Tuesday, August 3, 2010

ಬದುಕು ಕಳೆದುಕೊಂಡ ಸಂಗೀತಾ...

ನಮ್ಮೂರಿನಲ್ಲಿ ನಡೆದಿರುವ  ಘಟನೆ. ಅದು ಒಂದು ಹೆಣ್ಣಿನ ಮೇಲೆ ನಡೆದ ಘೋರ ಆಕ್ರಮಣದ ಸತ್ಯ ಘಟನೆಯ ಮನಕರಗುವ ವರದಿ.
ಈ ಪುರಷ ಪ್ರಧಾನ ಸಮಾಜ ಕೆಲವರಲ್ಲಿ ಇನ್ನೂ ನರರಾಕ್ಷಸರಿದ್ದಾರೆ ಅನ್ನೋದಕ್ಕೆ ಈ ಘಟನೆಯೂ ಒಂದು ಸಾಕ್ಷಿ. ವರದಕ್ಷಿಣೆ ಎಂಬ ಪೀಡುಗು ಇನ್ನೂ ನಮ್ಮ ಸಮಾಜದಿಂದ ನಾಶವಾಗದೇ ಅದೆಷ್ಟು ಹೆಣ್ಣು ಮಕ್ಕಳು ನಿತ್ಯಾ ನರಕ ಜೀವನ ಅನುಭವಿಸುತ್ತಿದ್ದಾರೆ ಎಂಬುದು ನಮಗೆ ತಿಳಿಯದ ವಿಚಾರ.
ಆದರೆ ನಮ್ಮ ಮುಂದೆ ನಡೆಯುವ ಇಂತಹ ಘಟನೆಯನ್ನು ಎಷ್ಟರ ಮಟ್ಟಿಗೆ ರಕ್ಷಿಸ ಬಲ್ಲೆವು ಎಂದು ನಾವು ಪ್ರಶ್ನಿಸಿಕೊಳ್ಳಬೇಕಾಗುತ್ತದೆ. ಹರೆಯದಲ್ಲಿ ನಾನಾ ಕನಸುಗಳನ್ನು ಹೊತ್ತುಕೊಂಡ 21ರ ಯುವತಿಯೊಬ್ಬಳು ಮದುವೆಯಾದ ಕೇವಲ ನಾಲ್ಕು ತಿಂಗಳಲ್ಲಿ ನಂಬಲಾಗದಂತಹ, ಮನುಷ್ಯ ಮಾತ್ರದವರು ಸಹಿಸಲಾರದಂತಹ ಅಮಾನುಷ ಕೃತ್ಯಕ್ಕೆ ಬಲಿಯಾಗಿ ಇಂದು ಜೀವವಿರುವ ಮೂಳೆ ಮಾಂಸದ ಹೊದಿಕೆಯಾಗಿದ್ದಾಳೆ ಎಂದರೆ ಅದನ್ನು ಆಚಾರವಂತ ಸಮಾಜ ಎಂದು ಹೇಳುವ ನಾವು ನಂಬುವುದಾದರೂ ಹೇಗೆ? ಸಹಿಸಿಕೊಳ್ಳುವುದಾದರೂ ಹೇಗೆ?
ಇಂತಹ ಸತ್ಯ ಘಟನೆ ನನ್ನ ಕಿವಿಗೆ ಬಿದ್ದ ತಕ್ಷಣ ಆ ಧಾರುಣ ಕಥೆಯನ್ನು ಆಕೆಯ ಮಾತುಗಳಲ್ಲಿಯೇ ಹೇಳುವ ಪ್ರಯತ್ನ ಮಾಡಿದ್ದೇನೆ. ಇದನ್ನು ಓದಿ ಪ್ರಕಟಿಸುವ ಕೃಪೆ ಮಾಡಬೇಕು. ಕಾರಣ, ಈಗಿನ ಆಕೆಯ ಪರಿಸ್ಥಿತಿಯಲ್ಲಿ ತಂದೆ ತಾಯಿಯೂ ಸಹ ಆಕೆಯೊಂದಿಗೆ ಜೀವಿಸಲಾರರು. ಆಕೆಗೆ ಚಿಕಿತ್ಸೆ ಬೇಕಾಗಿದೆ. ಕನಿಷ್ಟ ಪ್ಲಾಸ್ಟಿಕ್ ಸರ್ಜರಿ ಮಾಡಿಸಿದರೆ ಮುಖ ಮುಚ್ಚಿಕೊಂಡು ಹೇಗೋ ಬದುಕಿ ಉಳಿಯ ಬಹುದು. ಒಂದು ಸಾಂತ್ವನಕ್ಕಿಂತ ಸಹಾಯ ಮುಖ್ಯ. ಅಯ್ಯೋ ಪಾಪ! ಅನ್ನುವುದಕ್ಕಿಂತ ಕೈಲಾದ ಸಹಕಾರ ನೀಡಿದಲ್ಲಿ ಒಂದು ಅಸಹಾಯಕ ಹೆಣ್ಣಿನ ಕಣ್ಣೀರು ಹೊರೆಸಿದಂತಾಗುತ್ತದೆ. ಎಂದು ನನ್ನ ನಂಬಿಕೆ. ಆತ್ಮಹತ್ಯೆ ಆದ ಮೇಲೆ ಮಾತಾಡುವುದಕ್ಕಿಂತ ಅದು ಆಗದಂತೆ ತಡೆಯುವುದು ಮಾನವ ಧರ್ಮವಲ್ಲವೇ?

-------------------
"ನಾನು ಹುಟ್ಟಿದ್ದೇ ಪಾಪ. ನರರಾಕ್ಷಸರ ಈ ಸಮಾಜದಲ್ಲಿ ಹೆಣ್ಣು ಎಷ್ಟು ನಿಕೃಷ್ಟಳು, ಅಸಹಾಯಕಳು ಎಂಬುದಕ್ಕೆ ನನ್ನ ಮೇಲೆ ನಡೆದಿರುವ ಈ ದೌರ್ಜನ್ಯವೇ ಸಾಕಿ.್ಷ ನನ್ನ ಪೋಟೋ ನೋಡಿದರೆ ನಿಮಗೆ ಅರ್ಥವಾಗ ಬಹುದು ನಾನು ಯಾವ ರೀತಿಯಲ್ಲಿ ನರಕ ಜೀವನ ಅನುಭವಿಸಿದ್ದೇನೆಂದು.." ಎಂದು ಗಂಡನ ಮನೆಯ ಹಿಂಸೆಗೊಳಗಾಗಿ ನೊಂದಿರುವ ಸಂಗೀತಾಳ ಕರಣಾಜನಕ ಕಥೆಯ ಕಣ್ಣೀರ ನುಡಿಗಳು ಇವು.

ನಿಜ ಹೇಳಬೇಕೆಂದರೆ ಆಕೆ ಅತ್ತರೂ ಕಣ್ಣೀರು ಬರದಂತೆ ಹಿಂಗಿ ಹೋಗಿವೆ. ಎಷ್ಟೋ ರಾತ್ರಿಗಳನ್ನು ನಿದ್ದೆಯಿಲ್ಲದೇ ಕಳೆದ ಆಕೆಗೆ ನಿದ್ರೆಯೇ ವೈರಿಯಾಗಿದೆ. ಎಡ ಕಣ್ಣು ಮುಚ್ಚುವಂತಿಲ್ಲ. ತುಟಿ ಸೇರಿಸುವಂತಿಲ್ಲ. ಎರಡು ಕಿವಿಗಳು, ಎಡ ಕಣ್ಣು, ತಲೆ ಕೂದಲು ಬೆಂಕಿಯ ಕೆನ್ನಾಲಿಗೆಗೆ ಕರಗಿ ಹೋಗಿವೆ. ಮುಖ ನೋಡದಂತೆ ವಿಚಿತ್ರವಾಗಿದೆ. ಕತ್ತಿನ ಚರ್ಮ ಕೆಳದುಟಿಗೆ ಅಂಟಿಕೊಂಡು ತುಟಿ ಮುಚ್ಚದಂತಾಗಿದೆ. ಎರಡು ಕೈಗಳು ಸುಟ್ಟು ಅಂಟಿಕೊಂಡಿವೆ.... ಪಾಪಿಗಳು ಆಕೆಯ ಮೇಲೆ ನಡೆಸಿರುವ ದೌರ್ಜನ್ಯಕ್ಕೆ ಇಂದು ಬದುಕಿ ಸತ್ತಂತಿದ್ದಾಳೆ. ಅಂತೂ ನೋಡುವುದಕ್ಕೆ ಆಗದಷ್ಟು ವಿಕಾರವಾಗಿರುವ ದೃಶ್ಯ ಈಕೆಯದು.

ಇಲ್ಲಿನ ನಾನು ಓದಿರುವ ಸವರ್ೋದಯ ಪ್ರೌಡಶಾಲೆಯ ಶಿಕ್ಷಕರಾದ ಎಲ್.ಲಕ್ಷ್ಮೀಪ್ರಸಾದ್ ನನಗೆ ಕರೆಮಾಡಿ ನನ್ನ ಶಿಷ್ಯೆ ಒಬ್ಬಳು ದುಷ್ಟರ ದೌರ್ಜನ್ಯಕ್ಕೊಳಗಾಗಿ ದಿಕ್ಕಿಲ್ಲದ ಸ್ಥಿತಿಯಲ್ಲಿ ಜೀವಂತ ನರಕ ಹಿಂಸೆ ಅನುಭವಿಸುತ್ತಿದ್ದಾಳೆ. ದಯವಿಟ್ಟು ಸಹಾಯ ಮಾಡಿ ಎಂದು ಕೋರಿಕೊಂಡರು. ನನ್ನ ಗುರುವಿನ ಮಾತು ಕೇಳಿ, ವಿಷಯ ತಿಳಿದು ಸ್ಥಳಕ್ಕೆ ಹೋಗಿ ನೋಡಿದಾಗ ಭಯವಾಯಿತು. ಘಟನೆಯ ವಿವರ ಪಡೆದಾಗ ಇಡೀ ಪ್ರಕರಣ ಬಯಲಾಯಿತು.
ಹೆಸರು ಸಂಗೀತಾ, ವಯಸ್ಸು 22. ಪಟ್ಟಣದ ಗಾಂದೀನಗರದ 5ನೇ ಅಡ್ಡರಸ್ತೆಯಲ್ಲಿ ವಾಸವಾಗಿದ್ದು, ಗಾರೆಕೆಲಸ ಮಾಡಿಕೊಂಡು ಜೀವನ ಸಾಗಿಸುವ ಕಣ್ಣಪ್ಪ ಒಡೆಯರ್ ಮತ್ತು ಗೋವಿಂದಮ್ಮ ದಂಪತಿಗಳ ಎರಡನೇ ಪುತ್ರಿ ಈಕೆ. ಅಣ್ಣ ರಮೇಶ ಗಾರೆ ಕೆಲಸ ಮಾಡಿಕೊಂಡಿದ್ದು ಮದುವೆಯಾಗಿದೆ. ಅಕ್ಕನಿಗೂ ಮದುವೆ ಆಗಿದ್ದು ತಮಿಳುನಾಡಿನಲ್ಲಿದ್ದಾರೆ.
ಇಲ್ಲಿನ ಸವರ್ೋದಯ ಪ್ರೌಡಶಾಲೆಯಲ್ಲಿ ಹತ್ತನೇ ತರಗತಿಯವರೆಗೆ ಓದಿರುವ ಸಂಗೀತಾ ಎಲ್ಲರಂತೆ ನಗುನಗುತ್ತಾ ತನ್ನದೇ ಬದುಕಿನ ನಾನಾ ಕನಸುಗಳನ್ನು ಕಟ್ಟಿಕೊಂಡವಳು. ಸೆಪ್ಟೆಂಬರ್ 2,2009 ರಂದು ತಂದೆ ತಾಯಿ ಓಪ್ಪಿದ ಮುಂಬಾಯಿಯಲ್ಲಿ ಟೈಲರ್ ಕೆಲಸ ಮಾಡಿಕೊಂಡಿರುವ ವಡಿವೇಲು ಎಂಬುವರಿಗೆ ಈಕೆಯ ವಿವಾಹವಾದಾಗ ನೂರಾರು ಆಸೆಗಳನ್ನು ಇಟ್ಟುಕೊಂಡೇ ಬಾಂಬೆಗೆ ಹಾರಿದ್ದಳು. ಕಷ್ಟ ಪಟ್ಟು ದುಡಿಯುವ ಕಣ್ಣಪ್ಪ ಮತ್ತು ಗೋವಿಂದಮ್ಮ ತನ್ನ ಮಗಳು ಚೆನ್ನಾಗಿರಲಿ ಎಂದು ವರನಿಗೆ 25ಸಾವಿರ ಹಣವನ್ನು, 90 ಗ್ರಾಂ ಬಂಗಾರದ ವಡವೆಯನ್ನು ಮಾಡಿಸಿಕೊಟ್ಟು ಚಿಕ್ಕಂದಿನಿಂದ ಮುದ್ದನಿಂದ ಸಾಕಿದ್ದೇವೆ ನೋಯಿಸದಂತೆ ನೋಡಿಕೊಳ್ಳಪ್ಪ ಎಂದು ಇಬ್ಬರನ್ನೂ ಹರಸಿದ್ದರು.
ಆದರೆ ವಿಧಿಯ ಆಟವೋ, ಆಕೆಯ ಹಣೆ ಬರಹವೋ ಅಥವಾ ಹಣದ ಹಿಂದೆ ಬಿದ್ದ ನರಭಕ್ಷಕರ ಅಟ್ಟಹಾಸವೋ ಎಲ್ಲಾ ಎಳೆಯ ಕನಸುಗಳೆಲ್ಲಾ ಕೇವಲ ನಾಲ್ಕು ತಿಂಗಳಲ್ಲಿ ಕಮರಿಹೋಗಿ ನಿಜವಾದ ನರಕಜೀವನ ದೃಶ್ಯವನ್ನು ಜೀವಂತವಾಗಿ ಕಾಣುವ ದೌಭರ್ಾಗ್ಯ ಅವಳಾದಾಗಿದೆ. ತನ್ನ ಸುಖ, ಸಂತೋಷ, ನಲಿವುಗಳನ್ನು ಕಳೆದುಕೊಂಡ ಆಕೆ ಇಂದು ಕೇವಲ ಒಂದು ಮಾಂಸದ ಮುದ್ದೆಯಂತಾಗಿದ್ದಾಳೆ.
ಕರಣಾಜನಕ ಕಥೆಯನ್ನು ಆಕೆಯಿಂದಲೇ ಕೇಳಿ: ನಾನು ಓದು ಮುಗಿಸಿ ಮನೆಯಲ್ಲಿ ಸಂತೋಷವಾಗಿದ್ದೆ. ಪರಿಚಯಸ್ಥರ ಸಂಬಂಧ ಕುದುರಿ ನನಗೆ ಬಾಂಬೆಯ ಮುನಿಯಮ್ಮ ಎಂಬುವರ ಮಗ ವಡೀವೇಲು ಎಂಬುವರಿಗೆ ಕಳೆದ ವರ್ಷ ಕೊಟ್ಟು ಮದುವೆ ಮಾಡಿದರು. ಅವರು ಆಗ ಬಾಂಬೆಯ ಅಂದೇರಿ ಭಾಗದ ಡಿ.ಎನ್.ನಗರದ ಅಪ್ನಾ ಬಜಾರ್ ಸಮೀಪ ಸ್ವಂತ ಮನೆಯಲ್ಲಿ ವಾಸವಾಗಿದ್ದರು.
ಮದುವೆಯ ಮೊದಲ ದಿನಗಳಲ್ಲಿ ಗಂಡ ನನಗೆ ಸ್ವರ್ಗವನ್ನೇ ತೋರಿಸಿದ. ನಾನೆಂಥ ಸುಖಿ ಎಂದುಕೊಂಡು ನನ್ನ ಮನೆಯ ಕಡೆ ಮರೆತೇ ಬಿಟ್ಟೆ. ಎರಡು ತಿಂಗಳು ಕಳೆಯುತ್ತಿದ್ದಂತೆ ಗಂಡನ ಪ್ರೀತಿ ಕಡಿಮೆಯಾಯಿತು, ಅತ್ತೆ ಮೊದಲಿನಿಂದಲೂ ಸಿಡುಕುತ್ತಿದ್ದಳು, ಗದರುತ್ತಿದ್ದಳು. ವರದಕ್ಷಣೆ ಸಾಲದು, ಇಲ್ಲಿ ಸಾಲ ಇದೆ ಮತ್ತಷ್ಟು ತರಲು ನಿಮ್ಮಪ್ಪನಿಗೆ ಹೇಳು ಎಂದೆಲ್ಲಾ ಒತ್ತಾಯಿಸುತ್ತಿದ್ದರು. ಆಗ ನನಗೆ ಮನೆಯ ಕಡೆ ಮನಸ್ಸು ಬರತೊಡಗಿತು. ಪ್ರತಿನಿತ್ಯಾ ಹಿಂಸೆ ನೀಡುತ್ತಿದ್ದರು. ನಾನು ದೀಪಾವಳಿಗೆ ತಿಪಟೂರಿಗೆ ಬಂದುಹೋದೆ. ಬರಿಕೈಯಲ್ಲಿ ಬಂದಿರುವೆ ಎಂದು ಚೆನ್ನಾಗಿ ಹೊಡೆದರು. ಅಂದಿನಿಂದ ನನ್ನ ನರಕ ಜೀವನ ಶುರುವಾಯಿತು.

ಜನವರಿ 22, 2010ರ ಸಂಜೆ 6ಗಂಟೆ ಸಮಯ ನಾನು ಮಾಮುಲಿನಂತೆ ಮುಖ ತೊಳೆದುಕೊಂಡು, ಬೊಟ್ಟು ಇಟ್ಟಕೊಂಡು ಅಂದವಾಗಿ ಎರಡು ಮೂರು ಬಾರಿ ನೋಡಿಕೊಂಡೆ. ಅಷ್ಟರಲ್ಲಿ ಅತ್ತೆ ಜುಟ್ಟು ಹಿಡಿದು ಅಡಿಗೆ ಮನೆಗೆ ಎಳೆದುಕೊಂಡು ಹೋದರು. ಗಂಡ ಹೀಯಾಳಿಸುತ್ತಾ ಒದೆಯುತ್ತಿದ್ದ ಇಬ್ಬರೂ ಸೇರಿ ಮುಖಕ್ಕೆ ಸೀಮೆ ಎಣ್ಣೆ ಸುರಿದರು. ಮುಂದೆ ಎನಾಗುತ್ತದೆ ಎಂದು ನೋಡುವುದರ ಒಳಗೆ ಬೆಂಕಿಯಿಟ್ಟರು. ಉರಿಯಿಂದ ಕೂಗಿ ಕೊಂಡೆ. ಕತ್ತಲಾಯಿತು.
ಕಣ್ಣು ಬಿಟ್ಟಾಗ ಆಸ್ಪತ್ರೆಯಲ್ಲಿದ್ದೆ. ಸಾಯುವಷ್ಟು ಉರಿ ಮತ್ತು ನೋವು. ಏನೂ ಕಾಣುತ್ತಿಲ್ಲ. ಯಾರೂ ಬರುತ್ತಿಲ್ಲ. ಉಸಿರಾಡಲು ಆಗುತ್ತಿಲ್ಲ... ಬೇಡ ಸಾರ್ ಆ ನೋವು, ಹಿಂಸೆ ಬೇಡ. ಆ ದೃಶ್ಯವೂ ಬೇಡ.
ಎರಡು ತಿಂಗಳು ಆಸ್ಪತ್ರೆಯಲ್ಲಿದ್ದೆ. ನಂತರ ನನಗೆ ತಿಪಟೂರಿಗೆ ಕಳಹಿಸಿದರು. ಮನೆಯಲ್ಲಿ ಏನೇನೋ ಹೇಳಿದರು ಅದ್ಯಾವುದೂ ನನಗೆ ಗೊತ್ತಿಲ್ಲ. ನಾನೇ ಬೆಂಕಿಯಿಟ್ಟುಕೊಂಡೆ ಎಂದು ಹೇಳಿದರು. ನಾನೇ ಪೋಲೀಸರಿಗೆ ಬರೆದುಕೊಟ್ಟದ್ದೇನೆಂದು ನಂಬಿಸಿದರು. ಅದೂ ನನಗೆ ಗೊತ್ತಿಲ್ಲ. ಆದರೆ ಆಗಿರುವುದಿಷ್ಟು ನಾನು ಸುಟ್ಟ ಗಾಯಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ನನ್ನ ಕೈ ಮತ್ತು ಕಾಲು ಬೆರಳಿನ ಮುದ್ರೆ ಪಡೆದು ಅವರೇ ಬರೆದುಕೊಂಡಿದ್ದಾರೆ. ನಾನು ಓದಿದ್ದೇನೆ ಚೆನ್ನಾಗಿರುವಾಗ ಹೇಳಿಕೆ ಪಡೆದು ಸಹಿ ಪಡೆಯಬಹುದಿತ್ತು. ಎಲ್ಲಾ ಮೋಸ. ಹಣದಲ್ಲಿ ನ್ಯಾಯ ಮುಚ್ಚಿಹೋಗಿದೆ. ಅನ್ಯಾಯಕ್ಕೊಳಗಾದ ಹೆಣ್ಣಿಗೆ ಖಂಡಿತ ನ್ಯಾಯ ಸಿಗುವುದಿಲ್ಲ. ನೋಡಿ ನನ್ನ ಸ್ಥಿತಿ ನಾನು ಎನು ಕರ್ಮ ಮಾಡಿ ಹುಟ್ಟಿದ್ದೇನೆಯೇ ? ಎಂದು ಬಿಕ್ಕಳಿಸುತ್ತಾಳೆ.
ಸಮಾಜ ಹೆಣ್ಣನ್ನು ಯಾಕೆ ಈರೀತಿಯಾಗಿ ನೋಡುತ್ತದೆ. ಹೆಣ್ಣಿನಿಂದ ಸಕಲವನ್ನೂ ಪಡೆಯುವ ಪುರುಷ ಪ್ರತಿಯಾಗಿ ನೀಡುವುದು ಇದೇನಾ. ಕನಿಷ್ಟ ಕನಿಕರವೂ ಇಲ್ಲದಂತೆ ವತರ್ಿಸುವುದೇಕೆ. ಅಸಹಾಯಕ ನಿಷ್ಪಾಪಿಗಳನ್ನು ಜೀವಂತ ನರಕಕ್ಕೆ ತಳ್ಳುವುದರಿಂದ ಸಾಧಿಸುವುದಾದರೂ ಏನನ್ನ?
ಯಾರದೋ ಸ್ವಾರ್ಥದ ಸಾಧನೆಗಾಗಿ ತನ್ನದಲ್ಲದ ತಪ್ಪಿಗೆ ಸುಂದರ ಬದುಕನ್ನು ಹಾಳುಮಾಡಿಕೊಂಡ ಸಂಗೀತಾ ನಮ್ಮಂಥೆ ಬದುಕಲಾರಳೇ?
ಅಥವಾ ಆಕೆಯೂ ಎಲ್ಲರಂತೆ ಬದುಕಿಸಲು ನಾವೆಲ್ಲಾ ಏಕೆ ಪ್ರಯತ್ನಿಸಬಾರದು?

( ಕಾನೂನು ಸಮಸ್ಯೆ: ಮುಂಬಾಯಿಯಿಂದ ಬಂದು ತಿಪಟೂರಿನ ತಂದೆ ತಾಯಿಯರ ಜೊತೆ ಪ್ರಾಣಿಯಂತೆ ಬದುಕುತ್ತಾ ನೊಂದಿರುವ ಸಂಗೀತಾ ನ್ಯಾಯಕ್ಕಾಗಿ ಪೋಲೀಸ್ ಮೊರೆ ಹೋಗುವಂತಿಲ್ಲ. ಘಟನೆ ನಮ್ಮ ಸರಹದ್ದಿನಲ್ಲಿ ನಡೆದಿಲ್ಲ. ನ್ಯಾಯ ಬೇಕಾದರೆ ಮುಂಬಾಯಿಯಲ್ಲಿ ಪ್ರಕರಣ ದಾಖಲಿಸಬೇಕು ಎನ್ನುತ್ತಾರೆ ನಮ್ಮ ಕಾನೂನು ರಕ್ಷಕರು.
ಮುಂಬಾಯಿಯಿಗೆ ಹೋಗಿ ಅಲ್ಲಿ ದೂರು ಕೊಟ್ಟು ನ್ಯಾಯ ಕೇಳುವಷ್ಟು ಬುದ್ದಿ, ವಿದ್ಯೆ, ಹಣ, ಮತ್ತು ಭಾಷೆ ಈ ಅಮಾಯಕರಿಗೆ ಗೊತ್ತಿಲ್ಲ. ಅಕಸ್ಮಾತ್ ಅಲ್ಲಿ ದೂರು ಕೊಟ್ಟರೂ ಹಣ ಖಚರ್ು ಮಾಡಿ ಅಲೆದಾಡುವ ಶಕ್ತಿ ಅವರಿಗಿಲ್ಲ. ಹಾಗಾದರೆ ಇದ್ದಕ್ಕೆ ಪರಿಹಾರ ಏನು ಎಂಬುದಕ್ಕೆ ನಮ್ಮ ಕನರ್ಾಟಕ ಪೋಲೀಸ್ನಲ್ಲಿ ಉತ್ತರವಿಲ್ಲ.
ನ್ಯಾಯ ಮತ್ತು ಸಹಾಯ ಕೋರಿ ರಾಜ್ಯಪಾಲರಿಂದ ಹಿಡಿದು ಜಿಲ್ಲಾಧಿಕಾರಿಯವರಗೆ ನಾನಾ ಪತ್ರ ಬರೆದರೂ ಯಾರೂ ಗಮನಿಸಿಲ್ಲ. ಇದೆಂಥಾ ನ್ಯಾಯ? ಇದೆಂಥಾ ವ್ಯವಸ್ಥೆ?)

ಸಂಗೀತಾಳ ಮೋಬೈಲ್ ಸಂಖ್ಯೆ: 7760731907

Monday, August 2, 2010

ಅಕ್ರಮ ಗಣಿ ಕಂಡರೂ ನಾವು ಯಾಕೆ ಕುರುಡರು?

ತನ್ನ ಗರ್ಭದಲ್ಲಿ ಅಪಾರ ಸಂಪತ್ತನ್ನು ತುಂಬಿಕೊಂಡಿರುವ ನಮ್ಮ ಚೆಲುವ ಕನ್ನಡನಾಡಿನಲ್ಲಿ ಕಳೆದ ಏಳೆಂಟು ವರ್ಷಗಳಿಂದ ನಿರಂತರವಾಗಿ, ನಿರ್ಭಯವಾಗಿ ಹಾಗೂ ನಿರಾತಂಕವಾಗಿ ಗಣಿಗಾರಿಕೆ ನಡೆಯುತ್ತಿದೆ. ಮುಂದೆಯೂ ನಡೆಯುತ್ತದೆ. ರಾಜ್ಯದಲ್ಲಿರುವ ರೈತರ ಕೃಷಿ ಭೂಮಿ, ಕಂದಾಯ ಭೂಮಿ, ಗೋಮಾಳ, ಖರಾಬು, ಸಾಮಾಜಿಕ ಹಾಗೂ ಮೀಸಲು ಅರಣ್ಯ ಪ್ರದೇಶಗಳು ಹಾಡು ಹಗಲೇ ಲೂಟಿಯಾದರೂ, ಆಗುತ್ತಿದ್ದರೂ ನಮ್ಮ ಪರಿಸರವಾದಿಗಳು, ಹಿತಚಿಂತಕರು, ಸಾಹಿತಿಗಳು, ರೈತ ಮುಖಂಡರು, ರಾಜಕಾರಣಿಗಳು, ಅಧಿಕಾರಿಗಳು ಕೊನೆಗೆ ಪತ್ರಕರ್ತರೂ ತೆಪ್ಪಗಿದ್ದು ಬಿಟ್ಟರು.


ರಾಜ್ಯದ ಹಕ್ಕುದಾರ ಕನ್ನಡಿಗ ಒಬ್ಬ ರೈತ ಗಾಡಿಯ ನೇಗಿಲಿಗೋ, ಮನೆಯ ತೊಲೆಗೋ ಒಂದು ಮರಕಡಿದರೆ ಗಂಡಸರಂತೆ ಮೀಸೆ ತಿರುವಿ ಆತನ ಮೇಲೆ ಅರಣ್ಯ ಖಾಯಿದೆಯಡಿ ಪ್ರಕರಣ ದಾಖಲಿಸಿ, ಕಟಕಟೆ ಹತ್ತಿಸುವ ಅಧಿಕಾರಿಗಳು ತಮ್ಮ ಎದುರಿಗೇ ನೂರಾರು ಮರಗಳನ್ನು ಕಡಿದು ನಿರ್ಭಯವಾಗಿ ಗಣಿಗಾರಿಕೆ ನಡೆಸುತ್ತಿದ್ದರೂ ಮೂಖರಂತೆ ನಿಂತು, ಅಸಹಾಯಕತೆ ತೋರುತ್ತಿದ್ದಾರೆ.



ಇತ್ತೀಚೆಗೆ ರಾಜ್ಯಾದ್ಯಂತ ಅಕ್ರಮ ಗಣಿಗಾರಿಕೆ ಬಗ್ಗೆ ಭಾರೀ ಚರ್ಚೆಗಳು, ವಾದ ವಿವಾದಗಳು, ಗಲಭೆಗಳು ನಡೆಯುತ್ತಿದ್ದರೂ ಯಾವುದೇ ಪರಿಣಾಮ ಉಂಟಾಗಿಲ್ಲ. ಬಳ್ಳಾರಿ, ಸೊಂಡೂರು, ಚಿತ್ರದುರ್ಗ, ಹೊಸದುರ್ಗ ಸೇರಿದಂತೆ ತುಮಕೂರು ಜಿಲ್ಲೆಯ ತಿಪಟೂರು, ಗುಬ್ಬಿ ಮತ್ತು ಚಿ.ನಾ.ಹಳ್ಳಿ ತಾಲೂಕುಗಳಲ್ಲಿ ನಿರಾತಂಕವಾಗಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ
ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಬಗ್ಗೆ ವ್ಯಾಪಕವಾದ ವಿರೋಧ ವ್ಯಕ್ತವಾಗಿದೆ. ಕಳೆದ 8 ವರ್ಷಗಳಿಂದ ಗಣಿಗಾರಿಕೆಯ ಕೂಸು ಹುಟ್ಟು ಹಾಕಿದ ಪಕ್ಷಗಳಿಗೆ ಈಗ ಲಾಭವಿಲ್ಲ. ಹಾಗಾಗಿ ಕೋಟಿ ಕೋಟಿ ಉಡುಗೊರೆ ಸಿಗುವ ಗಣಿಗಾರಿಕೆ ಬಗ್ಗೆ ವಿರೋಧ ವ್ಯಕ್ತಪಡಿಸುವ ಕನ್ನಡದ ಗಂಡುಗಳು ಹುಟ್ಟಿಲ್ಲ ಎಂಬ ನೋವು ಮನಸ್ಸಿನಲ್ಲಿದೆ. ಎಲ್ಲವನ್ನೂ ತಿಂದು ಮುಗಿಸಿರುವ ವಿರೋಧ ಪಕ್ಷಗಳು ಈ ಒಂದು ವಿಷಯವನ್ನೇ ಪ್ರಧಾನ ಮಾಡಿಕೊಂಡು ಈಗ ಪ್ರತಿಭಟನೆಗೆ ಮುಂದಾಗಿವೆ. ಕಳೆದ ವಾರ ನಡೆದ ವಿಧಾನ ಸಭಾ ಕಾರ್ಯಕಲಾಪಗಳ ಸಮಯವೆಲ್ಲಾ ಅದಕ್ಕಾಗಿಯೇ ವ್ಯಯವಾಗಿದೆ. ಆದರೆ ಸರಕಾರದ ಇಲಾಖೆಗಳು ಅಕ್ರಮ ಗಣಿಗಾರಿಕೆ ಕೂಡಲೇ ನಿಯಂತ್ರಿಸುವ ಬದಲು ಈ ಸಮಯದಲ್ಲೇ ಹೆಚ್ಚಿನ ಅಕ್ರಮ ನಡೆಯಲು ಸಹಕಾರ ಮತ್ತು ಅವಕಾಶ ನೀಡುತ್ತಿವೆ. ಕಳೆದ ಗ್ರಾಮ ಪಂಚಾಯಿತಿ ಚುನಾವಣೆ ಸಮಯದಲ್ಲಿ ಇಡೀ ಆಡಳಿತ ವ್ಯವಸ್ಥೆ ಚುನಾವಣೆಯ ಒತ್ತಡದಲ್ಲಿದ್ದರೆ ಸಮಯದ ಸದುಪಯೋಗ ಪಡಿಸಿಕೊಂಡ ಅದಿರುಕೋರರು ಹಗಲು ರಾತ್ರಿ ಎನ್ನದೇ ಕೋಟ್ಯಂತರ ರೂಪಾಯಿ ಅದಿರನ್ನು ಲೂಟಿ ಮಾಡಿದರು. ಸರಕಾರ ಮತ್ತು ಅಧಿಕಾರಿಗಳ ದೌರ್ಬಲ್ಯ ಅರಿತ ಇವರು ನಿತ್ಯ ಸಾವಿರಾರು ಲಾರಿಗಳಲ್ಲಿ ಅದಿರನ್ನು ಸಾಗಿಸಿ ಹಣ ಮಾಡಿಕೊಂಡರು.



ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ಅದಿರು ಕ್ರಷಿಂಗ್

ಸರಕಾರಿ ಜಮೀನು, ರೈತರ ಪಟ್ಟಾ ಜಮೀನು ಹಾಗೂ ಸಾಮಾಜಿಕ ಅರಣ್ಯ ಮತ್ತು ಮೀಸಲು ಅರಣ್ಯದಲ್ಲಿ ಪ್ರದೇಶಗಳಲ್ಲಿ ಅದಿರನ್ನು ತೆಗೆದು ಸಂಗ್ರಹಿಸಿ ಮಧ್ಯರಾತ್ರಿ ವೇಳೆ ಅದಿರನ್ನು ನಿರಂತರವಾಗಿ ಸಾಗಿಸಲಾಗುತ್ತಿದೆ. ಈ ತರಹದಲ್ಲಿ ಸಂಗ್ರಹಿಸಿದ ಕಬ್ಬಿಣದ ಅದಿರನ್ನು ತಿಪಟೂರು ತಾಲೂಕು ಹತ್ಯಾಳು ಗೇಟ್ ಬಳಿಯಿರುವ ರಸ್ತೆ ಬದಿಯ ಸ್ಟಾಕ್ ಯಾರ್ಡ್ ಹಾಗೂ ಜಯಂತಿ ಗ್ರಾಮದ ಬಳಿಯಿರುವ ಸ್ಟಾಕ್ ಯಾರ್ಡ್ ಗಳಲ್ಲಿ ಸಂಗ್ರಹಿಸಿ ಅಲ್ಲಿಯೇ ಬಹಿರಂಗವಾಗಿ ಸ್ಕ್ರೀನಿಂಗ್ ಮಾಡಿ ಸಾಗಿಸಲಾಗುತ್ತಿದೆ. ಈ ಎಲ್ಲಾ ವಿದ್ಯಮಾನಗಳು ತಿಪಟೂರು ತಾಲೂಕು ಆಡಳಿತಕ್ಕೆ ಗೊತ್ತಿದ್ದರೂ ಜಾಣ ಮೌನ ವಹಿಸಿದೆ.

ಈ ಅಕ್ರಮ ಗಣಿಗಾರಿಕೆ ಮತ್ತು ಸಂಗ್ರಹದ ಬಗ್ಗೆ ಕಾನೂನಿನಲ್ಲಿ ಅವಕಾಶವಿಲ್ಲ. ಆದರೆ ಈ ಬಗ್ಗೆ ಸಾರ್ವಜನಿಕರು ಹತ್ತಾರು ಬಾರಿ ತಾಲೂಕು ಮತ್ತು ಜಿಲ್ಲಾಡಳಿತಕ್ಕೆ ದೂರು ನೀಡಿದ್ದರೂ ಜಿಲ್ಲಾಧಿಕಾರಿಗಳು ಗಣನೆಗೆ ತೆಗೆದುಕೊಳ್ಳದೇ ನಿರ್ಲಿಪ್ತರಾಗಿದ್ದಾರೆ. ಸ್ಥಳೀಯ ಅಧಿಕಾರಿಗಳಿಗೆ ತೆಪ್ಪಗಿರಲು ತಾಕೀತು ಮಾಡಿದ್ದಾರೆಂದು ಕೆಲವು ಅಧಿಕಾರಿಗಳು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ನಿಯಮಗಳಿವೆ, ಕಾನೂನಿದೆ ಹಾಗೂ ಅಧಿಕಾರವಿದೆ ಆದರೆ ಉನ್ನತಾಧಿಕಾರಿಗಳ ಭಯದಿಂದ ಉಪಯೋಗಿಸುವಂತಿಲ್ಲ ಎಂಬ ಅಳಲು ತಾಲೂಕಿನ ಕೆಲ ಅಧಿಕಾರಿಗಳದ್ದು.

ಸರಕಾರಿ ಜಮೀನುಗಳು, ರೈತರ ಜಮೀನು ಹಾಗೂ ರಸ್ತೆ ಬದಿಯಲ್ಲೇ ಕಾನೂನುಬಾಹಿರವಾಗಿ ಕಬ್ಬಿಣದ ಅದಿರಿನ ಸ್ಟಾಕ್ ಯಾರ್ಡ್ ಗಳನ್ನು ಮಾಡಿಕೊಂಡು ರಾತ್ರೋರಾತ್ರಿ ಅಕ್ರಮ ಅದಿರನ್ನು ತಂದು ಸಂಗ್ರಹಿಸಿ ಸಾಗಾಣಿಕೆ ಮಾಡಲಾಗುತ್ತಿದೆ. ಇದು ಆಯಾ ಜಿಲ್ಲಾಡಳಿತ, ತಾಲೂಕು ಆಡಳಿತ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪೊಲೀಸ್ ಇಲಾಖೆಗೆ ಗೊತ್ತಿರುವ ಬಹಿರಂಗ ಸತ್ಯ.


ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರಿಗೆ, ಅರಣ್ಯವನ್ನು ರಾತ್ರಿ ವೇಳೆ ಲೂಟಿ ಮಾಡುವವರಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಅದಿರು ಸಾಗಿಸುವ ಪರ್ಮಿಟ್ ಗಳು ಸುಲಭವಾಗಿ ಸಿಗುತ್ತಿರುವುದೇ ಪರಮಾಶ್ಚರ್ಯವಾಗಿದೆ ಎಂದರೆ ಇದನ್ನು ಜನಸಾಮಾನ್ಯರಿಂದ ನಿಯಂತ್ರಿಸಲು ಸಾಧ್ಯವೇ? ಅಧಿಕಾರಿಗಳು ಮತ್ತು ಅಕ್ರಮ ಗಣಿಗಾರಿಕೆಯವರ ಈ ವ್ಯವಹಾರದ ರಹಸ್ಯವನ್ನು ಕಂಡು ಹಿಡಿಯಲಾದೀತೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿದೆ.


ಪುರಾತನ ದೇವಾಲಯಕ್ಕೆ ಸಂಚಕಾರ

ಚಿ.ನಾ.ಹಳ್ಳಿಯ ತಾಲೂಕಿನ ಹೊನ್ನೆಬಾಗಿ ಗ್ರಾಮದ ಸರ್ವೇ ನಂ.130ರಲ್ಲಿನ ಅಬ್ಬಿಗೆ ಶ್ರೀಮಲ್ಲೇಶ್ವರ ದೇವಾಲಯದ ಸುತ್ತಾಮುತ್ತಲ 2. ಕಿ.ಮಿ. ವ್ಯಾಪ್ತಿಯ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ಕೊಡಬಾರದು ಎಂದು ಸಾರ್ವಜನಿಕರ ಒತ್ತಾಯಕ್ಕೆ ಮಣಿದ ಜಿಲ್ಲಾಧಿಕಾರಿ ಸೋಮಶೇಖರ್ 3.8.2008ರಂದು ಆದೇಶಿಸಿ ದೇವಾಲಯದ ವ್ಯಾಪ್ತಿಯ 200 ಮೀ. ವ್ಯಾಪ್ತಿಯ ಗಣಿಗಾರಿಕೆಯನ್ನು ರದ್ದುಪಡಿಸಿದ್ದಾರೆ. ಆದರೆ ಪುರಾತನ ಹಿಂದೂ ದೇವಾಲಯ ಶ್ರೀ ಹತ್ಯಾಳು ನರಸಿಂಹಸ್ವಾಮಿ ದೇವಾಲಯದ ಬೆಟ್ಟದ ತಪ್ಪಲಿನಲ್ಲಿ ಇರುವ ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಖಾಸಗಿ ಕಂಪನಿಯೊಂದು ನಿರಂತರವಾಗಿ ಗಣಿಗಾರಿಕೆ ನಡೆಸುತ್ತಾ ದೇವಾಲಯದ ಬೆಟ್ಟಕ್ಕೆ ಹಾನಿಯಾಗುವ ಸಂಭವವಿದ್ದರೂ ಜಾಣ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.



1991ರಿಂದ 2007 ರವರೆಗೆ ಶ್ರೀ ಹತ್ಯಾಳು ನರಸಿಂಹಸ್ವಾಮಿ ದೇವಾಲಯ ಹಾಗೂ ಅರಣ್ಯದ ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ಕಂದಾಯ ಇಲಾಖೆ, ಉಪವಿಭಾಗಾಧಿಕಾರಿಗಳು, ಅರಣ್ಯ ಇಲಾಖೆ ಪದೇ ಪದೇ ಪತ್ರ ವ್ಯವಹಾರ ನಡೆಸಿದ್ದಾರೆ. ಆದರೆ ಈ ಅಕ್ರಮಗಳಿಗೆ ಪ್ರಮುಖ ಕಾರಣಕರ್ತರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಳ್ಳವರ ಪರ ವಕಾಲತ್ತು ವಹಿಸಿ ಗಣಿಗುತ್ತಿಗೆ ನೀಡುವ ಪ್ರಯತ್ನ ನಡೆಸಿದ್ದಾರೆ. ಆ ನಂತರ ಗಣಿಗುತ್ತಿಗೆಯನ್ನು ರದ್ದುಪಡಿಸಲು ನಡೆದ ನಾನಾ ಪ್ರಯತ್ನಗಳಿಗೆ ಗಣಿ ಇಲಾಖೆ ಸೊಪ್ಪುಹಾಕದೇ ಅರಣ್ಯ ಹಾಗೂ ದೇವಾಲಯ ವ್ಯಾಪ್ತಿಯಲ್ಲಿ ಅದಿರು ಲೂಟಿಗೆ ಪರೋಕ್ಷವಾಗಿ ಸಹಕಾರ ನೀಡಿದೆ


ಆದರೆ ಯಾರೂ ಈ ಕುರಿತು ಏನೂ ಮಾತನಾಡುತ್ತಿಲ್ಲ!.