ನಮ್ಮೂರಿನಲ್ಲಿ ನಡೆದಿರುವ ಘಟನೆ. ಅದು ಒಂದು ಹೆಣ್ಣಿನ ಮೇಲೆ ನಡೆದ ಘೋರ ಆಕ್ರಮಣದ ಸತ್ಯ ಘಟನೆಯ ಮನಕರಗುವ ವರದಿ.
ಈ ಪುರಷ ಪ್ರಧಾನ ಸಮಾಜ ಕೆಲವರಲ್ಲಿ ಇನ್ನೂ ನರರಾಕ್ಷಸರಿದ್ದಾರೆ ಅನ್ನೋದಕ್ಕೆ ಈ ಘಟನೆಯೂ ಒಂದು ಸಾಕ್ಷಿ. ವರದಕ್ಷಿಣೆ ಎಂಬ ಪೀಡುಗು ಇನ್ನೂ ನಮ್ಮ ಸಮಾಜದಿಂದ ನಾಶವಾಗದೇ ಅದೆಷ್ಟು ಹೆಣ್ಣು ಮಕ್ಕಳು ನಿತ್ಯಾ ನರಕ ಜೀವನ ಅನುಭವಿಸುತ್ತಿದ್ದಾರೆ ಎಂಬುದು ನಮಗೆ ತಿಳಿಯದ ವಿಚಾರ.
ಆದರೆ ನಮ್ಮ ಮುಂದೆ ನಡೆಯುವ ಇಂತಹ ಘಟನೆಯನ್ನು ಎಷ್ಟರ ಮಟ್ಟಿಗೆ ರಕ್ಷಿಸ ಬಲ್ಲೆವು ಎಂದು ನಾವು ಪ್ರಶ್ನಿಸಿಕೊಳ್ಳಬೇಕಾಗುತ್ತದೆ. ಹರೆಯದಲ್ಲಿ ನಾನಾ ಕನಸುಗಳನ್ನು ಹೊತ್ತುಕೊಂಡ 21ರ ಯುವತಿಯೊಬ್ಬಳು ಮದುವೆಯಾದ ಕೇವಲ ನಾಲ್ಕು ತಿಂಗಳಲ್ಲಿ ನಂಬಲಾಗದಂತಹ, ಮನುಷ್ಯ ಮಾತ್ರದವರು ಸಹಿಸಲಾರದಂತಹ ಅಮಾನುಷ ಕೃತ್ಯಕ್ಕೆ ಬಲಿಯಾಗಿ ಇಂದು ಜೀವವಿರುವ ಮೂಳೆ ಮಾಂಸದ ಹೊದಿಕೆಯಾಗಿದ್ದಾಳೆ ಎಂದರೆ ಅದನ್ನು ಆಚಾರವಂತ ಸಮಾಜ ಎಂದು ಹೇಳುವ ನಾವು ನಂಬುವುದಾದರೂ ಹೇಗೆ? ಸಹಿಸಿಕೊಳ್ಳುವುದಾದರೂ ಹೇಗೆ?
ಇಂತಹ ಸತ್ಯ ಘಟನೆ ನನ್ನ ಕಿವಿಗೆ ಬಿದ್ದ ತಕ್ಷಣ ಆ ಧಾರುಣ ಕಥೆಯನ್ನು ಆಕೆಯ ಮಾತುಗಳಲ್ಲಿಯೇ ಹೇಳುವ ಪ್ರಯತ್ನ ಮಾಡಿದ್ದೇನೆ. ಇದನ್ನು ಓದಿ ಪ್ರಕಟಿಸುವ ಕೃಪೆ ಮಾಡಬೇಕು. ಕಾರಣ, ಈಗಿನ ಆಕೆಯ ಪರಿಸ್ಥಿತಿಯಲ್ಲಿ ತಂದೆ ತಾಯಿಯೂ ಸಹ ಆಕೆಯೊಂದಿಗೆ ಜೀವಿಸಲಾರರು. ಆಕೆಗೆ ಚಿಕಿತ್ಸೆ ಬೇಕಾಗಿದೆ. ಕನಿಷ್ಟ ಪ್ಲಾಸ್ಟಿಕ್ ಸರ್ಜರಿ ಮಾಡಿಸಿದರೆ ಮುಖ ಮುಚ್ಚಿಕೊಂಡು ಹೇಗೋ ಬದುಕಿ ಉಳಿಯ ಬಹುದು. ಒಂದು ಸಾಂತ್ವನಕ್ಕಿಂತ ಸಹಾಯ ಮುಖ್ಯ. ಅಯ್ಯೋ ಪಾಪ! ಅನ್ನುವುದಕ್ಕಿಂತ ಕೈಲಾದ ಸಹಕಾರ ನೀಡಿದಲ್ಲಿ ಒಂದು ಅಸಹಾಯಕ ಹೆಣ್ಣಿನ ಕಣ್ಣೀರು ಹೊರೆಸಿದಂತಾಗುತ್ತದೆ. ಎಂದು ನನ್ನ ನಂಬಿಕೆ. ಆತ್ಮಹತ್ಯೆ ಆದ ಮೇಲೆ ಮಾತಾಡುವುದಕ್ಕಿಂತ ಅದು ಆಗದಂತೆ ತಡೆಯುವುದು ಮಾನವ ಧರ್ಮವಲ್ಲವೇ?
-------------------
ನಿಜ ಹೇಳಬೇಕೆಂದರೆ ಆಕೆ ಅತ್ತರೂ ಕಣ್ಣೀರು ಬರದಂತೆ ಹಿಂಗಿ ಹೋಗಿವೆ. ಎಷ್ಟೋ ರಾತ್ರಿಗಳನ್ನು ನಿದ್ದೆಯಿಲ್ಲದೇ ಕಳೆದ ಆಕೆಗೆ ನಿದ್ರೆಯೇ ವೈರಿಯಾಗಿದೆ. ಎಡ ಕಣ್ಣು ಮುಚ್ಚುವಂತಿಲ್ಲ. ತುಟಿ ಸೇರಿಸುವಂತಿಲ್ಲ. ಎರಡು ಕಿವಿಗಳು, ಎಡ ಕಣ್ಣು, ತಲೆ ಕೂದಲು ಬೆಂಕಿಯ ಕೆನ್ನಾಲಿಗೆಗೆ ಕರಗಿ ಹೋಗಿವೆ. ಮುಖ ನೋಡದಂತೆ ವಿಚಿತ್ರವಾಗಿದೆ. ಕತ್ತಿನ ಚರ್ಮ ಕೆಳದುಟಿಗೆ ಅಂಟಿಕೊಂಡು ತುಟಿ ಮುಚ್ಚದಂತಾಗಿದೆ. ಎರಡು ಕೈಗಳು ಸುಟ್ಟು ಅಂಟಿಕೊಂಡಿವೆ.... ಪಾಪಿಗಳು ಆಕೆಯ ಮೇಲೆ ನಡೆಸಿರುವ ದೌರ್ಜನ್ಯಕ್ಕೆ ಇಂದು ಬದುಕಿ ಸತ್ತಂತಿದ್ದಾಳೆ. ಅಂತೂ ನೋಡುವುದಕ್ಕೆ ಆಗದಷ್ಟು ವಿಕಾರವಾಗಿರುವ ದೃಶ್ಯ ಈಕೆಯದು.
ಇಲ್ಲಿನ ನಾನು ಓದಿರುವ ಸವರ್ೋದಯ ಪ್ರೌಡಶಾಲೆಯ ಶಿಕ್ಷಕರಾದ ಎಲ್.ಲಕ್ಷ್ಮೀಪ್ರಸಾದ್ ನನಗೆ ಕರೆಮಾಡಿ ನನ್ನ ಶಿಷ್ಯೆ ಒಬ್ಬಳು ದುಷ್ಟರ ದೌರ್ಜನ್ಯಕ್ಕೊಳಗಾಗಿ ದಿಕ್ಕಿಲ್ಲದ ಸ್ಥಿತಿಯಲ್ಲಿ ಜೀವಂತ ನರಕ ಹಿಂಸೆ ಅನುಭವಿಸುತ್ತಿದ್ದಾಳೆ. ದಯವಿಟ್ಟು ಸಹಾಯ ಮಾಡಿ ಎಂದು ಕೋರಿಕೊಂಡರು. ನನ್ನ ಗುರುವಿನ ಮಾತು ಕೇಳಿ, ವಿಷಯ ತಿಳಿದು ಸ್ಥಳಕ್ಕೆ ಹೋಗಿ ನೋಡಿದಾಗ ಭಯವಾಯಿತು. ಘಟನೆಯ ವಿವರ ಪಡೆದಾಗ ಇಡೀ ಪ್ರಕರಣ ಬಯಲಾಯಿತು.
ಹೆಸರು ಸಂಗೀತಾ, ವಯಸ್ಸು 22. ಪಟ್ಟಣದ ಗಾಂದೀನಗರದ 5ನೇ ಅಡ್ಡರಸ್ತೆಯಲ್ಲಿ ವಾಸವಾಗಿದ್ದು, ಗಾರೆಕೆಲಸ ಮಾಡಿಕೊಂಡು ಜೀವನ ಸಾಗಿಸುವ ಕಣ್ಣಪ್ಪ ಒಡೆಯರ್ ಮತ್ತು ಗೋವಿಂದಮ್ಮ ದಂಪತಿಗಳ ಎರಡನೇ ಪುತ್ರಿ ಈಕೆ. ಅಣ್ಣ ರಮೇಶ ಗಾರೆ ಕೆಲಸ ಮಾಡಿಕೊಂಡಿದ್ದು ಮದುವೆಯಾಗಿದೆ. ಅಕ್ಕನಿಗೂ ಮದುವೆ ಆಗಿದ್ದು ತಮಿಳುನಾಡಿನಲ್ಲಿದ್ದಾರೆ.
ಇಲ್ಲಿನ ಸವರ್ೋದಯ ಪ್ರೌಡಶಾಲೆಯಲ್ಲಿ ಹತ್ತನೇ ತರಗತಿಯವರೆಗೆ ಓದಿರುವ ಸಂಗೀತಾ ಎಲ್ಲರಂತೆ ನಗುನಗುತ್ತಾ ತನ್ನದೇ ಬದುಕಿನ ನಾನಾ ಕನಸುಗಳನ್ನು ಕಟ್ಟಿಕೊಂಡವಳು. ಸೆಪ್ಟೆಂಬರ್ 2,2009 ರಂದು ತಂದೆ ತಾಯಿ ಓಪ್ಪಿದ ಮುಂಬಾಯಿಯಲ್ಲಿ ಟೈಲರ್ ಕೆಲಸ ಮಾಡಿಕೊಂಡಿರುವ ವಡಿವೇಲು ಎಂಬುವರಿಗೆ ಈಕೆಯ ವಿವಾಹವಾದಾಗ ನೂರಾರು ಆಸೆಗಳನ್ನು ಇಟ್ಟುಕೊಂಡೇ ಬಾಂಬೆಗೆ ಹಾರಿದ್ದಳು. ಕಷ್ಟ ಪಟ್ಟು ದುಡಿಯುವ ಕಣ್ಣಪ್ಪ ಮತ್ತು ಗೋವಿಂದಮ್ಮ ತನ್ನ ಮಗಳು ಚೆನ್ನಾಗಿರಲಿ ಎಂದು ವರನಿಗೆ 25ಸಾವಿರ ಹಣವನ್ನು, 90 ಗ್ರಾಂ ಬಂಗಾರದ ವಡವೆಯನ್ನು ಮಾಡಿಸಿಕೊಟ್ಟು ಚಿಕ್ಕಂದಿನಿಂದ ಮುದ್ದನಿಂದ ಸಾಕಿದ್ದೇವೆ ನೋಯಿಸದಂತೆ ನೋಡಿಕೊಳ್ಳಪ್ಪ ಎಂದು ಇಬ್ಬರನ್ನೂ ಹರಸಿದ್ದರು.
ಆದರೆ ವಿಧಿಯ ಆಟವೋ, ಆಕೆಯ ಹಣೆ ಬರಹವೋ ಅಥವಾ ಹಣದ ಹಿಂದೆ ಬಿದ್ದ ನರಭಕ್ಷಕರ ಅಟ್ಟಹಾಸವೋ ಎಲ್ಲಾ ಎಳೆಯ ಕನಸುಗಳೆಲ್ಲಾ ಕೇವಲ ನಾಲ್ಕು ತಿಂಗಳಲ್ಲಿ ಕಮರಿಹೋಗಿ ನಿಜವಾದ ನರಕಜೀವನ ದೃಶ್ಯವನ್ನು ಜೀವಂತವಾಗಿ ಕಾಣುವ ದೌಭರ್ಾಗ್ಯ ಅವಳಾದಾಗಿದೆ. ತನ್ನ ಸುಖ, ಸಂತೋಷ, ನಲಿವುಗಳನ್ನು ಕಳೆದುಕೊಂಡ ಆಕೆ ಇಂದು ಕೇವಲ ಒಂದು ಮಾಂಸದ ಮುದ್ದೆಯಂತಾಗಿದ್ದಾಳೆ.
ಕರಣಾಜನಕ ಕಥೆಯನ್ನು ಆಕೆಯಿಂದಲೇ ಕೇಳಿ: ನಾನು ಓದು ಮುಗಿಸಿ ಮನೆಯಲ್ಲಿ ಸಂತೋಷವಾಗಿದ್ದೆ. ಪರಿಚಯಸ್ಥರ ಸಂಬಂಧ ಕುದುರಿ ನನಗೆ ಬಾಂಬೆಯ ಮುನಿಯಮ್ಮ ಎಂಬುವರ ಮಗ ವಡೀವೇಲು ಎಂಬುವರಿಗೆ ಕಳೆದ ವರ್ಷ ಕೊಟ್ಟು ಮದುವೆ ಮಾಡಿದರು. ಅವರು ಆಗ ಬಾಂಬೆಯ ಅಂದೇರಿ ಭಾಗದ ಡಿ.ಎನ್.ನಗರದ ಅಪ್ನಾ ಬಜಾರ್ ಸಮೀಪ ಸ್ವಂತ ಮನೆಯಲ್ಲಿ ವಾಸವಾಗಿದ್ದರು.
ಮದುವೆಯ ಮೊದಲ ದಿನಗಳಲ್ಲಿ ಗಂಡ ನನಗೆ ಸ್ವರ್ಗವನ್ನೇ ತೋರಿಸಿದ. ನಾನೆಂಥ ಸುಖಿ ಎಂದುಕೊಂಡು ನನ್ನ ಮನೆಯ ಕಡೆ ಮರೆತೇ ಬಿಟ್ಟೆ. ಎರಡು ತಿಂಗಳು ಕಳೆಯುತ್ತಿದ್ದಂತೆ ಗಂಡನ ಪ್ರೀತಿ ಕಡಿಮೆಯಾಯಿತು, ಅತ್ತೆ ಮೊದಲಿನಿಂದಲೂ ಸಿಡುಕುತ್ತಿದ್ದಳು, ಗದರುತ್ತಿದ್ದಳು. ವರದಕ್ಷಣೆ ಸಾಲದು, ಇಲ್ಲಿ ಸಾಲ ಇದೆ ಮತ್ತಷ್ಟು ತರಲು ನಿಮ್ಮಪ್ಪನಿಗೆ ಹೇಳು ಎಂದೆಲ್ಲಾ ಒತ್ತಾಯಿಸುತ್ತಿದ್ದರು. ಆಗ ನನಗೆ ಮನೆಯ ಕಡೆ ಮನಸ್ಸು ಬರತೊಡಗಿತು. ಪ್ರತಿನಿತ್ಯಾ ಹಿಂಸೆ ನೀಡುತ್ತಿದ್ದರು. ನಾನು ದೀಪಾವಳಿಗೆ ತಿಪಟೂರಿಗೆ ಬಂದುಹೋದೆ. ಬರಿಕೈಯಲ್ಲಿ ಬಂದಿರುವೆ ಎಂದು ಚೆನ್ನಾಗಿ ಹೊಡೆದರು. ಅಂದಿನಿಂದ ನನ್ನ ನರಕ ಜೀವನ ಶುರುವಾಯಿತು.
ಜನವರಿ 22, 2010ರ ಸಂಜೆ 6ಗಂಟೆ ಸಮಯ ನಾನು ಮಾಮುಲಿನಂತೆ ಮುಖ ತೊಳೆದುಕೊಂಡು, ಬೊಟ್ಟು ಇಟ್ಟಕೊಂಡು ಅಂದವಾಗಿ ಎರಡು ಮೂರು ಬಾರಿ ನೋಡಿಕೊಂಡೆ. ಅಷ್ಟರಲ್ಲಿ ಅತ್ತೆ ಜುಟ್ಟು ಹಿಡಿದು ಅಡಿಗೆ ಮನೆಗೆ ಎಳೆದುಕೊಂಡು ಹೋದರು. ಗಂಡ ಹೀಯಾಳಿಸುತ್ತಾ ಒದೆಯುತ್ತಿದ್ದ ಇಬ್ಬರೂ ಸೇರಿ ಮುಖಕ್ಕೆ ಸೀಮೆ ಎಣ್ಣೆ ಸುರಿದರು. ಮುಂದೆ ಎನಾಗುತ್ತದೆ ಎಂದು ನೋಡುವುದರ ಒಳಗೆ ಬೆಂಕಿಯಿಟ್ಟರು. ಉರಿಯಿಂದ ಕೂಗಿ ಕೊಂಡೆ. ಕತ್ತಲಾಯಿತು.
ಕಣ್ಣು ಬಿಟ್ಟಾಗ ಆಸ್ಪತ್ರೆಯಲ್ಲಿದ್ದೆ. ಸಾಯುವಷ್ಟು ಉರಿ ಮತ್ತು ನೋವು. ಏನೂ ಕಾಣುತ್ತಿಲ್ಲ. ಯಾರೂ ಬರುತ್ತಿಲ್ಲ. ಉಸಿರಾಡಲು ಆಗುತ್ತಿಲ್ಲ... ಬೇಡ ಸಾರ್ ಆ ನೋವು, ಹಿಂಸೆ ಬೇಡ. ಆ ದೃಶ್ಯವೂ ಬೇಡ.
ಎರಡು ತಿಂಗಳು ಆಸ್ಪತ್ರೆಯಲ್ಲಿದ್ದೆ. ನಂತರ ನನಗೆ ತಿಪಟೂರಿಗೆ ಕಳಹಿಸಿದರು. ಮನೆಯಲ್ಲಿ ಏನೇನೋ ಹೇಳಿದರು ಅದ್ಯಾವುದೂ ನನಗೆ ಗೊತ್ತಿಲ್ಲ. ನಾನೇ ಬೆಂಕಿಯಿಟ್ಟುಕೊಂಡೆ ಎಂದು ಹೇಳಿದರು. ನಾನೇ ಪೋಲೀಸರಿಗೆ ಬರೆದುಕೊಟ್ಟದ್ದೇನೆಂದು ನಂಬಿಸಿದರು. ಅದೂ ನನಗೆ ಗೊತ್ತಿಲ್ಲ. ಆದರೆ ಆಗಿರುವುದಿಷ್ಟು ನಾನು ಸುಟ್ಟ ಗಾಯಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ನನ್ನ ಕೈ ಮತ್ತು ಕಾಲು ಬೆರಳಿನ ಮುದ್ರೆ ಪಡೆದು ಅವರೇ ಬರೆದುಕೊಂಡಿದ್ದಾರೆ. ನಾನು ಓದಿದ್ದೇನೆ ಚೆನ್ನಾಗಿರುವಾಗ ಹೇಳಿಕೆ ಪಡೆದು ಸಹಿ ಪಡೆಯಬಹುದಿತ್ತು. ಎಲ್ಲಾ ಮೋಸ. ಹಣದಲ್ಲಿ ನ್ಯಾಯ ಮುಚ್ಚಿಹೋಗಿದೆ. ಅನ್ಯಾಯಕ್ಕೊಳಗಾದ ಹೆಣ್ಣಿಗೆ ಖಂಡಿತ ನ್ಯಾಯ ಸಿಗುವುದಿಲ್ಲ. ನೋಡಿ ನನ್ನ ಸ್ಥಿತಿ ನಾನು ಎನು ಕರ್ಮ ಮಾಡಿ ಹುಟ್ಟಿದ್ದೇನೆಯೇ ? ಎಂದು ಬಿಕ್ಕಳಿಸುತ್ತಾಳೆ.
ಸಮಾಜ ಹೆಣ್ಣನ್ನು ಯಾಕೆ ಈರೀತಿಯಾಗಿ ನೋಡುತ್ತದೆ. ಹೆಣ್ಣಿನಿಂದ ಸಕಲವನ್ನೂ ಪಡೆಯುವ ಪುರುಷ ಪ್ರತಿಯಾಗಿ ನೀಡುವುದು ಇದೇನಾ. ಕನಿಷ್ಟ ಕನಿಕರವೂ ಇಲ್ಲದಂತೆ ವತರ್ಿಸುವುದೇಕೆ. ಅಸಹಾಯಕ ನಿಷ್ಪಾಪಿಗಳನ್ನು ಜೀವಂತ ನರಕಕ್ಕೆ ತಳ್ಳುವುದರಿಂದ ಸಾಧಿಸುವುದಾದರೂ ಏನನ್ನ?
ಯಾರದೋ ಸ್ವಾರ್ಥದ ಸಾಧನೆಗಾಗಿ ತನ್ನದಲ್ಲದ ತಪ್ಪಿಗೆ ಸುಂದರ ಬದುಕನ್ನು ಹಾಳುಮಾಡಿಕೊಂಡ ಸಂಗೀತಾ ನಮ್ಮಂಥೆ ಬದುಕಲಾರಳೇ?
ಅಥವಾ ಆಕೆಯೂ ಎಲ್ಲರಂತೆ ಬದುಕಿಸಲು ನಾವೆಲ್ಲಾ ಏಕೆ ಪ್ರಯತ್ನಿಸಬಾರದು?
( ಕಾನೂನು ಸಮಸ್ಯೆ: ಮುಂಬಾಯಿಯಿಂದ ಬಂದು ತಿಪಟೂರಿನ ತಂದೆ ತಾಯಿಯರ ಜೊತೆ ಪ್ರಾಣಿಯಂತೆ ಬದುಕುತ್ತಾ ನೊಂದಿರುವ ಸಂಗೀತಾ ನ್ಯಾಯಕ್ಕಾಗಿ ಪೋಲೀಸ್ ಮೊರೆ ಹೋಗುವಂತಿಲ್ಲ. ಘಟನೆ ನಮ್ಮ ಸರಹದ್ದಿನಲ್ಲಿ ನಡೆದಿಲ್ಲ. ನ್ಯಾಯ ಬೇಕಾದರೆ ಮುಂಬಾಯಿಯಲ್ಲಿ ಪ್ರಕರಣ ದಾಖಲಿಸಬೇಕು ಎನ್ನುತ್ತಾರೆ ನಮ್ಮ ಕಾನೂನು ರಕ್ಷಕರು.
ಮುಂಬಾಯಿಯಿಗೆ ಹೋಗಿ ಅಲ್ಲಿ ದೂರು ಕೊಟ್ಟು ನ್ಯಾಯ ಕೇಳುವಷ್ಟು ಬುದ್ದಿ, ವಿದ್ಯೆ, ಹಣ, ಮತ್ತು ಭಾಷೆ ಈ ಅಮಾಯಕರಿಗೆ ಗೊತ್ತಿಲ್ಲ. ಅಕಸ್ಮಾತ್ ಅಲ್ಲಿ ದೂರು ಕೊಟ್ಟರೂ ಹಣ ಖಚರ್ು ಮಾಡಿ ಅಲೆದಾಡುವ ಶಕ್ತಿ ಅವರಿಗಿಲ್ಲ. ಹಾಗಾದರೆ ಇದ್ದಕ್ಕೆ ಪರಿಹಾರ ಏನು ಎಂಬುದಕ್ಕೆ ನಮ್ಮ ಕನರ್ಾಟಕ ಪೋಲೀಸ್ನಲ್ಲಿ ಉತ್ತರವಿಲ್ಲ.
ನ್ಯಾಯ ಮತ್ತು ಸಹಾಯ ಕೋರಿ ರಾಜ್ಯಪಾಲರಿಂದ ಹಿಡಿದು ಜಿಲ್ಲಾಧಿಕಾರಿಯವರಗೆ ನಾನಾ ಪತ್ರ ಬರೆದರೂ ಯಾರೂ ಗಮನಿಸಿಲ್ಲ. ಇದೆಂಥಾ ನ್ಯಾಯ? ಇದೆಂಥಾ ವ್ಯವಸ್ಥೆ?)
ಸಂಗೀತಾಳ ಮೋಬೈಲ್ ಸಂಖ್ಯೆ: 7760731907
ಈ ಪುರಷ ಪ್ರಧಾನ ಸಮಾಜ ಕೆಲವರಲ್ಲಿ ಇನ್ನೂ ನರರಾಕ್ಷಸರಿದ್ದಾರೆ ಅನ್ನೋದಕ್ಕೆ ಈ ಘಟನೆಯೂ ಒಂದು ಸಾಕ್ಷಿ. ವರದಕ್ಷಿಣೆ ಎಂಬ ಪೀಡುಗು ಇನ್ನೂ ನಮ್ಮ ಸಮಾಜದಿಂದ ನಾಶವಾಗದೇ ಅದೆಷ್ಟು ಹೆಣ್ಣು ಮಕ್ಕಳು ನಿತ್ಯಾ ನರಕ ಜೀವನ ಅನುಭವಿಸುತ್ತಿದ್ದಾರೆ ಎಂಬುದು ನಮಗೆ ತಿಳಿಯದ ವಿಚಾರ.
ಆದರೆ ನಮ್ಮ ಮುಂದೆ ನಡೆಯುವ ಇಂತಹ ಘಟನೆಯನ್ನು ಎಷ್ಟರ ಮಟ್ಟಿಗೆ ರಕ್ಷಿಸ ಬಲ್ಲೆವು ಎಂದು ನಾವು ಪ್ರಶ್ನಿಸಿಕೊಳ್ಳಬೇಕಾಗುತ್ತದೆ. ಹರೆಯದಲ್ಲಿ ನಾನಾ ಕನಸುಗಳನ್ನು ಹೊತ್ತುಕೊಂಡ 21ರ ಯುವತಿಯೊಬ್ಬಳು ಮದುವೆಯಾದ ಕೇವಲ ನಾಲ್ಕು ತಿಂಗಳಲ್ಲಿ ನಂಬಲಾಗದಂತಹ, ಮನುಷ್ಯ ಮಾತ್ರದವರು ಸಹಿಸಲಾರದಂತಹ ಅಮಾನುಷ ಕೃತ್ಯಕ್ಕೆ ಬಲಿಯಾಗಿ ಇಂದು ಜೀವವಿರುವ ಮೂಳೆ ಮಾಂಸದ ಹೊದಿಕೆಯಾಗಿದ್ದಾಳೆ ಎಂದರೆ ಅದನ್ನು ಆಚಾರವಂತ ಸಮಾಜ ಎಂದು ಹೇಳುವ ನಾವು ನಂಬುವುದಾದರೂ ಹೇಗೆ? ಸಹಿಸಿಕೊಳ್ಳುವುದಾದರೂ ಹೇಗೆ?
ಇಂತಹ ಸತ್ಯ ಘಟನೆ ನನ್ನ ಕಿವಿಗೆ ಬಿದ್ದ ತಕ್ಷಣ ಆ ಧಾರುಣ ಕಥೆಯನ್ನು ಆಕೆಯ ಮಾತುಗಳಲ್ಲಿಯೇ ಹೇಳುವ ಪ್ರಯತ್ನ ಮಾಡಿದ್ದೇನೆ. ಇದನ್ನು ಓದಿ ಪ್ರಕಟಿಸುವ ಕೃಪೆ ಮಾಡಬೇಕು. ಕಾರಣ, ಈಗಿನ ಆಕೆಯ ಪರಿಸ್ಥಿತಿಯಲ್ಲಿ ತಂದೆ ತಾಯಿಯೂ ಸಹ ಆಕೆಯೊಂದಿಗೆ ಜೀವಿಸಲಾರರು. ಆಕೆಗೆ ಚಿಕಿತ್ಸೆ ಬೇಕಾಗಿದೆ. ಕನಿಷ್ಟ ಪ್ಲಾಸ್ಟಿಕ್ ಸರ್ಜರಿ ಮಾಡಿಸಿದರೆ ಮುಖ ಮುಚ್ಚಿಕೊಂಡು ಹೇಗೋ ಬದುಕಿ ಉಳಿಯ ಬಹುದು. ಒಂದು ಸಾಂತ್ವನಕ್ಕಿಂತ ಸಹಾಯ ಮುಖ್ಯ. ಅಯ್ಯೋ ಪಾಪ! ಅನ್ನುವುದಕ್ಕಿಂತ ಕೈಲಾದ ಸಹಕಾರ ನೀಡಿದಲ್ಲಿ ಒಂದು ಅಸಹಾಯಕ ಹೆಣ್ಣಿನ ಕಣ್ಣೀರು ಹೊರೆಸಿದಂತಾಗುತ್ತದೆ. ಎಂದು ನನ್ನ ನಂಬಿಕೆ. ಆತ್ಮಹತ್ಯೆ ಆದ ಮೇಲೆ ಮಾತಾಡುವುದಕ್ಕಿಂತ ಅದು ಆಗದಂತೆ ತಡೆಯುವುದು ಮಾನವ ಧರ್ಮವಲ್ಲವೇ?
-------------------
"ನಾನು ಹುಟ್ಟಿದ್ದೇ ಪಾಪ. ನರರಾಕ್ಷಸರ ಈ ಸಮಾಜದಲ್ಲಿ ಹೆಣ್ಣು ಎಷ್ಟು ನಿಕೃಷ್ಟಳು, ಅಸಹಾಯಕಳು ಎಂಬುದಕ್ಕೆ ನನ್ನ ಮೇಲೆ ನಡೆದಿರುವ ಈ ದೌರ್ಜನ್ಯವೇ ಸಾಕಿ.್ಷ ನನ್ನ ಪೋಟೋ ನೋಡಿದರೆ ನಿಮಗೆ ಅರ್ಥವಾಗ ಬಹುದು ನಾನು ಯಾವ ರೀತಿಯಲ್ಲಿ ನರಕ ಜೀವನ ಅನುಭವಿಸಿದ್ದೇನೆಂದು.." ಎಂದು ಗಂಡನ ಮನೆಯ ಹಿಂಸೆಗೊಳಗಾಗಿ ನೊಂದಿರುವ ಸಂಗೀತಾಳ ಕರಣಾಜನಕ ಕಥೆಯ ಕಣ್ಣೀರ ನುಡಿಗಳು ಇವು.
ನಿಜ ಹೇಳಬೇಕೆಂದರೆ ಆಕೆ ಅತ್ತರೂ ಕಣ್ಣೀರು ಬರದಂತೆ ಹಿಂಗಿ ಹೋಗಿವೆ. ಎಷ್ಟೋ ರಾತ್ರಿಗಳನ್ನು ನಿದ್ದೆಯಿಲ್ಲದೇ ಕಳೆದ ಆಕೆಗೆ ನಿದ್ರೆಯೇ ವೈರಿಯಾಗಿದೆ. ಎಡ ಕಣ್ಣು ಮುಚ್ಚುವಂತಿಲ್ಲ. ತುಟಿ ಸೇರಿಸುವಂತಿಲ್ಲ. ಎರಡು ಕಿವಿಗಳು, ಎಡ ಕಣ್ಣು, ತಲೆ ಕೂದಲು ಬೆಂಕಿಯ ಕೆನ್ನಾಲಿಗೆಗೆ ಕರಗಿ ಹೋಗಿವೆ. ಮುಖ ನೋಡದಂತೆ ವಿಚಿತ್ರವಾಗಿದೆ. ಕತ್ತಿನ ಚರ್ಮ ಕೆಳದುಟಿಗೆ ಅಂಟಿಕೊಂಡು ತುಟಿ ಮುಚ್ಚದಂತಾಗಿದೆ. ಎರಡು ಕೈಗಳು ಸುಟ್ಟು ಅಂಟಿಕೊಂಡಿವೆ.... ಪಾಪಿಗಳು ಆಕೆಯ ಮೇಲೆ ನಡೆಸಿರುವ ದೌರ್ಜನ್ಯಕ್ಕೆ ಇಂದು ಬದುಕಿ ಸತ್ತಂತಿದ್ದಾಳೆ. ಅಂತೂ ನೋಡುವುದಕ್ಕೆ ಆಗದಷ್ಟು ವಿಕಾರವಾಗಿರುವ ದೃಶ್ಯ ಈಕೆಯದು.
ಇಲ್ಲಿನ ನಾನು ಓದಿರುವ ಸವರ್ೋದಯ ಪ್ರೌಡಶಾಲೆಯ ಶಿಕ್ಷಕರಾದ ಎಲ್.ಲಕ್ಷ್ಮೀಪ್ರಸಾದ್ ನನಗೆ ಕರೆಮಾಡಿ ನನ್ನ ಶಿಷ್ಯೆ ಒಬ್ಬಳು ದುಷ್ಟರ ದೌರ್ಜನ್ಯಕ್ಕೊಳಗಾಗಿ ದಿಕ್ಕಿಲ್ಲದ ಸ್ಥಿತಿಯಲ್ಲಿ ಜೀವಂತ ನರಕ ಹಿಂಸೆ ಅನುಭವಿಸುತ್ತಿದ್ದಾಳೆ. ದಯವಿಟ್ಟು ಸಹಾಯ ಮಾಡಿ ಎಂದು ಕೋರಿಕೊಂಡರು. ನನ್ನ ಗುರುವಿನ ಮಾತು ಕೇಳಿ, ವಿಷಯ ತಿಳಿದು ಸ್ಥಳಕ್ಕೆ ಹೋಗಿ ನೋಡಿದಾಗ ಭಯವಾಯಿತು. ಘಟನೆಯ ವಿವರ ಪಡೆದಾಗ ಇಡೀ ಪ್ರಕರಣ ಬಯಲಾಯಿತು.
ಹೆಸರು ಸಂಗೀತಾ, ವಯಸ್ಸು 22. ಪಟ್ಟಣದ ಗಾಂದೀನಗರದ 5ನೇ ಅಡ್ಡರಸ್ತೆಯಲ್ಲಿ ವಾಸವಾಗಿದ್ದು, ಗಾರೆಕೆಲಸ ಮಾಡಿಕೊಂಡು ಜೀವನ ಸಾಗಿಸುವ ಕಣ್ಣಪ್ಪ ಒಡೆಯರ್ ಮತ್ತು ಗೋವಿಂದಮ್ಮ ದಂಪತಿಗಳ ಎರಡನೇ ಪುತ್ರಿ ಈಕೆ. ಅಣ್ಣ ರಮೇಶ ಗಾರೆ ಕೆಲಸ ಮಾಡಿಕೊಂಡಿದ್ದು ಮದುವೆಯಾಗಿದೆ. ಅಕ್ಕನಿಗೂ ಮದುವೆ ಆಗಿದ್ದು ತಮಿಳುನಾಡಿನಲ್ಲಿದ್ದಾರೆ.
ಇಲ್ಲಿನ ಸವರ್ೋದಯ ಪ್ರೌಡಶಾಲೆಯಲ್ಲಿ ಹತ್ತನೇ ತರಗತಿಯವರೆಗೆ ಓದಿರುವ ಸಂಗೀತಾ ಎಲ್ಲರಂತೆ ನಗುನಗುತ್ತಾ ತನ್ನದೇ ಬದುಕಿನ ನಾನಾ ಕನಸುಗಳನ್ನು ಕಟ್ಟಿಕೊಂಡವಳು. ಸೆಪ್ಟೆಂಬರ್ 2,2009 ರಂದು ತಂದೆ ತಾಯಿ ಓಪ್ಪಿದ ಮುಂಬಾಯಿಯಲ್ಲಿ ಟೈಲರ್ ಕೆಲಸ ಮಾಡಿಕೊಂಡಿರುವ ವಡಿವೇಲು ಎಂಬುವರಿಗೆ ಈಕೆಯ ವಿವಾಹವಾದಾಗ ನೂರಾರು ಆಸೆಗಳನ್ನು ಇಟ್ಟುಕೊಂಡೇ ಬಾಂಬೆಗೆ ಹಾರಿದ್ದಳು. ಕಷ್ಟ ಪಟ್ಟು ದುಡಿಯುವ ಕಣ್ಣಪ್ಪ ಮತ್ತು ಗೋವಿಂದಮ್ಮ ತನ್ನ ಮಗಳು ಚೆನ್ನಾಗಿರಲಿ ಎಂದು ವರನಿಗೆ 25ಸಾವಿರ ಹಣವನ್ನು, 90 ಗ್ರಾಂ ಬಂಗಾರದ ವಡವೆಯನ್ನು ಮಾಡಿಸಿಕೊಟ್ಟು ಚಿಕ್ಕಂದಿನಿಂದ ಮುದ್ದನಿಂದ ಸಾಕಿದ್ದೇವೆ ನೋಯಿಸದಂತೆ ನೋಡಿಕೊಳ್ಳಪ್ಪ ಎಂದು ಇಬ್ಬರನ್ನೂ ಹರಸಿದ್ದರು.
ಆದರೆ ವಿಧಿಯ ಆಟವೋ, ಆಕೆಯ ಹಣೆ ಬರಹವೋ ಅಥವಾ ಹಣದ ಹಿಂದೆ ಬಿದ್ದ ನರಭಕ್ಷಕರ ಅಟ್ಟಹಾಸವೋ ಎಲ್ಲಾ ಎಳೆಯ ಕನಸುಗಳೆಲ್ಲಾ ಕೇವಲ ನಾಲ್ಕು ತಿಂಗಳಲ್ಲಿ ಕಮರಿಹೋಗಿ ನಿಜವಾದ ನರಕಜೀವನ ದೃಶ್ಯವನ್ನು ಜೀವಂತವಾಗಿ ಕಾಣುವ ದೌಭರ್ಾಗ್ಯ ಅವಳಾದಾಗಿದೆ. ತನ್ನ ಸುಖ, ಸಂತೋಷ, ನಲಿವುಗಳನ್ನು ಕಳೆದುಕೊಂಡ ಆಕೆ ಇಂದು ಕೇವಲ ಒಂದು ಮಾಂಸದ ಮುದ್ದೆಯಂತಾಗಿದ್ದಾಳೆ.
ಕರಣಾಜನಕ ಕಥೆಯನ್ನು ಆಕೆಯಿಂದಲೇ ಕೇಳಿ: ನಾನು ಓದು ಮುಗಿಸಿ ಮನೆಯಲ್ಲಿ ಸಂತೋಷವಾಗಿದ್ದೆ. ಪರಿಚಯಸ್ಥರ ಸಂಬಂಧ ಕುದುರಿ ನನಗೆ ಬಾಂಬೆಯ ಮುನಿಯಮ್ಮ ಎಂಬುವರ ಮಗ ವಡೀವೇಲು ಎಂಬುವರಿಗೆ ಕಳೆದ ವರ್ಷ ಕೊಟ್ಟು ಮದುವೆ ಮಾಡಿದರು. ಅವರು ಆಗ ಬಾಂಬೆಯ ಅಂದೇರಿ ಭಾಗದ ಡಿ.ಎನ್.ನಗರದ ಅಪ್ನಾ ಬಜಾರ್ ಸಮೀಪ ಸ್ವಂತ ಮನೆಯಲ್ಲಿ ವಾಸವಾಗಿದ್ದರು.
ಮದುವೆಯ ಮೊದಲ ದಿನಗಳಲ್ಲಿ ಗಂಡ ನನಗೆ ಸ್ವರ್ಗವನ್ನೇ ತೋರಿಸಿದ. ನಾನೆಂಥ ಸುಖಿ ಎಂದುಕೊಂಡು ನನ್ನ ಮನೆಯ ಕಡೆ ಮರೆತೇ ಬಿಟ್ಟೆ. ಎರಡು ತಿಂಗಳು ಕಳೆಯುತ್ತಿದ್ದಂತೆ ಗಂಡನ ಪ್ರೀತಿ ಕಡಿಮೆಯಾಯಿತು, ಅತ್ತೆ ಮೊದಲಿನಿಂದಲೂ ಸಿಡುಕುತ್ತಿದ್ದಳು, ಗದರುತ್ತಿದ್ದಳು. ವರದಕ್ಷಣೆ ಸಾಲದು, ಇಲ್ಲಿ ಸಾಲ ಇದೆ ಮತ್ತಷ್ಟು ತರಲು ನಿಮ್ಮಪ್ಪನಿಗೆ ಹೇಳು ಎಂದೆಲ್ಲಾ ಒತ್ತಾಯಿಸುತ್ತಿದ್ದರು. ಆಗ ನನಗೆ ಮನೆಯ ಕಡೆ ಮನಸ್ಸು ಬರತೊಡಗಿತು. ಪ್ರತಿನಿತ್ಯಾ ಹಿಂಸೆ ನೀಡುತ್ತಿದ್ದರು. ನಾನು ದೀಪಾವಳಿಗೆ ತಿಪಟೂರಿಗೆ ಬಂದುಹೋದೆ. ಬರಿಕೈಯಲ್ಲಿ ಬಂದಿರುವೆ ಎಂದು ಚೆನ್ನಾಗಿ ಹೊಡೆದರು. ಅಂದಿನಿಂದ ನನ್ನ ನರಕ ಜೀವನ ಶುರುವಾಯಿತು.
ಜನವರಿ 22, 2010ರ ಸಂಜೆ 6ಗಂಟೆ ಸಮಯ ನಾನು ಮಾಮುಲಿನಂತೆ ಮುಖ ತೊಳೆದುಕೊಂಡು, ಬೊಟ್ಟು ಇಟ್ಟಕೊಂಡು ಅಂದವಾಗಿ ಎರಡು ಮೂರು ಬಾರಿ ನೋಡಿಕೊಂಡೆ. ಅಷ್ಟರಲ್ಲಿ ಅತ್ತೆ ಜುಟ್ಟು ಹಿಡಿದು ಅಡಿಗೆ ಮನೆಗೆ ಎಳೆದುಕೊಂಡು ಹೋದರು. ಗಂಡ ಹೀಯಾಳಿಸುತ್ತಾ ಒದೆಯುತ್ತಿದ್ದ ಇಬ್ಬರೂ ಸೇರಿ ಮುಖಕ್ಕೆ ಸೀಮೆ ಎಣ್ಣೆ ಸುರಿದರು. ಮುಂದೆ ಎನಾಗುತ್ತದೆ ಎಂದು ನೋಡುವುದರ ಒಳಗೆ ಬೆಂಕಿಯಿಟ್ಟರು. ಉರಿಯಿಂದ ಕೂಗಿ ಕೊಂಡೆ. ಕತ್ತಲಾಯಿತು.
ಕಣ್ಣು ಬಿಟ್ಟಾಗ ಆಸ್ಪತ್ರೆಯಲ್ಲಿದ್ದೆ. ಸಾಯುವಷ್ಟು ಉರಿ ಮತ್ತು ನೋವು. ಏನೂ ಕಾಣುತ್ತಿಲ್ಲ. ಯಾರೂ ಬರುತ್ತಿಲ್ಲ. ಉಸಿರಾಡಲು ಆಗುತ್ತಿಲ್ಲ... ಬೇಡ ಸಾರ್ ಆ ನೋವು, ಹಿಂಸೆ ಬೇಡ. ಆ ದೃಶ್ಯವೂ ಬೇಡ.
ಎರಡು ತಿಂಗಳು ಆಸ್ಪತ್ರೆಯಲ್ಲಿದ್ದೆ. ನಂತರ ನನಗೆ ತಿಪಟೂರಿಗೆ ಕಳಹಿಸಿದರು. ಮನೆಯಲ್ಲಿ ಏನೇನೋ ಹೇಳಿದರು ಅದ್ಯಾವುದೂ ನನಗೆ ಗೊತ್ತಿಲ್ಲ. ನಾನೇ ಬೆಂಕಿಯಿಟ್ಟುಕೊಂಡೆ ಎಂದು ಹೇಳಿದರು. ನಾನೇ ಪೋಲೀಸರಿಗೆ ಬರೆದುಕೊಟ್ಟದ್ದೇನೆಂದು ನಂಬಿಸಿದರು. ಅದೂ ನನಗೆ ಗೊತ್ತಿಲ್ಲ. ಆದರೆ ಆಗಿರುವುದಿಷ್ಟು ನಾನು ಸುಟ್ಟ ಗಾಯಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ನನ್ನ ಕೈ ಮತ್ತು ಕಾಲು ಬೆರಳಿನ ಮುದ್ರೆ ಪಡೆದು ಅವರೇ ಬರೆದುಕೊಂಡಿದ್ದಾರೆ. ನಾನು ಓದಿದ್ದೇನೆ ಚೆನ್ನಾಗಿರುವಾಗ ಹೇಳಿಕೆ ಪಡೆದು ಸಹಿ ಪಡೆಯಬಹುದಿತ್ತು. ಎಲ್ಲಾ ಮೋಸ. ಹಣದಲ್ಲಿ ನ್ಯಾಯ ಮುಚ್ಚಿಹೋಗಿದೆ. ಅನ್ಯಾಯಕ್ಕೊಳಗಾದ ಹೆಣ್ಣಿಗೆ ಖಂಡಿತ ನ್ಯಾಯ ಸಿಗುವುದಿಲ್ಲ. ನೋಡಿ ನನ್ನ ಸ್ಥಿತಿ ನಾನು ಎನು ಕರ್ಮ ಮಾಡಿ ಹುಟ್ಟಿದ್ದೇನೆಯೇ ? ಎಂದು ಬಿಕ್ಕಳಿಸುತ್ತಾಳೆ.
ಸಮಾಜ ಹೆಣ್ಣನ್ನು ಯಾಕೆ ಈರೀತಿಯಾಗಿ ನೋಡುತ್ತದೆ. ಹೆಣ್ಣಿನಿಂದ ಸಕಲವನ್ನೂ ಪಡೆಯುವ ಪುರುಷ ಪ್ರತಿಯಾಗಿ ನೀಡುವುದು ಇದೇನಾ. ಕನಿಷ್ಟ ಕನಿಕರವೂ ಇಲ್ಲದಂತೆ ವತರ್ಿಸುವುದೇಕೆ. ಅಸಹಾಯಕ ನಿಷ್ಪಾಪಿಗಳನ್ನು ಜೀವಂತ ನರಕಕ್ಕೆ ತಳ್ಳುವುದರಿಂದ ಸಾಧಿಸುವುದಾದರೂ ಏನನ್ನ?
ಯಾರದೋ ಸ್ವಾರ್ಥದ ಸಾಧನೆಗಾಗಿ ತನ್ನದಲ್ಲದ ತಪ್ಪಿಗೆ ಸುಂದರ ಬದುಕನ್ನು ಹಾಳುಮಾಡಿಕೊಂಡ ಸಂಗೀತಾ ನಮ್ಮಂಥೆ ಬದುಕಲಾರಳೇ?
ಅಥವಾ ಆಕೆಯೂ ಎಲ್ಲರಂತೆ ಬದುಕಿಸಲು ನಾವೆಲ್ಲಾ ಏಕೆ ಪ್ರಯತ್ನಿಸಬಾರದು?
( ಕಾನೂನು ಸಮಸ್ಯೆ: ಮುಂಬಾಯಿಯಿಂದ ಬಂದು ತಿಪಟೂರಿನ ತಂದೆ ತಾಯಿಯರ ಜೊತೆ ಪ್ರಾಣಿಯಂತೆ ಬದುಕುತ್ತಾ ನೊಂದಿರುವ ಸಂಗೀತಾ ನ್ಯಾಯಕ್ಕಾಗಿ ಪೋಲೀಸ್ ಮೊರೆ ಹೋಗುವಂತಿಲ್ಲ. ಘಟನೆ ನಮ್ಮ ಸರಹದ್ದಿನಲ್ಲಿ ನಡೆದಿಲ್ಲ. ನ್ಯಾಯ ಬೇಕಾದರೆ ಮುಂಬಾಯಿಯಲ್ಲಿ ಪ್ರಕರಣ ದಾಖಲಿಸಬೇಕು ಎನ್ನುತ್ತಾರೆ ನಮ್ಮ ಕಾನೂನು ರಕ್ಷಕರು.
ಮುಂಬಾಯಿಯಿಗೆ ಹೋಗಿ ಅಲ್ಲಿ ದೂರು ಕೊಟ್ಟು ನ್ಯಾಯ ಕೇಳುವಷ್ಟು ಬುದ್ದಿ, ವಿದ್ಯೆ, ಹಣ, ಮತ್ತು ಭಾಷೆ ಈ ಅಮಾಯಕರಿಗೆ ಗೊತ್ತಿಲ್ಲ. ಅಕಸ್ಮಾತ್ ಅಲ್ಲಿ ದೂರು ಕೊಟ್ಟರೂ ಹಣ ಖಚರ್ು ಮಾಡಿ ಅಲೆದಾಡುವ ಶಕ್ತಿ ಅವರಿಗಿಲ್ಲ. ಹಾಗಾದರೆ ಇದ್ದಕ್ಕೆ ಪರಿಹಾರ ಏನು ಎಂಬುದಕ್ಕೆ ನಮ್ಮ ಕನರ್ಾಟಕ ಪೋಲೀಸ್ನಲ್ಲಿ ಉತ್ತರವಿಲ್ಲ.
ನ್ಯಾಯ ಮತ್ತು ಸಹಾಯ ಕೋರಿ ರಾಜ್ಯಪಾಲರಿಂದ ಹಿಡಿದು ಜಿಲ್ಲಾಧಿಕಾರಿಯವರಗೆ ನಾನಾ ಪತ್ರ ಬರೆದರೂ ಯಾರೂ ಗಮನಿಸಿಲ್ಲ. ಇದೆಂಥಾ ನ್ಯಾಯ? ಇದೆಂಥಾ ವ್ಯವಸ್ಥೆ?)
ಸಂಗೀತಾಳ ಮೋಬೈಲ್ ಸಂಖ್ಯೆ: 7760731907