕ್ಕೆ ಅನುಕೂಲ ಮಾಡಿಕೊಡಿ ಎಂದರು.
ಮನೆಯ ಪರಿಸ್ಥಿತಿ ನೋಡಿ ಸಧ್ಯ ಸ್ಥಳದಲ್ಲೇ ನಾನು ಒಂದು ಲಕ್ಷ ಆರ್ಥಿಕ ಸಹಾಯ ಮಾಡಿದ್ದೇನೆ. ತಾಲೂಕು ಜೆಡಿಎಸ್ನಿಂದ ಐದು ಸಾವಿರ, ಜೆಡಿಎಸ್ ಮುಖಂಡ ಲಿಂಗರಾಜು ೨೫ಸಾವಿರ ನಾಳೆ ಕೊಡುತ್ತಾರೆ, ಜಿಲಾ ಪಂಚಾಯಿತಿ ಸದಸ್ಯೆ ರಾಧನಾರಾಯಣ ಗೌಡ ಹತ್ತು ಸಾವಿರ ಧನ ಸಹಾಯ ಮಾಡಿದ್ದಾರೆ. ಉಳಿದಂತೆ ಅವರ ಮಗಳಿಗೆ ಹುಲಿನಾಯ್ಕರು ಅವರ ವಿದ್ಯಾ ಸಂಸ್ಥೆಯಲಿ ನಾಳೆಯೇ ಕೆಲಸ ಕೊಡುವವರಿದ್ದಾರೆ. ನಾನು ಮುಂದೆ ಅವರ ಕುಟುಂಬಕೆ ಹೆಚ್ಚಿನ ಸಹಕಾರ ನೀಡುವ ಭರವಸೆ ನೀಡಿದ್ದೇನೆ ಎಂದರು.
ಹೇಳಿಕೆ: ಸಿಂಧನೂರು ವಾಲ್ಮಿಕಿ ಗುರು ಪೀಠದ ಶ್ರೀವಾಲ್ಮಿಕಿ ಸಂಜಯ ಕುಮಾರಸ್ವಾಮಿ
ಸಮಾಜಕ್ಕೆ ಜಗದ್ಗುರು ಒಬ್ಬರನ್ನು ನೀಡಿದ ಮನೆಯನ್ನು ಕಾಯುವ ಕೆಲಸ ಆ ಸಮಾಜದ ಜವಬ್ಧಾರಿ. ಅದನ್ನು ಮರೆತಿದ್ದ ರಾಜ್ಯದ ಒಂದು ಕೋಟಿ ವಾಲ್ಮಕಿ ಜನಾಂಗದ ಕಣ್ಣು ತೆರೆಸುವ ಪುಣ್ಯ ಕೆಲಸವನ್ನು ವಿಜಯಕರ್ನಾಟಕ ಮಾಡಿದೆ. ಮೊದಲು ಪತ್ರಿಕೆಗೆ ಅಭಿನಂದನೆ ಎಂದು ಸಿಂಧನೂರು ವಾಲ್ಮಿಕಿ ಗುರು ಪೀಠದ ಶ್ರೀವಾಲ್ಮಿಕಿ ಸಂಜಯ ಕುಮಾರಸ್ವಾಮಿ ಹೇಳಿದ್ದಾರೆ.
ಮಂಗಳವಾರ ಸಂಜೆ ಶ್ರೀಪುಣ್ಯಾನಂದಪುರಿಸ್ವಾಮಿಗಳ ತಂದೆ ತಾಯಿಗಳ ಇರುವ ತಿಪಟೂರಿನ ಮನೆಗೆ ಬೇಟಿ ನೀಡಿ ಮನೆಯ ಪರಿಸ್ಥಿತ ಕಣ್ಣಾರೆ ಕಂಡು ತಮ್ಮ ವಿಷಾಧವ್ಯಕ್ತ ಪಡಿಸಿದರಲ್ಲದೇ ಇರುವ ವಾಸ್ತವಾಂಶ ತೆರೆದಿಟ್ಟ ಪತ್ರಿಕೆಯ ಪ್ರಯತ್ನವನ್ನು ಮನಸಾರೆ ಕೊಂಡಾಡಿದರು.
ಹೌದು, ಸಮಾಜ ತಿಳಿಯದೇ ತಪ್ಪು ಮಾಡಿದೆ ನಿಜ ಅದರ ನೈತಿಕ ಹೊಣೆಯನ್ನು ನಾವೇ ಹೊರುತ್ತೇವೆ. ಆಗಿರುವ ತಪ್ಪಿಗೆ ಕ್ಷಮೆ ಕೋರುತ್ತಾ ಮುಂದೆ ಈ ತರಹದ ಪ್ರಮಾದ ಆಗದಂತೆ ನೋಡಿ ಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದ ಅವರು ನಾವು ಮಠದ ಮತ್ತು ಸಮಾಜದ ಭಾಂಧವರ ಮನವೊಲಿಸಿ ಸಂಕಷ್ಟದಲ್ಲಿರುವ ಶ್ರೀಗಳ ಕುಟುಂಬಕ್ಕೆ ಶಕ್ತಿ ಮೀರಿ ಸಹಾಯ ಮಾಡುವ ಭರವಸೆಯನ್ನು ಇಂದು ನಾವು ನೀಡುತ್ತಿದೇವೆ. ಅಲ್ಲದೇ ಶ್ರೀಗಳ ತಂಗಿ ಕಲ್ಪನಾಳ ಮದುವೆಗೆ ಸಹಕಾರ ನೀಡುತ್ತೇವೆ ಎಂದ ಅವರು ಸಮಾಜದ ರಾಜ್ಯದ ಎಲ್ಲಾ ನಾಯಕರು ಈ ಕೂಡಲೇ ಅವರ ಮನೆಗೆ ಬೇಟಿ ನೀಡಿ ಸಾಂತ್ವನ ಹೇಳುವಂತೆ ಈ ಮೂಲಕ ಕೋರಿಕೊಂಡರು.
ಕುಮಾರಸ್ವಾಮಿ ಮಾನವೀಯ ಹೃದಯಕ್ಕೆ ವಂದನೆ:
ಮಂಗಳವಾರ ಸಂಜೆ ಶ್ರೀಪುಣ್ಯಾನಂದಪುರಿಸ್ವಾಮಿಗಳ ತಂದೆ ತಾಯಿಗಳ ಇರುವ ತಿಪಟೂರಿನ ಮನೆಗೆ ಬೇಟಿ ನೀಡಿ ಮನೆಯ ಪರಿಸ್ಥಿತ ಕಣ್ಣಾರೆ ಕಂಡು ತಮ್ಮ ವಿಷಾಧವ್ಯಕ್ತ ಪಡಿಸಿದರಲ್ಲದೇ ಇರುವ ವಾಸ್ತವಾಂಶ ತೆರೆದಿಟ್ಟ ಪತ್ರಿಕೆಯ ಪ್ರಯತ್ನವನ್ನು ಮನಸಾರೆ ಕೊಂಡಾಡಿದರು.
ಹೌದು, ಸಮಾಜ ತಿಳಿಯದೇ ತಪ್ಪು ಮಾಡಿದೆ ನಿಜ ಅದರ ನೈತಿಕ ಹೊಣೆಯನ್ನು ನಾವೇ ಹೊರುತ್ತೇವೆ. ಆಗಿರುವ ತಪ್ಪಿಗೆ ಕ್ಷಮೆ ಕೋರುತ್ತಾ ಮುಂದೆ ಈ ತರಹದ ಪ್ರಮಾದ ಆಗದಂತೆ ನೋಡಿ ಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದ ಅವರು ನಾವು ಮಠದ ಮತ್ತು ಸಮಾಜದ ಭಾಂಧವರ ಮನವೊಲಿಸಿ ಸಂಕಷ್ಟದಲ್ಲಿರುವ ಶ್ರೀಗಳ ಕುಟುಂಬಕ್ಕೆ ಶಕ್ತಿ ಮೀರಿ ಸಹಾಯ ಮಾಡುವ ಭರವಸೆಯನ್ನು ಇಂದು ನಾವು ನೀಡುತ್ತಿದೇವೆ. ಅಲ್ಲದೇ ಶ್ರೀಗಳ ತಂಗಿ ಕಲ್ಪನಾಳ ಮದುವೆಗೆ ಸಹಕಾರ ನೀಡುತ್ತೇವೆ ಎಂದ ಅವರು ಸಮಾಜದ ರಾಜ್ಯದ ಎಲ್ಲಾ ನಾಯಕರು ಈ ಕೂಡಲೇ ಅವರ ಮನೆಗೆ ಬೇಟಿ ನೀಡಿ ಸಾಂತ್ವನ ಹೇಳುವಂತೆ ಈ ಮೂಲಕ ಕೋರಿಕೊಂಡರು.
ಕುಮಾರಸ್ವಾಮಿ ಮಾನವೀಯ ಹೃದಯಕ್ಕೆ ವಂದನೆ:
ಪತ್ರಿಕೆ ವರದಿ ನೋಡಿ ತಕ್ಷಣ ತಿಪಟೂರಿಗೆ ಧಾವಿಸಿ, ನೊಂದ ಕುಟುಂಬಕ್ಕೆ ಸಾಂತ್ವನ ನೀಡುವುದರ ಜೊತೆಗೆ ಒಂದು ಲಕ್ಷ ಹಣ ಸಹಾಯ ಮಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಹೃದಯ ವೈಶಾಲ್ಯತೆ ಇಡೀ ಸಮಾಜ ಮೆಚ್ಚುವಂತಾದ್ದು. ಕಷ್ಟದಲ್ಲಿರುವವರಿಗೆ ಸ್ಪಂದಿಸುವ ಮನೋಭಾವ ಕೇಳಿದ್ದೆ ನೆನ್ನೆ ಪ್ರತ್ಯಕ್ಷ ನೋಡಿ ಹೃದಯ ತುಂಬಿ ಬಂತು ಎಂದು ಸಮಾಜದ ಪರವಾಗಿ ತಮ್ಮ ಮೆಚ್ಚಿಗೆ ವ್ಯಕ್ತ ಪಡಿಸಿದರು.
ಶ್ರೀಗಳು ಆತ್ಮಿಯರು:
ಪುಣ್ಯಾನಂದ ಪುರಿ ಸ್ವಾಮಿಜಿಗಳು ನಮ್ಮ ಆತ್ಮಿಯರು. ನಾವು ಅವರನ್ನು ಮರೆತಿದ್ದೇವು. ಆದರೆ ಪತ್ರಿಕೆಯ ವರದಿ ಅವರನ್ನು ಪುನಃ ನೆನಪಿಸಿದೆ. ಮಠಕ್ಕೆ ತಮ್ಮ ಹೆತ್ತ ತಂದೆ ತಾಯಿ ಕುಟುಂಬವನ್ನು ಬಿಟ್ಟು ಕೊಳ್ಳುತ್ತಿರಲಿಲ್ಲ. ಬಂದರೂ ಅಲ್ಲಿ ಊಟ ಮಾಡಲು ಬಿಡುತ್ತಿರಲಿಲ್ಲ. ಇದು ಸಮಜದ ಋಣ ನಿಮಗೆ ಬೇಡ ಎನ್ನುವಷ್ಟು ಪ್ರಮಾಣಿಕ ಶುದ್ಧರಾಗಿದ್ದರು. ಸಮಾಜಕ್ಕಾಗಿ ಸಾಕಷ್ಟು ಮಾಡಿದ್ದಾರೆ. ಅದರಲ್ಲಿ ತಿರುಗಿ ಅವರ ಕುಟುಂಬಕ್ಕೆ ಅಲ್ಪಪ್ರಮಾಣಲ್ಲಿ ನೀಡುವುದು ತಪ್ಪಲ್ಲ ಎಂದರು.
ಮಾನವೀಯತೆಯಿಂದ ಸಹಾಯ : ಶ್ರೀತಿರುದಾಸ
ಜಗದ್ಗರುಗಳ ಕುಟುಂಬ ಸಂಕಟದಲ್ಲಿದ್ದಾಗ ಮಾನವೀಯತೆಯಿಂದ ಸಹಾಯ ಮಾಡುವುದು ನಮ್ಮ ಧರ್ಮ ಎಂದು ಸಮಾಜ ಸೇವಕರಾದ ಶ್ರೀರಾಮನುಜ ಸೇವಾ ಟ್ರಸ್ಟ್ನ ಶ್ರೀತಿರುದಾಸ ಸ್ವಾಮಿಜಿ ಹೇಳಿದರು.
ಅವರು ಬುಧವಾರ ತಿಪಟೂರಿನ ಶ್ರೀಪುಣ್ಯಾನಂದಪುರಿ ಸ್ವಾಮಿಜಿಗಳ ಕುಟುಂಬಕ್ಕೆ ಬೇಟಿ ನೀಡಿ ಆರೈಕೆ ವಿಚಾರಿಸಿದ್ದರಲ್ಲದೇ ನಿಮ್ಮ ಮಗ ಸನ್ಯಾಸಿಯಾಗಿದ್ದು ಪುಣ್ಯದ ಕೆಲಸ. ಒಬ್ಬ ಸನ್ಯಾಸಿಯಾದರೆ ಅವರ ಕುಟುಂಬದ ೧೪ ತಲೆಮಾರು ಕಾಯುತ್ತದೆ. ಭಯ ಪಡಬೇಕಿಲ್ಲ. ಒಳ್ಳೆಕಾಲ ಬಂದಿದೆ ಎಂದ ಅವರು ಕುಟುಂಬಕ್ಕೆ ಐದು ಸಾವಿರ ರೂಗಳ ಧನ ಸಹಾಯ ಮಾಡಿದರು.
೨೦ಸಾವಿರ ಹಣ ಸಹಾಯ ಮಾಡಿದ ಕೃಷಿ ಇಲಾಖೆ ಉಪನಿರ್ದೇಶಕ:
ಯಾದಗಿರಿಯ ಕೃಷಿ ಇಲಾಖೆಯಲ್ಲಿ ಉಪನಿರ್ದೆಶಕರಾಗಿರುವ ಅಶೋಕಕುಮಾರ್ ಅವರು ಗುರುವಾರ ಶ್ರೀಪುಣ್ಯಾನಂದಪುರಿ ಸ್ವಾಮಿಜಿಗಳ ಕುಟುಂಬಕ್ಕೆ ಬೇಟಿ ನೀಡಿ ಸ್ವಾಮಿಗಳ ಶ್ರಮ ಹಾಗೂ ಅವರು ಸಮಾಜಕ್ಕಾಗಿ ಮಾಡಿದ ಸೇವೆಯನ್ನು ಶ್ಲಾಘಿಸಿದ ಅವರು ಶ್ರೀಗಳ ಕುಟುಂಬಕ್ಕೆ ೨೦ಸಾವಿರ ಹಣ ಸಹಾಯ ಮಾಡಿದರು.
ಅವರು ಬುಧವಾರ ತಿಪಟೂರಿನ ಶ್ರೀಪುಣ್ಯಾನಂದಪುರಿ ಸ್ವಾಮಿಜಿಗಳ ಕುಟುಂಬಕ್ಕೆ ಬೇಟಿ ನೀಡಿ ಆರೈಕೆ ವಿಚಾರಿಸಿದ್ದರಲ್ಲದೇ ನಿಮ್ಮ ಮಗ ಸನ್ಯಾಸಿಯಾಗಿದ್ದು ಪುಣ್ಯದ ಕೆಲಸ. ಒಬ್ಬ ಸನ್ಯಾಸಿಯಾದರೆ ಅವರ ಕುಟುಂಬದ ೧೪ ತಲೆಮಾರು ಕಾಯುತ್ತದೆ. ಭಯ ಪಡಬೇಕಿಲ್ಲ. ಒಳ್ಳೆಕಾಲ ಬಂದಿದೆ ಎಂದ ಅವರು ಕುಟುಂಬಕ್ಕೆ ಐದು ಸಾವಿರ ರೂಗಳ ಧನ ಸಹಾಯ ಮಾಡಿದರು.
ಅಮೇರಿಕಾದ ನ್ಯೂಯಾರ್ಕ್ ಐಲ್ಯಾಂಡ್ನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಬೆಂಗಳೂರು ಮೂಲದ ಎಂ.ಶ್ರೀನಿವಾಸ ವಿಜಯಕರ್ನಾಟಕ ಇ-ಪೇಪರ್ನಲ್ಲಿ ಪ್ರಕಟವಾದ ಸುದ್ದಿ ನೋಡಿ ಕುಟುಂಬಕ್ಕೆ ಸಹಾಯ ಮಾಡುವ ಆಸಕ್ತಿ ತೋರಿದ್ದಾರೆ. ಹೆಚ್ಚಿನ ಹಣಕಾಸು ಜೊತೆಗೆ ಮಗಳ ಮದುವೆಗೂ ಸಹಕಾರ ನೀಡುವ ಭರವಸೆಯನ್ನು ಅವರು ನೀಡಿದ್ದಾರೆ ಎಂದು ಅವರ ಪರವಾಗಿ ಶ್ರೀತಿರು ಸ್ವಾಮಿಗಳು ಹೇಳಿ, ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಕಡೂರು ತಾಲೂಕು ಸಮಾಜಸೇವಕ ಬಾಲು ಉಪಸ್ಥಿತರಿದ್ದರು.
ಯಾದಗಿರಿಯ ಕೃಷಿ ಇಲಾಖೆಯಲ್ಲಿ ಉಪನಿರ್ದೆಶಕರಾಗಿರುವ ಅಶೋಕಕುಮಾರ್ ಅವರು ಗುರುವಾರ ಶ್ರೀಪುಣ್ಯಾನಂದಪುರಿ ಸ್ವಾಮಿಜಿಗಳ ಕುಟುಂಬಕ್ಕೆ ಬೇಟಿ ನೀಡಿ ಸ್ವಾಮಿಗಳ ಶ್ರಮ ಹಾಗೂ ಅವರು ಸಮಾಜಕ್ಕಾಗಿ ಮಾಡಿದ ಸೇವೆಯನ್ನು ಶ್ಲಾಘಿಸಿದ ಅವರು ಶ್ರೀಗಳ ಕುಟುಂಬಕ್ಕೆ ೨೦ಸಾವಿರ ಹಣ ಸಹಾಯ ಮಾಡಿದರು.
ಪರ್ಯಾಯ ಮಠ ಸ್ಥಾಪನೆ ಅನಿವಾರ್ಯ:
ವಾಲ್ಮಿಕಿ ಸಮಾಜದ ರಾಜನಹಳ್ಳಿ ಗುರುಪೀಠದ ಶ್ರೀಪ್ರಸನ್ನಾನಂದ ಸ್ವಾಮಿಜಿ ಅವರು ಪುಣ್ಯಾನಂದ ಶ್ರೀಗಳ ಕುಟುಂಬಕ್ಕೆ ಸಹಾಯ ಮಾಡಿರುವುದಾಗಿ ಹೇಳುವ ಮೂಲಕ ಸಮಾಜಕ್ಕೆ ತಪ್ಪು ಮಾಹಿತಿ ರವಾನಿಸಿದ್ದಾರೆಂದು ವಿರೋಧಿಸಿ ನಾನಾ ಸಂಘಟನೆಗಳ ಮುಖಂಡರು ಗುರುವಾರ ನಗರದಲ್ಲಿ ದಿಡೀರ್ ಪ್ರತಿಭಟನೆ ನಡೆಸಿದರು. ತಾಲೂಕು ನಾಯಕ ಸಂಘದ ಕಾರ್ಯದರ್ಶಿ ಜಯಸಿಂಹ ಮತ್ತು ದೊಡ್ಡಯ್ಯ, ಶೆಡ್ಯೂಲ್ ಕ್ಯಾಸ್ಟ್ ಫಡರೇಷನ್ ಹಾಗೂ ಕ್ರಿಯಾಶೀಲ ಜಾತಿಗಳ ಒಕ್ಕೂಟದ ಸೂರ್ಯಪ್ರಕಾಶ್ಕೋಲಿ ಮತ್ತಿತರರು ತಿಪಟೂರಿನ ಸಿಂಗ್ರಿವೃತ್ತದಲ್ಲಿ ಸಮಾವೇಶಗೊಂಡು ಶ್ರೀಗಳು ಕುಟುಂಬದ ವಿರುದ್ಧ ನೀಡಿರುವ ಹೇಳಿಕೆಯನ್ನು ಖಂಡಿಸಿದರು.
ಮಠಲದಲ್ಲಿ ಯಾರಿಗೂ ತಾರತಮ್ಯ ಮಾಡದೇ ಸಮಾನತೆಯಿಂದ ನೋಡ ಬೇಕು. ಮಠದಲ್ಲಿ ಪುಣ್ಯಾನಂದ ಸ್ವಾಮಿಜಿಗಳ ಕುಟುಂಬಕ್ಕೆ ತಂಗಲು ಒಂದು ಮನೆ ನಿರ್ಮಿಸಬೇಕು. ವಾಲ್ಮಿಕಿ ಸಮಾಜದ ರಾಜನಹಳ್ಳಿ ಟ್ರಸ್ಟ್ ನೊಂದ ಕುಟುಂಬಕ್ಕೆ ನೀಡಿರುವ ಆಶ್ವಾಸನೆಯಂತೆ ಪರಿಹಾರ ನೀಡಬೇಕು. ಶ್ರೀಗಳ ಕುಟುಂಬಕೆ ನ್ಯಾಯ ಸಿಗದಿದ್ದರೆ ಬೀದಿಗಳಿದು ಹೋರಾಟ ಮಾಡುವ ಜೊತೆಗೆ ಪರ್ಯಾಯ ಮಠ ಸ್ಥಾಪಿಸುವ ಅನಿವಾರ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.ಪ್ರಸನ್ನಾನಂದಪುರಿ ಸ್ವಾಮಿಗಳ ಹೇಳಿಕೆಗೆ ಕುಟುಂಬದ ಪ್ರತಿಕ್ರಿಯೆ:
ತಿಪಟೂರು: ವಾಲ್ಮಿಕಿ ಗುರು ಪೀಠದ ಬಗ್ಗೆ ನಮ್ಮ ವಿಶೇಷ ಗೌರವ, ಭಕ್ತಿ ಮತ್ತು ಪ್ರೀತಿ ಇದೆ. ನಾವು ಬಡವರು ನಿಜ ಆದರೆ ಸುಳ್ಳು ಹೇಳಲು ನಮಗೆ ಬರುವುದಿಲ್ಲ. ಶ್ರೀಗಳು ವಾಸ್ತವಾಂಶ ಮರೆ ಮಾಚಿ ಹೇಳಿಕೆ ನೀಡಿರುವುದು ನಮ್ಮ ಮನಸ್ಸಿಗೆ ನೋವಾಗಿದೆ ಎಂದು ಪುಣ್ಯಾನಂದಪುರಿಸ್ವಾಮಿಜಿಗಳ ಹೆತ್ತವರು ಪ್ರತಿಕ್ರಿಯಿಸಿದ್ದಾರೆ.
ಶ್ರೀಗಳು ಗುರುವಾರ ಪತ್ರಿಕೆಗೆ ಹೇಳಿಕೆ ನೀಡಿ ಪುಣ್ಯಾನಂದಪುರಿ ಶ್ರೀಗಳ ಕುಟುಂಬವನ್ನು ನಿರ್ಲಕ್ಷಿಸಿಲ್ಲ, ಹಣಕಾಸು ನೆರವು ನೀಡಿದ್ದೇವೆ ಎಂದು ಹೇಳಿರುವ ಮಾತಿಗೆ ಪ್ರತಿಕ್ರಿಯಿಸಿರುವ ಅವರು ಶ್ರೀಗಳ ಬಗ್ಗೆ ನಮಗೆ ಪೂಜ್ಯಭಾವನೆ ಇದೆ, ತಿರುಗಿ ಅವರ ವಿರುದ್ಧ ಹೇಳಿಕೆ ನೀಡುವುದು ಧರ್ಮವಲ್ಲ ಆದರೆ ನಮ್ಮದು ತಪ್ಪು ಎಂದು ಕಂಡು ಬಂದರೆ ಸತ್ಯ ಹೇಳುವದು ಅನಿವಾರ್ಯವಾಗಿದೆ. ಮೊದಲು ಸಮಾಜದ ಕ್ಷಮೆ ಕೋರಿ ಹೇಳಿಕೆ ನೀಡುತ್ತಿದ್ದೇವೆ. ನಾವು ಬಡವರು. ಬಲಿಷ್ಟರಲ್ಲ. ನಮ್ಮದೇನು ನಡೆಯುವುದಿಲ್ಲ. ಹಾಗಾಗಿ ನಾವು ಯಾರೊಂದಿಗೂ ವಾದಕ್ಕಿಳಿಯುವುದಿಲ್ಲ. ಇಷ್ಟು ಮಾತ್ರ ಸತ್ಯ. ಶ್ರೀಗಳು ಹೇಳುತ್ತಿರುವುದು ಅರ್ಧ ಸತ್ಯ ಮಾತ್ರ ಎಂದು ಅವರು ಸ್ಪಷ್ಟಿಕರಿಸಿದ್ದಾರೆ.
ನಮ್ಮ ಶ್ರೀಗಳು ಅಗಲಿದ ನಂತರ ವರ್ಷಕ್ಕೆ ನಾಲ್ಕೈದು ಬಾರಿ ರಾಜನಹಳ್ಳಿಗೆ ಹೋಗಿ ಗದ್ದಿಗೆ ಪೂಜಿಸಿ, ದರ್ಶನ ಪಡೆದು ಬರುತ್ತಿದ್ದೇವು. ನಮ್ಮ ಸ್ವಾಮಿಜಿಯ ನಂತರ ಒಂದೂವರೆ ಎರಡು ವರ್ಷದ ನಂತರವಷ್ಟೇ ಅಂದರೆ ೨೦೦೮ರ ಆಗಸ್ಟ್ ೧೪ರಂದು ನೂತನ ಶ್ರೀಗಳು ಪೀಠಕ್ಕೆ ಬಂದರು. ನಂತರ ನಾವು ಗದ್ದಿಗೆಗೆ ಹೋದ ಸಂದರ್ಭದಲ್ಲಿ ಎರಡು ಮೂರು ಬಾರಿ ಮಾತ್ರ ಶ್ರೀಗಳು ನಮಗೆ ಸಿಗುತ್ತಿದ್ದರು. ಉಳಿದಂತೆ ಹೊರಗೆ ಹೋಗಿರುತ್ತಿದ್ದರು. ನಮ್ಮನ್ನು ಕಂಡಾಗ ಅವರ ಕೈಯಲಿದ್ದ ಒಂದು ಸಾವಿರ, ಎರಡು ಸಾವಿರ, ಮೂರು ಸಾವಿರ ಕೊಡುತ್ತಿದ್ದದ್ದು ನಿಜ. ಆದರೆ ಆ ಹಣ ಬಸ್ಸಿನ ಖರ್ಚಿಗೆಂದು ತಿಳಿದಿದ್ದೇವು ಜೀವನೋಪಾಯಕ್ಕೆ ಕೊಡುತ್ತಿದ್ದರು ಎಂದು ನಮಗೆ ಗೊತ್ತಿರಲಿಲ್ಲ. ಮಠದಲ್ಲಿ ನಾವು ಉಳಿದುಕೊಳ್ಳಲು ಬೇರೆ ಯಾವುದೇ ವ್ಯವಸ್ಥೆಯಿಲ್ಲ. ನಾವು ಹೋದಾಗ ಅಲ್ಲಿ ಅವರು ನಮ್ಮನ್ನು ಹೇಗೆ ನೋಡಿ ಕೊಳ್ಳುತ್ತಾರೆ ಎಂಬುದು ಶ್ರೀಗಳಿಗೆ ಚೆನ್ನಾಗಿ ಗೊತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
೨೦೦೭ರ ಏಪ್ರಿಲ್ ೪ರಂದು ಶ್ರೀಗಳು ಅಗಲಿದ ಸಂದರ್ಭದಲ್ಲಿ ನಡೆದ ಸಭೆಯಲ್ಲಿ ಜನರ ಎದುರು ಮತ್ತು ಬೆಂಗಳೂರು ಓಂಕಾರಾಶ್ರಮದ ಶ್ರೀಶಿವಪುರಿಸ್ವಾಮಿಗಳ ಸಾನಿಧ್ಯದಲ್ಲಿ ಸಮಾಜದ ನಾಯಕರು, ಮುಖಂಡರು, ಟ್ರಸ್ಟ್ನವರು ನಮ್ಮ ದುಸ್ಥಿತಿಕೊಂಡು ಸಹಾಯ ಮಾಡುವ ಭರವಸೆ ನೀಡಿದ್ದರು. ಐದು ಲಕ್ಷ ಪರಿಹಾರ, ಒಂದು ಮನೆ, ನಾವು ಒಡಾಡಲು ಒಂದು ಕಾರು, ಇಬ್ಬರು ಗಂಡು ಮಕ್ಕಳ ಜೀವನೋಪಾಯಕ್ಕೆ ಎರಡು ಆಟೋ ಕೊಡಿಸಿ ಇರುವ ಮಗಳ ಮದುವೆ ಮಾಡಿಕೊಡುವ ಮಾತು ಕೊಟ್ಟಿದ್ದರು. ಇದಕ್ಕೂ ಮುಂಚಿನ ಸಭೆಯಲ್ಲಿ ಕುಟುಂಬದ ಒಬ್ಬರನ್ನು ಟ್ರಸ್ಟಿಯಾಗಿ ತೆಗೆದುಕೊಳ್ಳುವ ಮಾತನ್ನು ಹೇಳಿದ್ದರು. ಆ ದಾಖಲೆ ನಮ್ಮ ಬಳಿ ಇದೆ. ಶ್ರೀದಯಾನಂದಪುರಿ ಸ್ವಾಮಿಜಿಗಳ ನೇತೃತ್ವದಲ್ಲಿ ಟ್ರಸ್ಟ್ನವರು ನಮ್ಮ ಮನೆ ಬಳಿಗೆ ಬಂದು ವಾಸ್ತವ ಕಂಡು ಹೆಚ್ಚಿನ ಸಹಾಯ ಮಾಡುವ ಭರವಸೆ ನೀಡಿದ್ದರು. ಆದರೆ ಇದೂವರೆಗೂ ಯಾವುದೇ ಸಹಾಯ ಮಾಡಿಲ್ಲ. ಸಹಾಯ ಕೋರಿ ಹೋದಾಗ ಶ್ರೀರಾಮುಲು ಬಳಿಗೆ ಹೋಗಿ, ಜಾರಕಿಹೊಳಿ ಬಳಿಗೆ ಹೋಗಿ ಎಂದು ಹೇಳಿ ಕಳುಹಿಸುತ್ತಿದ್ದರು. ಸಂಜೆಯವರೆಗೂ ಕಾದು ಕುಳಿತರೂ ಅವರು ಅಲ್ಲಿ ಸಿಗುತ್ತಿರಲಿಲ್ಲ ನಾವು ವಯಸ್ಸಾದವರು ಏನೋ ಪರಿಹಾರ ಸಿಗುತ್ತದೆ ಎಂದು ಎಲ್ಲಾ ಕಡೆಯೂ ಅಲೆದು ಅಲೆದು ಸಾಕಾಗಿ ನಿತ್ರಾಣರಾಗುತ್ತಿದ್ದೇವು. ಇದಕ್ಕಾಗಿಯೇ ಸಾಕಷ್ಟು ಹಣವನ್ನೂ ಖರ್ಚು ಮಾಡಿದ್ದೇವೆ. ನಾವು ಕೂಲಿ ಮಾಡಿ ಜೀವನ ಮಾಡುವವರು ಈ ರೀತಿ ಓಡಾಡುತ್ತಾ ದುಡ್ಡು ಖರ್ಚು ಮಾಡಲು ಸಾಧ್ಯವೇ ನೀವೇ ಹೇಳಿ ಎಂದು ಮರು ಪ್ರಶ್ನಿಸಿದಾರೆ.
ಮೈಸೂರು ಭಾಗದವರು, ಚಿಂತಾಮಣಿಯವರು ಯಾವುದೇ ಹಣವನು ನಮಗೆ ನೇರವಾಗಿ ಕೊಟ್ಟಿಲ್ಲ, ಇದು ಸುಳ್ಳು. ಶ್ರೀಗಳು ಅಗಲಿದ ಸಮಯದಲ್ಲಿ ಅಂದು ಇದೇ ವಿಜಯಕರ್ನಾಟಕ ಪತ್ರಿಕೆಯಲಲಿ ಬಂದ ನಮ್ಮ ದುಸ್ಥತಿ ವರದಿ ನೋಡಿದ ನಾನಾ ಭಕ್ತರು ಅನುಕಂಪದಲ್ಲಿ ನೀಡಿದ ಹಣವನ್ನು ಟ್ರಸ್ಟಿ ಸತೀಶ್ ಜಾರಕಿಹೊಳಿ ಇಟ್ಟುಕೊಂಡು ಒಟ್ಟಿಗೆ ಕೊಡುತ್ತೇವೆ ಎಂದು ಹೇಳಿದ್ದು ಮುಂದೆ ಕೊಡಲಿಲ್ಲ. ಆದರೆ ಟ್ರಸ್ಟ್ ಹೊರತಾಗಿ ವೈಯಕ್ತಿಕವಾಗಿ ಸಹಾಯ ಮಾಡುತ್ತಿದೇನೆ ಎಂದು ಬಾಲಚಂದ್ರ ಜಾರಕಿಹೊಳಿ ಎರಡು ಸಲ ೨೦ಸಾವಿರ ಕೊಟ್ಟು, ಮನೆಯನ್ನು ಕೊಡಿಸುವ ಭರವಸೆ ನೀಡಿದ್ದರು. ಆದರೆ ಅದೂ ಸಾಧ್ಯವಾಗಿಲ್ಲ. ಮುಂದೆ ಅವರು ಸಿಗಲಿಲ್ಲ. ಅಲ್ಲದೇ ಬಳ್ಳಾರಿಯ ನಮ್ಮ ಸಮಾಜ ಭಾಂದವರು ಜಂಬಯ್ಯನಾಯಕರ ನೇತೃತ್ವದಲ್ಲಿ ಹಣ ಸಂಗ್ರಹಿಸಿ ೮೦ಸಾವಿರ ಕೊಟ್ಟಿದ್ದರು. ಇಷ್ಟು ಹಣವನ್ನು ನಮ್ಮ ಹಿರಿಯ ಮಗಳ ಮದುವೆಯಲ್ಲಿ ಮಾಡಿದ ಸಾಲವನ್ನು ತೀರಿಸಿಕೊಂಡಿದ್ದು ನಿಜ ಎಂದು ಹೆತ್ತವರು ಒಪ್ಪಿಕೊಂಡಿದ್ದಾರೆ.
ನಮ್ಮ ಸ್ವಾಮಿಜಿ ಇದ್ದಾಗ ನಾವು ಮಠಕ್ಕೆ ಬರುವುದು, ಅಲ್ಲಿ ಊಟ ಮಾಡುವುದಕ್ಕೆ ಬಿಡುತ್ತಿರಲಿಲ್ಲ. ಸಮಾಜದ ಋಣ ನಿಮಗೆ ಬೇಡ ಎಂದು ಹೇಳುತ್ತಿದ್ದರು. ಇಂತಹ ಪ್ರಾಮಾಣಿಕ ದೈವಭಕ್ತರ ಕುಟುಂಬದವರಾದ ನಾವು ಅವರು ಇಲ್ಲದ ಸಮಯದಲ್ಲಿ ಮಠದಲ್ಲಿ ಕುಳಿತು ಪುಕ್ಕಟೆ ಊಟ ಮಾಡುವುದು ಸರಿಯೇ, ನಾವು ಬಡವರು ಸರಿ, ಆದರೆ ನಿರ್ಗತಿಕರಲ್ಲ. ನಮಗೂ ಸ್ವಾಭಿಮಾನವಿದೆ. ವಯಸ್ಸಾದರೂ ನಮ್ಮ ತೋಳು ಬಲ ಚೆನ್ನಾಗಿದೆ. ಶಕ್ತಿ ಇರುವವರೆಗೂ ದುಡಿದು ನಮ್ಮ ಹಸಿವನ್ನು ಶಮನ ಮಾಡುತ್ತೇವೆ. ಆಗಾಗಿ ನಾವು ಮಠದಲ್ಲಿ ಇರಲು ಒಪ್ಪಲಿಲ್ಲ. ಕೊಟ್ಟ ಮಾತಿಗೆ ನಡೆದು ಕೊಳ್ಳುವ ಮನಸ್ಸು ಮತ್ತು ಪ್ರಯತ್ನ ಮಾಡದ ಟ್ರಸ್ಟ್ನವರು ಇಂತಹ ಮಾತುಗಳನ್ನು ಸಾಕಷ್ಟು ಸಲ ಆಡಿದ್ದಾರೆ. ಆದರೆ ನಮ್ಮ ಹಸಿವನ್ನು ಹಿಂಗಿಸುವ ಪರ್ಯಾಯ ಮಾರ್ಗ ಕಲ್ಪಿಸಿಕೊಡಲೇ ಇಲ್ಲ. ಈಗ ಮದುವೆ ಮಾಡುತ್ತೇವೆ, ಸಹಾಯ ಮಾಡುತ್ತೇವೆ ಎಂದು ಹೇಳಿಕೆ ಕೊಡುತ್ತಿರುವವರು ಇಷ್ಟು ದಿನ ಏನು ಮಾಡುತ್ತಿದ್ದರು? ಎಂದು ಪ್ರಶ್ನಿಸುತ್ತಾರೆ. ಇವರ ವರ್ತನೆ ಬೇಸತ್ತು ನಾವು ಸುಮ್ಮನಿದ್ದೇವು. ಆದರೆ ಪತ್ರಿಕೆಯವರು ಬರೆದು ಪುನಃ ಇದಕ್ಕೆ ಜೀವ ತುಂಬಿದ್ದಾರೆ. ಪತ್ರಿಕೆಯವರಿಗೆ ಇರುವ ಕಾಳಜಿ, ಮಾನವೀಯತೆ ಟ್ರಸ್ಟ್ನವರಿಗೆ ಏಕಿಲ್ಲ ಎಂದಿದ್ದಾರೆ.
ಶ್ರೀಗಳು ಗುರುವಾರ ಪತ್ರಿಕೆಗೆ ಹೇಳಿಕೆ ನೀಡಿ ಪುಣ್ಯಾನಂದಪುರಿ ಶ್ರೀಗಳ ಕುಟುಂಬವನ್ನು ನಿರ್ಲಕ್ಷಿಸಿಲ್ಲ, ಹಣಕಾಸು ನೆರವು ನೀಡಿದ್ದೇವೆ ಎಂದು ಹೇಳಿರುವ ಮಾತಿಗೆ ಪ್ರತಿಕ್ರಿಯಿಸಿರುವ ಅವರು ಶ್ರೀಗಳ ಬಗ್ಗೆ ನಮಗೆ ಪೂಜ್ಯಭಾವನೆ ಇದೆ, ತಿರುಗಿ ಅವರ ವಿರುದ್ಧ ಹೇಳಿಕೆ ನೀಡುವುದು ಧರ್ಮವಲ್ಲ ಆದರೆ ನಮ್ಮದು ತಪ್ಪು ಎಂದು ಕಂಡು ಬಂದರೆ ಸತ್ಯ ಹೇಳುವದು ಅನಿವಾರ್ಯವಾಗಿದೆ. ಮೊದಲು ಸಮಾಜದ ಕ್ಷಮೆ ಕೋರಿ ಹೇಳಿಕೆ ನೀಡುತ್ತಿದ್ದೇವೆ. ನಾವು ಬಡವರು. ಬಲಿಷ್ಟರಲ್ಲ. ನಮ್ಮದೇನು ನಡೆಯುವುದಿಲ್ಲ. ಹಾಗಾಗಿ ನಾವು ಯಾರೊಂದಿಗೂ ವಾದಕ್ಕಿಳಿಯುವುದಿಲ್ಲ. ಇಷ್ಟು ಮಾತ್ರ ಸತ್ಯ. ಶ್ರೀಗಳು ಹೇಳುತ್ತಿರುವುದು ಅರ್ಧ ಸತ್ಯ ಮಾತ್ರ ಎಂದು ಅವರು ಸ್ಪಷ್ಟಿಕರಿಸಿದ್ದಾರೆ.
ನಮ್ಮ ಶ್ರೀಗಳು ಅಗಲಿದ ನಂತರ ವರ್ಷಕ್ಕೆ ನಾಲ್ಕೈದು ಬಾರಿ ರಾಜನಹಳ್ಳಿಗೆ ಹೋಗಿ ಗದ್ದಿಗೆ ಪೂಜಿಸಿ, ದರ್ಶನ ಪಡೆದು ಬರುತ್ತಿದ್ದೇವು. ನಮ್ಮ ಸ್ವಾಮಿಜಿಯ ನಂತರ ಒಂದೂವರೆ ಎರಡು ವರ್ಷದ ನಂತರವಷ್ಟೇ ಅಂದರೆ ೨೦೦೮ರ ಆಗಸ್ಟ್ ೧೪ರಂದು ನೂತನ ಶ್ರೀಗಳು ಪೀಠಕ್ಕೆ ಬಂದರು. ನಂತರ ನಾವು ಗದ್ದಿಗೆಗೆ ಹೋದ ಸಂದರ್ಭದಲ್ಲಿ ಎರಡು ಮೂರು ಬಾರಿ ಮಾತ್ರ ಶ್ರೀಗಳು ನಮಗೆ ಸಿಗುತ್ತಿದ್ದರು. ಉಳಿದಂತೆ ಹೊರಗೆ ಹೋಗಿರುತ್ತಿದ್ದರು. ನಮ್ಮನ್ನು ಕಂಡಾಗ ಅವರ ಕೈಯಲಿದ್ದ ಒಂದು ಸಾವಿರ, ಎರಡು ಸಾವಿರ, ಮೂರು ಸಾವಿರ ಕೊಡುತ್ತಿದ್ದದ್ದು ನಿಜ. ಆದರೆ ಆ ಹಣ ಬಸ್ಸಿನ ಖರ್ಚಿಗೆಂದು ತಿಳಿದಿದ್ದೇವು ಜೀವನೋಪಾಯಕ್ಕೆ ಕೊಡುತ್ತಿದ್ದರು ಎಂದು ನಮಗೆ ಗೊತ್ತಿರಲಿಲ್ಲ. ಮಠದಲ್ಲಿ ನಾವು ಉಳಿದುಕೊಳ್ಳಲು ಬೇರೆ ಯಾವುದೇ ವ್ಯವಸ್ಥೆಯಿಲ್ಲ. ನಾವು ಹೋದಾಗ ಅಲ್ಲಿ ಅವರು ನಮ್ಮನ್ನು ಹೇಗೆ ನೋಡಿ ಕೊಳ್ಳುತ್ತಾರೆ ಎಂಬುದು ಶ್ರೀಗಳಿಗೆ ಚೆನ್ನಾಗಿ ಗೊತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
೨೦೦೭ರ ಏಪ್ರಿಲ್ ೪ರಂದು ಶ್ರೀಗಳು ಅಗಲಿದ ಸಂದರ್ಭದಲ್ಲಿ ನಡೆದ ಸಭೆಯಲ್ಲಿ ಜನರ ಎದುರು ಮತ್ತು ಬೆಂಗಳೂರು ಓಂಕಾರಾಶ್ರಮದ ಶ್ರೀಶಿವಪುರಿಸ್ವಾಮಿಗಳ ಸಾನಿಧ್ಯದಲ್ಲಿ ಸಮಾಜದ ನಾಯಕರು, ಮುಖಂಡರು, ಟ್ರಸ್ಟ್ನವರು ನಮ್ಮ ದುಸ್ಥಿತಿಕೊಂಡು ಸಹಾಯ ಮಾಡುವ ಭರವಸೆ ನೀಡಿದ್ದರು. ಐದು ಲಕ್ಷ ಪರಿಹಾರ, ಒಂದು ಮನೆ, ನಾವು ಒಡಾಡಲು ಒಂದು ಕಾರು, ಇಬ್ಬರು ಗಂಡು ಮಕ್ಕಳ ಜೀವನೋಪಾಯಕ್ಕೆ ಎರಡು ಆಟೋ ಕೊಡಿಸಿ ಇರುವ ಮಗಳ ಮದುವೆ ಮಾಡಿಕೊಡುವ ಮಾತು ಕೊಟ್ಟಿದ್ದರು. ಇದಕ್ಕೂ ಮುಂಚಿನ ಸಭೆಯಲ್ಲಿ ಕುಟುಂಬದ ಒಬ್ಬರನ್ನು ಟ್ರಸ್ಟಿಯಾಗಿ ತೆಗೆದುಕೊಳ್ಳುವ ಮಾತನ್ನು ಹೇಳಿದ್ದರು. ಆ ದಾಖಲೆ ನಮ್ಮ ಬಳಿ ಇದೆ. ಶ್ರೀದಯಾನಂದಪುರಿ ಸ್ವಾಮಿಜಿಗಳ ನೇತೃತ್ವದಲ್ಲಿ ಟ್ರಸ್ಟ್ನವರು ನಮ್ಮ ಮನೆ ಬಳಿಗೆ ಬಂದು ವಾಸ್ತವ ಕಂಡು ಹೆಚ್ಚಿನ ಸಹಾಯ ಮಾಡುವ ಭರವಸೆ ನೀಡಿದ್ದರು. ಆದರೆ ಇದೂವರೆಗೂ ಯಾವುದೇ ಸಹಾಯ ಮಾಡಿಲ್ಲ. ಸಹಾಯ ಕೋರಿ ಹೋದಾಗ ಶ್ರೀರಾಮುಲು ಬಳಿಗೆ ಹೋಗಿ, ಜಾರಕಿಹೊಳಿ ಬಳಿಗೆ ಹೋಗಿ ಎಂದು ಹೇಳಿ ಕಳುಹಿಸುತ್ತಿದ್ದರು. ಸಂಜೆಯವರೆಗೂ ಕಾದು ಕುಳಿತರೂ ಅವರು ಅಲ್ಲಿ ಸಿಗುತ್ತಿರಲಿಲ್ಲ ನಾವು ವಯಸ್ಸಾದವರು ಏನೋ ಪರಿಹಾರ ಸಿಗುತ್ತದೆ ಎಂದು ಎಲ್ಲಾ ಕಡೆಯೂ ಅಲೆದು ಅಲೆದು ಸಾಕಾಗಿ ನಿತ್ರಾಣರಾಗುತ್ತಿದ್ದೇವು. ಇದಕ್ಕಾಗಿಯೇ ಸಾಕಷ್ಟು ಹಣವನ್ನೂ ಖರ್ಚು ಮಾಡಿದ್ದೇವೆ. ನಾವು ಕೂಲಿ ಮಾಡಿ ಜೀವನ ಮಾಡುವವರು ಈ ರೀತಿ ಓಡಾಡುತ್ತಾ ದುಡ್ಡು ಖರ್ಚು ಮಾಡಲು ಸಾಧ್ಯವೇ ನೀವೇ ಹೇಳಿ ಎಂದು ಮರು ಪ್ರಶ್ನಿಸಿದಾರೆ.
ಮೈಸೂರು ಭಾಗದವರು, ಚಿಂತಾಮಣಿಯವರು ಯಾವುದೇ ಹಣವನು ನಮಗೆ ನೇರವಾಗಿ ಕೊಟ್ಟಿಲ್ಲ, ಇದು ಸುಳ್ಳು. ಶ್ರೀಗಳು ಅಗಲಿದ ಸಮಯದಲ್ಲಿ ಅಂದು ಇದೇ ವಿಜಯಕರ್ನಾಟಕ ಪತ್ರಿಕೆಯಲಲಿ ಬಂದ ನಮ್ಮ ದುಸ್ಥತಿ ವರದಿ ನೋಡಿದ ನಾನಾ ಭಕ್ತರು ಅನುಕಂಪದಲ್ಲಿ ನೀಡಿದ ಹಣವನ್ನು ಟ್ರಸ್ಟಿ ಸತೀಶ್ ಜಾರಕಿಹೊಳಿ ಇಟ್ಟುಕೊಂಡು ಒಟ್ಟಿಗೆ ಕೊಡುತ್ತೇವೆ ಎಂದು ಹೇಳಿದ್ದು ಮುಂದೆ ಕೊಡಲಿಲ್ಲ. ಆದರೆ ಟ್ರಸ್ಟ್ ಹೊರತಾಗಿ ವೈಯಕ್ತಿಕವಾಗಿ ಸಹಾಯ ಮಾಡುತ್ತಿದೇನೆ ಎಂದು ಬಾಲಚಂದ್ರ ಜಾರಕಿಹೊಳಿ ಎರಡು ಸಲ ೨೦ಸಾವಿರ ಕೊಟ್ಟು, ಮನೆಯನ್ನು ಕೊಡಿಸುವ ಭರವಸೆ ನೀಡಿದ್ದರು. ಆದರೆ ಅದೂ ಸಾಧ್ಯವಾಗಿಲ್ಲ. ಮುಂದೆ ಅವರು ಸಿಗಲಿಲ್ಲ. ಅಲ್ಲದೇ ಬಳ್ಳಾರಿಯ ನಮ್ಮ ಸಮಾಜ ಭಾಂದವರು ಜಂಬಯ್ಯನಾಯಕರ ನೇತೃತ್ವದಲ್ಲಿ ಹಣ ಸಂಗ್ರಹಿಸಿ ೮೦ಸಾವಿರ ಕೊಟ್ಟಿದ್ದರು. ಇಷ್ಟು ಹಣವನ್ನು ನಮ್ಮ ಹಿರಿಯ ಮಗಳ ಮದುವೆಯಲ್ಲಿ ಮಾಡಿದ ಸಾಲವನ್ನು ತೀರಿಸಿಕೊಂಡಿದ್ದು ನಿಜ ಎಂದು ಹೆತ್ತವರು ಒಪ್ಪಿಕೊಂಡಿದ್ದಾರೆ.
ನಮ್ಮ ಸ್ವಾಮಿಜಿ ಇದ್ದಾಗ ನಾವು ಮಠಕ್ಕೆ ಬರುವುದು, ಅಲ್ಲಿ ಊಟ ಮಾಡುವುದಕ್ಕೆ ಬಿಡುತ್ತಿರಲಿಲ್ಲ. ಸಮಾಜದ ಋಣ ನಿಮಗೆ ಬೇಡ ಎಂದು ಹೇಳುತ್ತಿದ್ದರು. ಇಂತಹ ಪ್ರಾಮಾಣಿಕ ದೈವಭಕ್ತರ ಕುಟುಂಬದವರಾದ ನಾವು ಅವರು ಇಲ್ಲದ ಸಮಯದಲ್ಲಿ ಮಠದಲ್ಲಿ ಕುಳಿತು ಪುಕ್ಕಟೆ ಊಟ ಮಾಡುವುದು ಸರಿಯೇ, ನಾವು ಬಡವರು ಸರಿ, ಆದರೆ ನಿರ್ಗತಿಕರಲ್ಲ. ನಮಗೂ ಸ್ವಾಭಿಮಾನವಿದೆ. ವಯಸ್ಸಾದರೂ ನಮ್ಮ ತೋಳು ಬಲ ಚೆನ್ನಾಗಿದೆ. ಶಕ್ತಿ ಇರುವವರೆಗೂ ದುಡಿದು ನಮ್ಮ ಹಸಿವನ್ನು ಶಮನ ಮಾಡುತ್ತೇವೆ. ಆಗಾಗಿ ನಾವು ಮಠದಲ್ಲಿ ಇರಲು ಒಪ್ಪಲಿಲ್ಲ. ಕೊಟ್ಟ ಮಾತಿಗೆ ನಡೆದು ಕೊಳ್ಳುವ ಮನಸ್ಸು ಮತ್ತು ಪ್ರಯತ್ನ ಮಾಡದ ಟ್ರಸ್ಟ್ನವರು ಇಂತಹ ಮಾತುಗಳನ್ನು ಸಾಕಷ್ಟು ಸಲ ಆಡಿದ್ದಾರೆ. ಆದರೆ ನಮ್ಮ ಹಸಿವನ್ನು ಹಿಂಗಿಸುವ ಪರ್ಯಾಯ ಮಾರ್ಗ ಕಲ್ಪಿಸಿಕೊಡಲೇ ಇಲ್ಲ. ಈಗ ಮದುವೆ ಮಾಡುತ್ತೇವೆ, ಸಹಾಯ ಮಾಡುತ್ತೇವೆ ಎಂದು ಹೇಳಿಕೆ ಕೊಡುತ್ತಿರುವವರು ಇಷ್ಟು ದಿನ ಏನು ಮಾಡುತ್ತಿದ್ದರು? ಎಂದು ಪ್ರಶ್ನಿಸುತ್ತಾರೆ. ಇವರ ವರ್ತನೆ ಬೇಸತ್ತು ನಾವು ಸುಮ್ಮನಿದ್ದೇವು. ಆದರೆ ಪತ್ರಿಕೆಯವರು ಬರೆದು ಪುನಃ ಇದಕ್ಕೆ ಜೀವ ತುಂಬಿದ್ದಾರೆ. ಪತ್ರಿಕೆಯವರಿಗೆ ಇರುವ ಕಾಳಜಿ, ಮಾನವೀಯತೆ ಟ್ರಸ್ಟ್ನವರಿಗೆ ಏಕಿಲ್ಲ ಎಂದಿದ್ದಾರೆ.
ಅಪಘಾತ ಸುದ್ದಿ ಮುಟ್ಟಿಸದ ನಿಷ್ಕರುಣಿಗಳು:
ನಮ್ಮ ಮಗ ಸ್ವಾಮಿಗೆ ೨೦೦೭ರ ಏಪ್ರಿಲ್ ೪ರಂದು ಪೀಠಾಧಿಕಾರ ಮಾಡುವ ಸಂದರ್ಭದಲ್ಲಿ ನಮಗೆ ಯಾವುದೇ ಮಾಹಿತಿ ನೀಡಿಲ್ಲ. ಹೆತ್ತವರಾದ ನಮ್ಮ ಋಣ ತೀರಿಸಿಕೊಳ್ಳುವ ಯಾವ ಅವಕಾಶವನ್ನೂ ನೀಡಲಿಲ್ಲ. ನಮ್ಮ ಸ್ವಾಮಿ ನಮ್ಮ ಸ್ವತ್ತಾಗಿತ್ತು. ಮಗ ಮನೆಯಲಿದ್ದರೆ ನಮಗೆ ಆಧಾರವಾಗುತ್ತಿದ್ದ. ಅವನನ್ನು ನಂಬಿಸಿ, ನಮಗೆ ಆಸೆ ತೋರಿಸಿ ಕರೆದುಕೊಂಡು ಹೋಗಿ ಸ್ವಾಮಿಜಿ ಮಾಡಿ ನಮ್ಮ ಕುಟುಂಬಕ್ಕೆ ಅನ್ಯಾಯ ಮಾಡಿದ್ದಾರೆ. ಇದು ಯಾವ ನ್ಯಾಯ? ಹೆತ್ತವರಿಗೆ ಹಕ್ಕು ಕಸಿದುಕೊಳ್ಳಲು ಯಾವ ಕಾನೂನಿನಲ್ಲಿ ಅವಕಾಶವಿದೆ? ಸ್ವಾಮಿ ಮಾಡುತ್ತೇವೆ ಎಂದು ನಮ್ಮ ಒಪ್ಪಿಗೆ ಪತ್ರ ಪಡೆದಿದ್ದಾರೆಯೇ? ಎಂದು ಪ್ರಶ್ನಿಸುವ ಅವರು ಸ್ವಾಮಿಯ ಪೀಠಾಧಿಕಾರದ ಸಮಯದಲ್ಲಿ ಸೌಜನ್ಯಕ್ಕಾದರೂ ಹೇಳಿ ಕಳುಹಿಸಿಲ್ಲ ಎಂದು ಆರೋಪಿಸಿದ್ದಾರೆ.
ಅದಿರಲಿ, ಸ್ವಾಮಿ ಅಪಘಾತದಲ್ಲಿ ತೀರಿಕೊಂಡ ಸಂದರ್ಭದಲ್ಲೂ ನಮಗೆ ಹೇಳಿಕಳುಹಿಸುವ ಮನುಷ್ಯತ್ವ ತೋರಲಿಲ್ಲ. ಈ ಎರಡು ಸಂದರ್ಭದಲ್ಲೂ ನಮಗೆ ನೆರವಾಗಿದ್ದು ಪತ್ರಿಕೆ ಮಾತ್ರ. ಮಾಹಿತಿ ಮುಟ್ಟಿಸಿದ್ದು ಈ ಮಾಧ್ಯಮದವರೇ ಅವರಿಗೆ ನಮ್ಮ ಜೀವನ ಪೂರ್ತಿ ಋಣಿಯಾಗಿರುತ್ತೇವೆ ಎಂದಿದ್ದಾರೆ.ನಿಮ್ಮ ಅನಿಸಿಕೆಗಾಗಿ ಕರೆ ಮಾಡಿ:೯೪೪೮೪೧೬೫೫೦